Get Updates
Get notified of breaking news, exclusive insights, and must-see stories!

ವಿದೇಶದಲ್ಲಿ ದಾವಣಗೆರೆ ಟೆಕ್ಕಿ ದಂಪತಿ ಅಸ್ವಾಭಾವಿಕ ಸಾವು: ಡೆತ್‌ ನೋಟ್ ಪತ್ತೆ

ದಾವಣಗೆರೆ, ಆಗಸ್ಟ್‌ 25: ಅಮೆರಿಕಾದ ಮೇರಿ ಲ್ಯಾಂಡ್ ರಾಜ್ಯದ ಬಾಲ್ತಿಮೇರ್‌ನಲ್ಲಿ ದಾವಣಗೆರೆ ಮೂಲದ ಮೂವರ ಸಾವಿಗೆ ಕಾರಣ ಏನೆಂಬುದು ದಿನ ಕಳೆದಂತೆ ಸ್ಪಷ್ಟವಾಗತೊಡಗಿದೆ. ಬಾಲ್ಟಿಮೋರ್ ಕೌಂಟಿ ಪೊಲೀಸರು ಸದ್ಯಕ್ಕೆ ಕುಟುಂಬಸ್ಥರಿಗೆ ನೀಡಿರುವ ಮಾಹಿತಿ ಪ್ರಕಾರ ಮಾನಸಿಕ ಖಿನ್ನತೆಯಿಂದ ಯೋಗೇಶ್ ಹೊನ್ನಾಳ ಬಳಲುತ್ತಿದ್ದರು.

ಇದೇ ಕಾರಣಕ್ಕೆ ಪತ್ನಿ ಪ್ರತಿಭಾ ಹೊನ್ನಾಳ ಹಾಗೂ ಪುತ್ರ ಯಶ್ ಹೊನ್ನಾಳನಿಗೆ ಶೂಟ್ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವುದಾಗಿ ಸದ್ಯಕ್ಕೆ ಮಾಹಿತಿ ನೀಡಿದ್ದಾರೆ. ಇನ್ನು ಸಂಬಂಧಿಕರೊಬ್ಬರು ಬಾಲ್ತಿಮೇರ್‌ಗೆ ಹೋದರೂ ಬಾಲ್ಟಿಮೋರ್ ಪೊಲೀಸರು ಮಾತ್ರ ಯಾವುದೇ ನಿಖರತೆ ಕಾರಣ ಹೇಳಿಲ್ಲ. ಈ ಹಿನ್ನೆಲೆಯಲ್ಲಿ ಯೋಗೇಶ್ ಹೊನ್ನಾಳ ತಾಯಿ ಶೋಭಾ ಹೊನ್ನಾಳ ಹಾಗೂ ಅವರ ಸಹೋದರ ನಿನ್ನೆ ಚೆನ್ನೈನಿಂದ ಅಮೆರಿಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸದ್ಯಕ್ಕೆ ಅಲ್ಲಿಗೆ ಹೋಗಿ ತಲುಪಿದ್ದು, ಪೊಲೀಸರು ಸ್ಪಷ್ಟ ಮಾಹಿತಿ ಕೊಡಲಿದ್ದಾರೆ.

couple-and-son-found-died-in-america-case

ಅಮೆರಿಕಾ ಕಾನೂನಿನ ಪ್ರಕಾರ ಸಂಬಂಧಿಕರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ. ತಂದೆ, ತಾಯಿ, ಸಹೋದರ ಸೇರಿದಂತೆ ಕುಟುಂಬಸ್ಥರಿಗೆ ಸ್ಪಷ್ಟ ಮಾಹಿತಿ ನೀಡಲಾಗುತ್ತದೆ. ಈ ಕಾರಣಕ್ಕಾಗಿ ಚೆನ್ನೈನಿಂದ ಯೋಗೇಶ್ ಹೊನ್ನಾಳ ತಾಯಿ ಹಾಗೂ ಅವರ ಸಹೋದರ ಪ್ರಯಾಣ ಬೆಳೆಸಿರುವುದಾಗಿ ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.

