ನೀರು ಕಂಡ ಜಕ್ಕಲಮಡಗು ಜಲಾಶಯ: ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ಅವಳಿ ನಗರಗಳ ಜನತೆಯ ತುಸು ನಿರಾಳ
ಚಿಕ್ಕಬಳ್ಳಾಪುರ ಮೇ 26: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ನಗರ ಜನತೆಯ ಜೀವ ಜಲಕ್ಕೆ ಆಸರೆಯಾಗಿರುವ ಜಕ್ಕಲಮಡು ಜಲಾಶಯಕ್ಕೆ 5 ಅಡಿಗಳಷ್ಟು ನೀರು ಹರಿದು ಬಂದಿದೆ.
ಕಳೆದ ಒಂದೆರಡು ವಾರದಿಂದ ಸುರಿದ ಮಳೆಯಿಂದಾಗಿ ಜಲಾಶಯಕ್ಕೆ ಮಳೆ ನೀರು ಹರಿಯುತ್ತಿದ್ದು, ಬರಿದಾಗುವತ್ತ ಸಾಗಿದ್ದ ಜಲಾಶಯದ ಒಡಲಿಗೆ ಮಳೆರಾಯ ತುಸು ನೀರುಣಿಸಿದ್ದಾರೆ.

ಜಲಾಶಯ ಬರಿದಾಗಲಿದ್ದು, ಮುಂದಿನ ದಿನಗಳಲ್ಲಿ ಅವಳಿ ನಗರಗಳಾದ ದೊಡ್ಡಬಳ್ಳಾಪುರ ಹಾಗೂ ಚಿಕ್ಕಬಳ್ಳಾಪುರ ಜನರ ಕುಡಿವ ನೀರಿಗೆ ತೀವ್ರ ಸಮಸ್ಯೆ ಎದುರಾಗಲಿದೆ ಎಂಬ ಆತಂಕ ತುಸು ದೂರವಾದಂತಾಗಿದೆ.
ಕೈ ಕೊಟ್ಟ ಮಳೆ:
ಕಳೆದ ಬಾರಿ ಮಳೆ ಕೈಕೊಟ್ಟಿದ್ದರಿಂದ ಜಕ್ಕಲಮಡುಗು ಜಲಾಶಯದಲ್ಲಿ ಗಣನೀಯಮಟ್ಟದಲ್ಲಿ ನೀರು ಕುಸಿತ ಕಂಡಿತ್ತು. ಇದರಿಂದ ಜಲಾಶಯವನ್ನೇ ಅವಲಂಬಿಸಿರುವ ಎರಡೂ ನಗರಗಳ ನಿವಾಸಿಗಳಿಗೆ ಸಹಜವಾಗಿ ಆತಂಕ ಎದುರಾಗಿತ್ತು,
ಕುಡಿವ ನೀರು ಪೂರೈಸುವ ನಗರ ಸಭೆ ಅಧಿಕಾರಿಗಳು ಚಿಂತೆಗೀಡಾಗಿದ್ದರು. ಏತನ್ಮಧ್ಯೆ ಕೆಲ ದಿನಗಳಿಂದ ಸುರಿದ ಮಳೆಗೆ ನೀರಿನ ಹರಿವು ಹೆಚ್ಚಾಗಿರುವುದು ನೆಮ್ಮದಿ ತರಿಸಿದೆ.

ಉಭಯ ಪಟ್ಟಣಗಳಿಗೆ ಹಂಚಿಕೆ:
ಜಕ್ಕಲಮಡು ಜಲಾಶಯ ಸಂಗ್ರಹಣಾ ಸಾಮರ್ಥ್ಯ 4390 ದಶಲಕ್ಷ ಲೀಟರ್, ಶೇಖರಣಾ ವಿಸ್ತಿರ್ಣ 51.25 ಚ.ಮೀ. ಹೊಂದಿದೆ. ಈ ಜಲಾಶಯದಿಂದ ಚಿಕ್ಕಬಳ್ಳಾಪುರ ನಗರಕ್ಕೆ ಶೇ.68 ಪಾಲು ಪಡೆದರೆ, ದೊಡ್ಡಬಳ್ಳಾಪುರ ನಗರಕ್ಕೆ ಶೇ.32 ಪಾಲಿದೆ. ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾದರೆ ಕೋಡಿ ಹರಿಯುತ್ತದೆ. ಹಲವು ಮಳೆಗಾಲದಲ್ಲಿ ಜಲಾಶಯ ಕೋಡಿ ಹರಿದಿದೆ.
