ಯಡಿಯೂರಪ್ಪ ಖಂಡಿತಾ ವಿಶ್ವಾಸ ಮತ ಸಾಬೀತು ಮಾಡ್ತಾರೆ: ಕಾಂಗ್ರೆಸ್ ಶಾಸಕ
ಚಿಕ್ಕಮಗಳೂರು, ಜುಲೈ 28: "ನಾಳೆ (ಸೋಮವಾರ) ಯಡಿಯೂರಪ್ಪ ಸದನದಲ್ಲಿ ವಿಶ್ವಾಸಮತ ಯಾಚನೆಯಲ್ಲಿ ಯಶಸ್ಸು ಗಳಿಸುತ್ತಾರೆ. ಅತೀ ಹೆಚ್ಚು ಮತಗಳನ್ನು ಖಂಡಿತವಾಗಿ ಗಳಿಸಿ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ" ಎಂದು ಕಾಂಗ್ರೆಸ್ ಪಕ್ಷದ ಶಾಸಕ ಟಿ. ಡಿ. ರಾಜೇಗೌಡ ಭಾನುವಾರ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಇದೇ ವೇಳೆ, "ಸ್ಪೀಕರ್ ನಿರ್ಧಾರ ಸ್ವಾಗತಾರ್ಹ. ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದಂಥ ನಿರ್ಧಾರ ಸಮಂಜಸವಾದದ್ದು. ಸೂಕ್ತ ನಿರ್ಧಾರವನ್ನು ಸ್ಪೀಕರ್ ತೆಗೆದುಕೊಂಡಿದ್ದಾರೆ" ಎಂದು ಅವರು ಹೇಳಿದ್ದಾರೆ.

ಶಾಸಕರನ್ನು ಅನರ್ಹ ಮಾಡಿರುವುದನ್ನು ಮುಕ್ತಕಂಠಿದಿಂದ ಸ್ವಾಗತ ಮಾಡಿದ ಟಿ.ಡಿ. ರಾಜೇಗೌಡ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸ್ವೀಕರ್ ಸರಿಯಾದ ನಿಲುವು ತಗೆದುಕೊಂಡಿದ್ದಾರೆ. ಒಂದು ಚಿಹ್ನೆಯಲ್ಲಿ ಗೆದ್ದವರು ಅವಧಿ ಮುಗಿಯುವ ತನಕ ಅದೇ ಪಕ್ಷದಲ್ಲೇ ಇರಬೇಕು. ಅದನ್ನು ಬಿಟ್ಟು ರಾಜೀನಾಮೆ ನೀಡಿರುವವರಿಗೆ ಸರಿಯಾದ ಶಿಕ್ಷೆ ಇದು ಅವರು ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಶೃಂಗೇರಿ ಶಾಸಕ ಟಿ. ಡಿ. ರಾಜೇಗೌಡ ಹೇಳಿಕೆ ನೀಡಿದ್ದಾರೆ.












Click it and Unblock the Notifications