ಚೆನ್ನೈನ ದುರ್ಗಾ ಪೀಠಂನಲ್ಲಿ ಬರ್ಗರ್, ಕೇಕ್ ಪ್ರಸಾದ
ನೀವು ಅದೆಷ್ಟೇ ಹಿಂದೂ ದೇವಾಲಯಗಳನ್ನು ಸುತ್ತಿದ್ದರೂ ಪ್ರಸಾದ ವಿತರಣೆ ಬಗ್ಗೆ ತಿಳಿದುಕೊಂಡಿದ್ದರೂ ಚೆನ್ನೈನಲ್ಲಿರುವ ಈ ದುರ್ಗಾ ಪೀಠಂನಲ್ಲಿ ಕೊಡುವ ಪ್ರಸಾದದ ಬಗ್ಗೆ ತಿಳಿದರೆ ಅಚ್ಚರಿಪಡುತ್ತೀರಿ. ಕುತೂಹಲ ತಾಳುತ್ತೀರಿ.
ಚೆನ್ನೈ, ಮಾರ್ಚ್ 27: ದೇವಸ್ಥಾನ ಅಂದರೆ ಅಲ್ಲೇನು ಪ್ರಸಾದ ಕೊಡ್ತಾರೆ ಹೇಳಿ ನೋಡೋಣ. ಸಿಹಿ ಆದರೆ ಲಾಡು, ಪೇಡಾ, ಸಿಹಿ ಪೊಂಗಲ್..ಇನ್ನು ಸಿಹಿ ಬಿಟ್ಟರೆ ಚಿತ್ರಾನ್ನ, ಪುಳಿಯೋಗರೆ, ಮೊಸರನ್ನ, ಖಾರ ಪೊಂಗಲ್..ಅಂತ ಹೇಳ್ತಿರಲ್ವಾ? ದಕ್ಷಿಣ ಭಾರತದ ಬಹುತೇಕ ದೇವಸ್ಥಾನಗಳಲ್ಲಂತೂ ಇವೇ ಕಣ್ರೀ ಪ್ರಸಾದ ಅಂತ ಕೊಡೋದು.
ಆದರೆ, ಚೆನ್ನೈನಲ್ಲೊಂದು ದೇವಸ್ಥಾನವಿದೆ. ಅಲ್ಲಿ ಸ್ವಲ್ಪ ಡಿಫರೆಂಟು. ಬ್ರೌನೀ, ಸ್ಯಾಂಡ್ ವಿಚ್, ಅಷ್ಟೇ ಅಲ್ಲ ಬರ್ಗರ್ ನೆಲ್ಲ ಭಕ್ತರಿಗೆ ಪ್ರಸಾದ ಅಂತ ಕೊಡ್ತಾರಂತೆ. ಟೈಮ್ಸ್ ಆಫ್ ಇಂಡಿಯಾ ಮಾಡಿದ ವರದಿ ಪ್ರಕಾರ ಪಡಪ್ಪೈನ ದುರ್ಗಾ ಪೀಠಂನಲ್ಲಿ ಇಂಥ ಪ್ರಸಾದ ಕೊಡ್ತಾರಂತೆ.[ಆತ ಆಫ್ರಿಕಾದಲ್ಲಿ ಪೈಲಟ್, ದಕ್ಷಿಣ ಕನ್ನಡದಲ್ಲಿ ದೈವಾರಾಧನೆ ಪಾತ್ರಿ]

ಯಾವುದೇ ಆಹಾರವನ್ನು ಸ್ವಚ್ಛವಾದ ಅಡುಗೆ ಮನೆಯಲ್ಲಿ ಸಿದ್ಧ ಮಾಡಿ, ಆ ಆಹಾರ ಶುದ್ಧವಾಗಿದ್ದು, ಸ್ವಚ್ಛ ಮನಸಿನಿಂದ ಸಿದ್ಧಪಡಿಸಿ, ದೇಹದ ಆರೋಗ್ಯಕ್ಕೆ ಪೂರಕವಾಗಿದ್ದರೆ ಅಂಥದ್ದನ್ನು ದೇವರಿಗೆ ಸಮರ್ಪಣೆ ಮಾಡಬಹುದು ಎಂಬುದು ದೇವಸ್ಥಾನದವರು ನಂಬಿರುವ ತತ್ವ.
ದೇಗುಲ ನಿರ್ಮಾಣಕ್ಕೂ ಸಹಾಯ ಮಾಡಿರುವ ಶ್ರೀಧರ್ ಎಂಬುವರು ಹೇಳುವಂತೆ, ಹಿರಿಯ ಭಕ್ತರಲ್ಲಿ ಪ್ರಸಾದದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಮೊದಲಿಗೆ ಸಾಂಪ್ರದಾಯಿಕ ಪ್ರಸಾದ ಅಲ್ಲ ಎಂಬ ಕಾರಣಕ್ಕೆ ಆಕ್ಷೇಪ ವ್ಯಕ್ತವಾಗಬಹುದು ಎಂದುಕೊಂಡಿದ್ದರಂತೆ.[ಮಹಾಭಾರತ ವಿರುದ್ಧ ಹೇಳಿಕೆ, ಕಮಲ್ ವಿರುದ್ಧ ಪಿಐಎಲ್]
ಜಯದುರ್ಗ ಪೀಠಂನ ಅಡುಗೆಮನೆ ಪೂರ್ತಿಯಾಗಿ ಆಟೋಮೆಟೆಡ್. ಪ್ರಸಾದ ಪ್ಯಾಕ್ ಆಗಿ, ಇಷ್ಟು ಸಮಯದೊಳಗೆ ಬಳಸಬೇಕು ಎಂಬ ಲೇಬಲ್ ಜತೆಗೆ ಬರುತ್ತದೆ. ಜನ್ಮದಿನದ ವಿಶೇಷ ಪ್ರಸಾದವಾಗಿರುವ ಕೇಕ್ ಅನ್ನು ಭಕ್ತರು ಬಹಳ ಇಷ್ಟಪಡುತ್ತಾರೆ. ಭಕ್ತರ ಹೆಸರು, ಅವರ ಜನ್ಮದಿನದ ಮಾಹಿತಿ ನಮ್ಮ ಬಳಿ ಇರುತ್ತದೆ. ಆ ದಿನ ಅವರ ವಿಳಾಸಕ್ಕೆ ಪ್ರಸಾದ ಕಳಿಸ್ತೀವಿ ಎನ್ನುತ್ತಾರೆ ಶ್ರೀಧರ್.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications