ಕುಟುಂಬ ಸಮೇತ ವಿಕಾಸಸೌಧದ ಮುಂದೆ ಧರಣಿ ಕುಳಿತ ಗ್ರಾ.ಪಂ ಡಾಟಾ ಎಂಟ್ರಿ ಆಪರೇಟರ್
ಚಿತ್ರದುರ್ಗ, ಜುಲೈ 7: ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪರೇಟರ್ ಒಬ್ಬರು ವಿಕಾಸಸೌಧದ ಮುಂದೆ ಕುಟುಂಬ ಸಮೇತರಾಗಿ ಬಂದು ಧರಣಿ ಕುಳಿತಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾ.ಪಂ ನೌಕರ ಜಗದೀಶ್ ಕುಮಾರ್ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಕೆಲಸದಿಂದ ತೆಗೆದುಹಾಕಿದ್ದು, ನ್ಯಾಯಕ್ಕಾಗಿ ವಿಕಾಸಸೌಧದ ಮುಂದೆ ಧರಣಿ ಕುಳಿತಿದ್ದಾರೆ.

"ನಾನು ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೆ. ವೈಯಕ್ತಿಕ ದ್ವೇಷದಿಂದ ನನ್ನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಸರ್ಕಾರದ ಆದೇಶವಿದ್ದರೂ ಪಿಎಫ್ ಸೌಲಭ್ಯ ನೀಡಿಲ್ಲ. ಹೆಂಡತಿ, ಮಕ್ಕಳು, ತಂದೆ ತಾಯಿಯನ್ನು ಪೋಷಣೆ ಮಾಡಲು ಆಗುತ್ತಿಲ್ಲ" ಎಂದು ಅಳಲು ತೋಡಿಕೊಂಡಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿ ಹೆಂಡತಿ ಮಗುವಿನೊಂದಿಗೆ ಜಗದೀಶ್ ಕುಮಾರ್ ಧರಣಿ ಕುಳಿತಿದ್ದಾರೆ.












Click it and Unblock the Notifications