ದಾವಣಗೆರೆಯಲ್ಲಿ ಕ್ಯಾರೆಟ್, ಬೀದರ್‌ನಲ್ಲಿ ಕಲ್ಲಂಗಡಿ ನಾಶ

ದಾವಣಗೆರೆ ಮತ್ತು ಬೀದರ್, ಮೇ 16: ಲಾಕ್ ಡೌನ್ ಹಿನ್ನೆಲೆ ಬೆಳೆಗಳಿಗೆ ಸೂಕ್ತ ಬೆಲೆ ಸಿಗದ ಕಾರಣ ದಾವಣಗೆರೆಯಲ್ಲಿ ರೈತ ಕ್ಯಾರೆಟ್ ಬೆಳೆ ನಾಶ ಮಾಡಿದ್ದಾರೆ.

Recommended Video

      ಮೋದಿ ವಿರುದ್ಧ ಚಿಕ್ಕ ಮಗು ಮಾತಾಡಿದ್ದು ಕೇಳಿ ಎಲ್ಲರೂ ಶಾಕ್..! | Narendra Modi

      ಟ್ಯಾಕ್ಟರ್ ನಿಂದ ಇಡಿ ಬೆಳೆ ನಾಶ ಮಾಡಿ, ಕ್ಯಾರೆಟ್ ಮೇಯಲು ಕುರಿ ಹಾಗೂ ಮೇಕೆ ಜಮೀನು ರೈತ ಬಿಟ್ಟಿದ್ದಾರೆ. ಭೈರನಾಯಕನಹಳ್ಳಿಯ ಚೌಡಪ್ಪ ನಷ್ಟ ಅನುಭವಿಸಿದ ರೈತನಾಗಿದ್ದಾರೆ.

      ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಭೈರನಾಯಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಳ್ಳಾರಿ, ದಾವಣಗೆರೆಗೆ ಕ್ಯಾರೆಟ್ ಮಾರಾಟ ಮಾಡಲು ಹೋಗಿ ರೈತನಿಗೆ ನಷ್ಟವಾಗಿದೆ. ಹೀಗಾಗಿ, ಮನೆಯಲ್ಲಿದ್ದ ರಾಗಿ‌ ಮಾರಾಟ ಮಾಡಿ ವಾಹನ ಬಾಡಿಗೆ ಕೊಟ್ಟಿದ್ದಾರೆ.

      Davanagere And Bidar Farmers Destroyed The Crop

      ನಾಲ್ಕು ಎಕರೆ ಪ್ರದೇಶದಲ್ಲಿ ಕ್ಯಾರೆಟ್ ನಾಶ ಮಾಡಿದ್ದು, ಅದನ್ನು ಬೆಳೆಯಲು ಸುಮಾರು ಒಂದು ಲಕ್ಷ ಐವತ್ತು ಸಾವಿರ ವೆಚ್ಚ ಮಾಡಲಾಗಿತ್ತು.

      ಇನ್ನು, ಬೀದರ್‌ನಲ್ಲಿ ಲಾಕ್ ಡೌನ್ ಹಿನ್ನಲೆ ಕಲ್ಲಂಗಡಿ ಬೆಳೆದ ರೈತನಿಗೆ ಭಾರಿ‌ ನಷ್ಟವಾಗಿದೆ. ನಷ್ಟ‌ ಪರಿಹಾರ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪಗೆ ತಾಲೂಕಿನ ಬಸವವಾಡಿ ಗ್ರಾಮದ ರೈತ ಲಕ್ಷ್ಮಣ ಮನವಿ ಮಾಡಿದ್ದಾರೆ.

      ಎರಡುವರೆ ಎಕರೆ ಪ್ರದೇಶದಲ್ಲಿ ಬೆಳೆದ‌ ಕಲ್ಲಂಗಡಿ ಮಾರುಕಟ್ಟೆ ಇಲ್ಲದೆ ಹೊಲದಲ್ಲೆ ಗಬ್ಬೆದ್ದು‌ ನಾರುತ್ತಿದೆ. ಎರಡುವರೆ ಲಕ್ಷ ಸಾಲ‌ ಮಾಡಿ ಬೆಳೆದ ಕಲ್ಲಂಗಡಿ ಮಣ್ಣು ಪಾಲಾಗಿದೆ. ಇಲ್ಲಿಯವರೆಗೆ ಹೊಲಕ್ಕೆ ಸೌಜನ್ಯಕ್ಕೂ ಭೇಟಿ ನೀಡಿದ‌ ತೋಟಗಾರಿಕಾ ಇಲಾಖೆ ಅಧಿಕಾರಿ ಬಗ್ಗೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+