ಡೆತ್ ನೋಟ್ ಪತ್ತೆ

ಬಾಲ್ಟಿಮೋರ್ ಕೌಂಟಿ ಪೊಲೀಸರು ಡೆತ್ ನೋಟ್ ವಶಪಡಿಸಿಕೊಂಡಿದ್ದಾರೆ. ಸಂಬಂಧಿಕರಿಗೆ ಇದನ್ನು ಕೊಟ್ಟಿಲ್ಲ. ಕುಟುಂಬಸ್ಥರಿಗೆ ಮಾತ್ರ ಹಸ್ತಾಂತರ ಮಾಡುವ ಸಾಧ್ಯತೆ ಇದೆ. ಮನೆಯಲ್ಲಿ ಮೂವರ ಪಾಸ್ ಪೋರ್ಟ್, ಬೆಂಗಳೂರಿನಲ್ಲಿ ಖರೀದಿಸಿದ್ದ ಫ್ಲ್ಯಾಟ್ ಸೇರಿದಂತೆ ಇತರೆ ಆಸ್ತಿಗೆ ಸಂಬಂಧಿತ ದಾಖಲೆಗಳು, ಮನೆಯಲ್ಲಿನ ಪರಿಕರಗಳು ಸೇರಿದಂತೆ ಎಲ್ಲವನ್ನೂ ಹಸ್ತಾಂತರ ಮಾಡಲಿದ್ದಾರೆ. ಡೆತ್ ನೋಟ್‌ನಲ್ಲಿ ಏನೆಲ್ಲಾ ಬರೆಯಲಾಗಿದೆ ಎಂಬುದರ ಬಗ್ಗೆ ಮಾಹಿತಿ ಸ್ಪಷ್ಟ ಆಗಿಲ್ಲ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಯೋಗೇಶ್ ಹೊನ್ನಾಳ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬುದು ಗೊತ್ತಾಗಿದೆ.

couple-and-son-found-died-in-america-case

ಎರಡೂ ಕುಟುಂಬದವರು ಹೇಳುವ ಪ್ರಕಾರ ಪತಿ ಹಾಗೂ ಪತ್ನಿ ನಡುವೆ ಯಾವುದೇ ಕಲಹ ಇರಲಿಲ್ಲ. ಇಬ್ಬರೂ ಅನೋನ್ಯವಾಗಿದ್ದರು. ಕುಟುಂಬದ ಅಂದ ಮೇಲೆ ಸಣ್ಣಪುಟ್ಟ ಗಲಾಟೆ ಆಗಿರಬಹುದು. ಇಂಥ ಅನಾಹುತ ಆಗುವಷ್ಟು ಯಾವುದೇ ತೊಂದರೆ ಇರಲಿಲ್ಲ. ಆದರೆ, ಅಲ್ಲಿ ಏನಾಯ್ತು ಎನ್ನುವುದು ಇಲ್ಲಿ ಕುಳಿತು ಹೇಳಲು ಆಗದು. ಡೆತ್ ನೋಟ್ ನಲ್ಲೇನಿದೆ? ಮಾನಸಿಕ ಖಿನ್ನತೆಗೆ ಒಳಗಾಗುವಂಥದ್ದು ಏನಾಗಿತ್ತು..? ಬೇರೆ ಯಾವ ಕಾರಣ ಇರಬಹುದು ಎಂಬುದು ಅಮೆರಿಕಾ ಪೊಲೀಸರು ಸ್ಪಷ್ಟಪಡಿಸಿದ ಬಳಿಕ ಗೊತ್ತಾಗಲಿದೆ. ಅದೇ ರೀತಿಯಲ್ಲಿ ಯೋಗೇಶ್ ಹೊನ್ನಾಳ ತಾಯಿ ಕೂಡ ಅಲ್ಲಿಗೆ ಹೋಗಿದ್ದರೆ. ಇಲ್ಲಿಗೆ ಬಂದ ಬಳಿಕ ಸಾವಿಗೆ ಕಾರಣವೇನು ಎಂಬುದು ಸ್ಪಷ್ಟವಾಗುವುದಂತೂ ನಿಜ.