ಜಕ್ಕಲಮಡು ಜಲಾಶಯ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿದ್ದರೂ ಈ ಜಲಾಶಯಕ್ಕೆ ನೆರೆಯ ಬೆಂಗಳೂರು ಗ್ರಾಮಾಂತರ ಪ್ರದೇಶದಿಂದ ಮಳೆ ನೀರು ಹರಿದು ಬರುವ ಕಾರಣಕ್ಕೆ ಜಕ್ಕಲಮಡು ಜಲಾಶಯದ ನೀರಿನಲ್ಲಿ ತಮಗೂ ಪಾಲುಬೇಕೆಂದು ದೊಡ್ಡಬಳ್ಳಾಪುರ ಜನತೆ ಬೇಡಿಕೆ ಇಟ್ಟ ಪರಿಣಾಮ ಜನಸಂಖ್ಯೆಗೆ ಅನುಗುಣವಾಗಿ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಉಭಯ ನಗರಗಳಿಗೆ ಈ ಜಲಾಶಯದ ನೀರಿನ ಹಂಚಿಕೆ ಮಾಡಲಾಗಿದೆ.
ಜಕ್ಕಲಮಡುಗು ಜಲಾಶಯದ ಸಾಮಾರ್ಥ್ಯ:
ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ನಗರದ ಜನರಿಗೆ ಕುಡಿಯುವ ನೀರು ಒದಗಿಸಲು ಜಲಾಶಯದ ಕಾಮಗಾರಿಗೆ 2249.68 ಲಕ್ಷ ವೆಚ್ಚ ಮಾಡಲಾಗಿದೆ. ಜಲಾಶಯ ಸಂಗ್ರಹಣಾ ಸಾಮಥ್ರ್ಯ 4390 ದಶಲಕ್ಷ ಲೀ, ಗರಿಷ್ಠ ಸಂಗ್ರಹಣಾ ನೀರಿನ ಮಟ್ಟ 819.37 ಮೀ, ನೀರು ಶೇಖರಣಾ ವಿಸ್ತೀರ್ಣ 51.25 ಚ.ಮೀ ಹೊಂದಿದೆ. ಜಲಾಶಯ 42 ಅಡಿಯಷ್ಟು ಎತ್ತರ ನೀರು ತುಂಬಲಿದ್ದು, ಇದರಲ್ಲಿ 2 ಅಡಿಯಷ್ಟು ಡೆಡ್ ಸ್ಟಾಕ್ ನೀರು ಇರಲಿದೆ.
22 ಅಡಿಗೆ ಕುಸಿದಿತ್ತು:
ಜಕ್ಕಲಮಡು ಜಲಾಶಯ 64 ಅಡಿಗಳವರೆಗೆ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಆದರೆ ಮಳೆ ಕೊರತೆಯಿಂದ ಡೆಡ್ ಸ್ಟೋರೆಜ್ ಸೇರಿ ನೀರಿನ ಮಟ್ಟ 22 ಅಡಿಗೆ ಕುಸಿದಿತ್ತು. ಮಳೆ ನೀರಿನಿಂದ ಇದೀಗ 24ರಿಂದ 26ಅಡಿಗಳವರೆಗೆ ನೀರಿನ ಮಟ್ಟ ಏರಿಕೆ ಕಂಡಿದೆ.
ಇಷ್ಟು ಮಟ್ಟದ ನೀರು ಶೇಖರಣೆಯಾಗಿರುವುದರಿಂದ ಸುಮಾರು 1 ತಿಂಗಳವರೆಗೆ ಎರಡೂ ನಗರಗಳಿಗೆ ನೀರು ಪೂರೈಸಲು ತೊಂದರೆಯಾಗುವುದಿಲ್ಲ ಎಂಬುದು ನಗರಸಭೆ ಅಧಿಕಾರಿಗಳ ಸಮಾಧಾನವಾಗಿದೆ.
ಇದರ ನಡುವೆ ಇನ್ನು ಕೆಲವು ದಿನ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ವರದಿ ಹಾಗೂ ಮುಂದಿನ ಮಳೆಗಾಲದಲ್ಲಿ ನಿರೀಕ್ಷಿತ ಮಳೆಯಾಗಲಿದೆ ಎಂಬ ಭರವಸೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಈ ಬಾರಿ ಜಲಾಶಯ ತುಂಬಿ ಹರಿಯಲಿದೆ ಎಂಬುದು ಜನರ ಆಶಾಭಾವನೆಯಾಗಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications