ಮಳೆಗಾಲದಲ್ಲಿ ಹಲಸಿನ ಹಣ್ಣು ಸೇವಿಸುವುದರಿಂದ ಉಪಯೋಗವಿದೆಯಾ?
ಚಿತ್ರದುರ್ಗ: ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾದ ನಂತರದಲ್ಲಿ ಹೆಚ್ಚಾಗಿ ಸಿಗುವ ಹಣ್ಣು ಎಂದರೆ ಹಲಸಿನ ಹಣ್ಣು. ಮೇ, ಜೂನ್, ಜುಲೈ ತಿಂಗಳಲ್ಲಿ ಮಾರುಕಟ್ಟೆಗಳಲ್ಲಿ ಹಣ್ಣು ಮಾರಾಟವಾಗುತ್ತದೆ. ಮಾರುಕಟ್ಟೆ ಮತ್ತು ರಸ್ತೆಯ ಬದಿಯಲ್ಲಿ ಗಮ ಗಮಿಸುವ ಮೂಲಕ ತನ್ನ ಸುವಾಸನೆಯಿಂದ ಗ್ರಾಹಕರನ್ನು ಕೈ ಬಿಸಿ ಕರೆಯುತ್ತದೆ.
ಒಂದು ಹಲಸಿನ ಮೂಡೆಗೆ 30, 50, 80,100, 150 ರೂನಂತೆ ಮಾರಾಟ ಮಾಡಲಾಗುತ್ತಿದೆ. ಇನ್ನು ಚಿಲ್ಲರೆ ವ್ಯಾಪಾರಿಗಳು ಹಲಸಿನ ಹಣ್ಣನ್ನು ಕೊಯ್ದು, 3 ರೂಪಾಯಿಗೆ ಒಂದು ತೊಳೆಯಂತೆ, 10 ರೂಪಾಯಿ 3/4 ತೊಳೆ ಮಾರಾಟ ಮಾಡುತ್ತಿದ್ದಾರೆ. ಚಿತ್ರದುರ್ಗ ನಗರ, ಹಿರಿಯೂರು, ಚಳ್ಳಕೆರೆ ಮತ್ತಿತರರ ಕಡೆಗಳಲ್ಲಿ ಹಲಸಿನ ಹಣ್ಣಿನ ಭರ್ಜರಿ ವ್ಯಾಪಾರ ನಡೆಯುತ್ತಿದೆ ಎನ್ನಲಾಗಿದೆ.
ಹಲಸಿನ ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ. ಮನುಷ್ಯನ ಹಲವು ಕಾಯಿಲೆಗಳಿಗೆ ಬೇಕಾಗಿರುವ ಮದ್ದಿನ ಗುಣವನ್ನು ಹಲಸಿನ ಹಣ್ಣು ನಾಟಿ ಔಷಧಿ ಎಂದರೆ ತಪ್ಪಾಗಲಾರದು. ಈ ಹಣ್ಣಿನಲ್ಲಿ ಹೇರಳವಾಗಿರುವ ಜೀವಸತ್ವಗಳು ದೇಹಕ್ಕೆ ತುಂಬಾ ಒಳ್ಳೆಯದು.

ರೋಗಗಳಿಗೆ ಮದ್ದು
ರೋಗಗಳಿಗೆ ಮದ್ದು: ಹಲಸಿನ ಹಣ್ಣಿನಲ್ಲಿ ವಿಟಮಿನ್ 'ಎ' ಸಮೃದ್ಧವಾಗಿದೆ. ಈ ಹಣ್ಣು ತಿನ್ನುವುದರಿಂದ ಕಣ್ಣಿನ ಪೊರೆಯಂತಹ ಸಮಸ್ಯೆಗಳಿಗೆ ಉತ್ತಮವಾದುದಾಗಿದೆ.
ಮನುಷ್ಯನ ದೇಹದಲ್ಲಿ ಕಡಿಮೆ ಕೊಬ್ಬು, ಹೆಚ್ಚಿನ ಕ್ಯಾಲೋರಿ ಹೊಂದಿರುವ ಆಹಾರಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಲಸಿನ ಹಣ್ಣಿನಲ್ಲಿ ಫೈಬರ್ ಅಧಿಕವಾಗಿರುತ್ತದೆ. ಹೀಗಾಗಿ, ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಈ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ.