ಮೃತದೇಹ ಹಸ್ತಾಂತರಕ್ಕೆ ತಯಾರು

ಯೋಗೇಶ್ ಹೊನ್ನಾಳ, ಪ್ರತಿಭಾ ಹೊನ್ನಾಳ, ಯಶ್ ಹೊನ್ನಾಳ ಮೃತದೇಹಗಳನ್ನು ಅಮೆರಿಕಾದಿಂದ ದಾವಣಗೆರೆಗೆ ಕರೆತರಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯೋಗೇಶ್ ಹೊನ್ನಾಳ ತಾಯಿ ಹಾಗೂ ಸಹೋದರ ಅಮೆರಿಕಾಕ್ಕೆ ಪ್ರಯಾಣ ಬೆಳೆಸಿರುವುದರಿಂದ ಅಮೆರಿಕಾದಲ್ಲಿನ ಕಾನೂನು ಹಾಗೂ ನಿಯಮದಂತೆ ಮೃತದೇಹಗಳ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಅಮೆರಿಕಾದಲ್ಲಿರುವ ಯೋಗೇಶ್ ಹೊನ್ನಾಳ ಸಂಬಂಧಿಕರು ಕೊಟ್ಟಿರುವ ಮಾಹಿತಿ ಪ್ರಕಾರ ಸೋಮವಾರ ಅಥವಾ ಮಂಗಳವಾರ ಮೃತದೇಹಗಳನ್ನು ತರಲಾಗುವುದು. ಇಲ್ಲದಿದ್ದರೆ ಸ್ವಲ್ಪ ತಡವಾದರೂ ಆಗಬಹುದು. ಶೋಭಾ ಹಾಗೂ ಅವರ ಪುತ್ರ ತೆರಳಿರುವುದರಿಂದ ಭಾರತಕ್ಕೆ ಮೃತದೇಹಗಳನ್ನು ತರುವುದು ಖಚಿತ ಎಂದು ಹೇಳಲಾಗುತ್ತಿದೆ.

ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದ ಜಿ. ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರು ಮೃತದೇಹಗಳನ್ನು ತರಲು ಎಲ್ಲಾ ರೀತಿಯ ಪ್ರಯತ್ನ ಹಾಗೂ ಸಹಕಾರ ನೀಡಿದ್ದು, ಐದಾರು ದಿನಗಳೊಳಗೆ ಮೃತದೇಹಗಳು ದಾವಣಗೆರೆ ತರಲಾಗುತ್ತಿದೆ.

ಅಮೆರಿಕಾದಲ್ಲಿ ಮೂವರ ಸಾವಿನ ಸುದ್ದಿ ತಿಳಿದ ದಿನದಿಂದಲೂ ಕುಟುಂಬಸ್ಥರು ಹಾಗೂ ಸಂಬಂಧಿಕರು ಮೃತದೇಹಗಳನ್ನು ದಾವಣಗೆರೆಗೆ ತರಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ್ದ ಸಿದ್ದರಾಮಯ್ಯ ಅವರು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಒಟ್ಟಾರೆ ಈಗ ಮೃತದೇಹಗಳನ್ನು ದಾವಣಗೆರೆಗೆ ತರಲಾಗುತ್ತಿದ್ದು, ಸಾವಿಗೆ ಮಾನಸಿಕ ಖಿನ್ನತೆ ಎಂದು ಹೇಳಲಾಗುತ್ತಿದೆಯಾದರೂ ಮಾನಸಿಕ ಖಿನ್ನತೆಗೆ ಯಾಕೆ ಒಳಗಾಗಿದ್ದರು ಎಂಬುದು ಬಹಿರಂಗವಾಗಬೇಕಿದೆ ಅಷ್ಟೇ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+