ಪತ್ರಕರ್ತರಿಗೆ ಹಲ್ಲೆ: ಚಿಕ್ಕಮಗಳೂರು ಎಸ್ಪಿಗೆ ಕ್ಲಾಸ್ ತೆಗೆದುಕೊಂಡ ಸಿಎಂ
ಚಿಕ್ಕಮಗಳೂರು, ಜನವರಿ 14: ಚಿಕ್ಕಮಗಳೂರು ಜಿಲ್ಲೆಯ ಸೊಲ್ಲಾಪುರದಲ್ಲಿ ನಡೆದ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ನಿರ್ಬಂಧಿಸಿದ ಪೊಲೀಸರ ವಿರುದ್ಧ ಪತ್ರಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಪೊಲೀಸರ ಕ್ರಮ ಖಂಡಿಸಿ ಧಿಡೀರ್ ಆಗಿ ಪೊಲೀಸರು ಮತ್ತು ಪತ್ರಕರ್ತರಿಗೆ ವಾಗ್ವಾದ ನಡೆಯಿತು. ಈ ಸಂದಂರ್ಭದಲ್ಲಿ ಬಹಿರಂಗ ಸಭೆಯಲ್ಲೇ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತರಾಟೆ ತೆಗೆದುಕೊಂಡರು.
ಪೊಲೀಸ್ ವರಿಷ್ಠಾಧಿಕಾರಿಗೆ ಸಾರ್ವಜನಿಕವಾಗಿಯೇ ಕ್ಲಾಸ್ ತಗೆದುಕೊಂಡ ಸಿಎಂ ಯಡಿಯೂರಪ್ಪ, ಸಸ್ಪೆಂಡ್ ಲೆಟರ್ ಕೊಡ್ಲಾ ಎಂದು ಗದರಿಸಿದರು.

ಸಾರ್ವಜನಿಕವಾಗಿಯೇ ಎಸ್ಪಿ ಹರೀಶ್ ಪಾಂಡೆಗೆ ಕ್ಲಾಸ್ ತಗೆದುಕೊಂಡ ಸಿ.ಎಂ ಯಡಿಯೂರಪ್ಪ, ನಿನ್ನ ಉದ್ದಟತನದ ವರ್ತನೆ ಬಿಡಬೇಕು. ನಿನ್ನ ಅತಿರೇಕದ ವರ್ತನೆಯಿಂದ ಕಾರ್ಯಕ್ರಮ ಹಾಳಾಗ್ತಾ ಇದೆ ಎಂದರು.

ಆಗ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರು ಮುಖ್ಯಮಂತ್ರಿ ಇರುವ ವೇದಿಕೆ ಎದುರು ಏನೂ ಮಾತಾಡದೆ ಕೈ ಕಟ್ಟಿ ನಿಂತರು. ಚಿಕ್ಕಮಗಳೂರಿನ ಸೊಲ್ಲಾಪುರದ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದ ವೇಳೆ ಘಟನೆ ನಡೆದಿದೆ.












Click it and Unblock the Notifications