ಮೂಳೆಗಳನ್ನು ಬಲಪಡಿಸಲು ಸಹಕಾರಿ
ಈ ಹಣ್ಣಿನಲ್ಲಿ ಅಧಿಕ ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಈ ವಿಟಮಿನ್ ಆಹಾರ ತಿಂದರೆ ಮೂಳೆಗಳು ಗಟ್ಟಿಯಾಗುತ್ತದೆ.
ಹಲಸಿನ ಹಣ್ಣು ಅಲ್ಸರೇಟಿವ್, ಆಂಟಿ-ಸೆಪ್ಟಿಕ್, ಉರಿಯೂತ ಮತ್ತು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಡಯಾಬಿಟೀಸ್ ಕಾಯಿಲೆಯನ್ನು ಹಲಸಿನಹಣ್ಣು ಕಡಿಮೆ
ಇದಲ್ಲದೆ ಡಯಾಬಿಟೀಸ್ ಕಾಯಿಲೆಯನ್ನು ಹಲಸಿನಹಣ್ಣು ಕಡಿಮೆಮಾಡುತ್ತದೆ. ಇದರ ಜೊತೆಗೆ ಹೃದಯ ಸಮಸ್ಯೆ, ರಕ್ತದೊತ್ತಡ ಇರುವವರು ಈ ಹಣ್ಣನ್ನು ಸೇವಿಸಿದರೆ ಉತ್ತಮ.
ಮೂಳೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಚರ್ಮದ ಮೇಳೆ ಆಗುವ ಕಪ್ಪು ಕಲೆಗಳನ್ನು ಹೊಡೆದೋಡಿಸುತ್ತದೆ.
Recommended Video

ಹಣ್ಣಿನ ಬೀಜದಿಂದ ಸಾಂಬಾರಿಗೆ ಉಪಯುಕ್ತ
ಬೀಜದಿಂದ ಸಾಂಬಾರು : ಹಲಸಿನ ಹಣ್ಣಿನ ಬೀಜದಿಂದ ಸಾಂಬಾರಿಗೆ ಉಪಯೋಗಿಸುತ್ತಾರೆ. ಬೀಜವನ್ನು ಕುಟ್ಟಿ ಹೋಳು ಮಾಡಿ, ಕಡ್ಲೆ ಬೇಳೆ ಹಾಕಿ ಸಾಂಬಾರ್ ಮಾಡಿ ಮುದ್ದೆಯೊಂದಿಗೆ ಸವಿದರೇ ಪದೇ ಪದೇ ಸವಿಯಬೇಕು ಅನ್ನಿಸುತ್ತದೆ. ಜೊತೆಗೆ ಹಲಸಿನ ದೋಸೆ, ಚಿಪ್ಸ್, ಹಲಸಿನ ಕಡುಬು ತಯಾರಿಸಬಹುದು. ಇದಲ್ಲದೆ ರಸಾಯನ ಮಾಡಿ ಚಪಾತಿಯೊಂದಿಗೆ ಸವಿಯಬಹುದು.
ಮನುಷ್ಯನಲ್ಲದೆ ಕರಡಿಗೆ ಬಹಳ ಇಷ್ಟವಾದ ಹಲಸಿನ ಹಣ್ಣಾಗಿದೆ. ಕಾಡಿನಲ್ಲಿ ಕರಡಿ ಕೈಗೆ ಹಲಸಿನ ಹಣ್ಣು ಸಿಕ್ಕರೆ ಅದನ್ನು ಸುಲಿದು, ಜೇನು ತುಪ್ಪ ತಂದು ಎರಡನ್ನು ಮಿಕ್ಸ್ ಮಾಡಿ, ತಾನು ಮತ್ತು ಮರಿಗಳಿಗೆ ತಿನ್ನಲು ಬಿಡುತ್ತದೆ. ಇದು ಮನುಷ್ಯರ ಕೈಗೆ ಸಿಕ್ಕರೆ ಚಪ್ಪರಿಸಿಕೊಂಡು ತಿನ್ನುತ್ತಾರೆ ಎಂದು ಹಿರಿಯ ವ್ಯಕ್ತಿಗಳು ತಿಳಿಸುತ್ತಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications