ದಾವಣಗೆರೆಯಲ್ಲಿ ಮಾಟ ಮಂತ್ರ: ಬಿಜೆಪಿ ಮುಖಂಡನ ಕುಟುಂಬಕ್ಕೆ ಆಘಾತ
ದಾವಣಗೆರೆ, ನವೆಂಬರ್ 6: ಮನೆಯಲ್ಲಿ ರಾತ್ರಿ ನೆಮ್ಮದಿಯಿಂದ ಮಲಗಿ, ಪ್ರತಿನಿತ್ಯದಂತೆ ಬೆಳಗ್ಗೆ ಎದ್ದು ಹೊರ ಬಂದಾಗ ಆಘಾತವೊಂದು ಕಾದಿತ್ತು. ಮನೆಯವರು ಹೊರಬಂದು ನೋಡಿದ ನಂತರ ಗಾಬರಿಗೊಳಗಾಗಿದ್ದರು.
ಆಧುನಿಕ ಕಾಲದಲ್ಲಿ ಮಾಟ-ಮಂತ್ರ ಎನ್ನುವ ಘಟನೆಗಳು ನಡೆಯುತ್ತಲೇ ಇವೆ. ಇದಕ್ಕೆ ನಿದರ್ಶನ ಎನ್ನುವಂತೆ, ದಾವಣಗೆರೆಯ ಜಯನಗರದಲ್ಲಿರುವ ಬಿಜೆಪಿ ಮುಖಂಡ ನಿಂಗರಾಜ್ ಎನ್ನುವವರ ಮನೆ ಮುಂಭಾಗ ಮಾಟ-ಮಂತ್ರ ನಡೆದಿದೆ.
ಗುರುವಾರ ರಾತ್ರಿ ನಿಂಗರಾಜ್ ಹಾಗೂ ಆತನ ಕುಟುಂಬದವರು ಊಟ ಮಾಡಿ ಮಲಗಿದ್ದು, ಬೆಳಗ್ಗೆ ಎದ್ದು ಮನೆಯಿಂದ ಹೊರ ಬಂದರೆ ಬಾಗಿಲ ಬಳಿ ರಕ್ತದ ಓಕಳಿಯಾಗಿತ್ತು, ಇದರಿಂದ ಭಯಭೀತರಾದ ನಿಂಗರಾಜ್ ಪತ್ನಿ, ಮನೆಯವರಿಗೆಲ್ಲ ವಿಷಯ ತಿಳಿಸಿದ್ದು, ನಂತರ ಕೆಟಿಜೆ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಿಜೆಪಿ ಮುಖಂಡನ ಮನೆಯ ಮುಂಭಾಗದಲ್ಲಿ ರಕ್ತದ ಓಕಳಿ, ರಕ್ತವನ್ನು ನೋಡಿ ಮನೆಯವರು ಭಯಭೀತರಾಗಿದ್ದಾರೆ. ನಂತರ ಇಡೀ ಏರಿಯಾವನ್ನು ಪೊಲೀಸರು ಹಾಗೂ ಶ್ವಾನದಳ ತನಿಖೆ ನಡೆಸಿದರು.
ನಿಂಗರಾಜ್ ಅವರು ಬಿಜೆಪಿ ಹಾಗೂ ಡಿಎಸ್ಎಸ್ ಮುಂಖಂಡನಾಗಿದ್ದು, ರಾಜಕೀಯವಾಗಿ ಸಾಕಷ್ಟು ವೈರಿಗಳು ಕೂಡ ಇದ್ದಾರೆ. ಇದರಿಂದ ಯಾರೋ ತಮಗೆ ಆಗದವರು ಹೀಗೆ ಮಾಟ-ಮಂತ್ರ ಮಾಡಿದ್ದಾರೆ ಎನ್ನುವ ಅರೋಪ ಮಾಡುತ್ತಿದ್ದಾರೆ.
ದಾವಣಗೆರೆಯ ಕೆಟಿಜೆ ನಗರ ಪೊಲೀಸರು ಹಾಗೂ ಶ್ವಾನದಳದದಿಂದ ಇಡೀ ಏರಿಯಾವನ್ನು ತಪಾಸಣೆ ನಡೆಸಿದ್ದು, ನಿಂಗರಾಜ್ ಮನೆಯ ಸುತ್ತಾಮುತ್ತಲಿರುವ ಸಿಸಿ ಕ್ಯಾಮರಾಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
Recommended Video
ಯಾವ ಕಾರಣಕ್ಕೆ ತಮ್ಮ ಮೇಲೆ ಇಷ್ಟು ದ್ವೇಷ ಎನ್ನುವುದು ಕೂಡ ನಿಂಗರಾಜ್ ಗೆ ತಿಳಿಯದಾಗಿದ್ದು, ಒಟ್ಟಾರೆ ಈಗಿನ ಅಧುನಿಕ ಕಾಲದಲ್ಲೂ ಹೀಗೆ ಮಾಟ, ಮಂತ್ರ ಎನ್ನುವ ಘಟನೆಗಳು ನಡೆಯುತ್ತಲೇ ಇದೆ. ಪೊಲೀಸರು ತನಿಖೆ ನಡೆಸಿದ ನಂತರ ಸತ್ಯಾಸತ್ಯಾತೆ ಹೊರ ಬರಬೇಕಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications