ತೆರಿಗೆ ಏರಿಕೆಯೇ ಇಲ್ಲದ ಬಜೆಟ್ ಮಂಡಿಸಿದ ತಮಿಳುನಾಡು ಸರ್ಕಾರ!
ಚೆನ್ನೈ, ಫೆಬ್ರವರಿ 08: ಕರ್ನಾಟಕದಂತೆ ತಮಿಳುನಾಡು ರಾಜ್ಯ ಸಹ ಇಂದು 2019-20ನೇ ಸಾಲಿನ ಬಜೆಟ್ ಅನ್ನು ಮಂಡಿಸಿತು. ಜನಪ್ರಿಯ ಬಜೆಟ್ ಮಂಡಿಸಿರುವ ತಮಿಳುನಾಡು ಎಐಎಡಿಎಂಕೆ ಸರ್ಕಾರ, ಯಾವುದೇ ಹೊಸ ತೆರಿಗೆ ಹಾಕದೆ. ಬೆಲೆ ಏರಿಕೆ ಮಾಡದೆ ಬಜೆಟ್ ಮಂಡಿಸಿದೆ.
ತಮಿಳುನಾಡಿನ ಬಜೆಟ್ನ ಒಟ್ಟು ಗಾತ್ರ 2,08,671 ಕೋಟಿ ರೂಪಾಯಿ ಆಗಿದೆ. ರಾಜ್ಯದ ಈ ಹಣಕಾಸು ವರ್ಷದ ನಿರೀಕ್ಷಿತ ಆದಾಯ 1,42,267 ಕೋಟಿ ರೂಪಾಯಿ ಆಗಿದೆ. ಈ ಜನಪ್ರಿಯ ಬಜೆಟ್ 44,176 ಕೋಟಿಯ ಖೋತಾ ಬಜೆಟ್ ಆಗಿದೆ.
ಬಜೆಟ್ನಲ್ಲಿ ಹಲವು ಜನಪ್ರಿಯ ಯೋಜನೆಗಳನ್ನು ತಮಿಳುನಾಡಿನ ಹಣಕಾಸು ಮಂತ್ರಿ ಓ ಪನ್ನೀರ್ ಸೆಲ್ವಂ ಅವರು ನೀಡಿದ್ದಾರೆ. ದಿವಂಗತ ಜಯಲಲಿತಾ ಅವರ ಭಾವ ಚಿತ್ರ ಮುದ್ರಿತವಾಗಿದ್ದ ಸೂಟ್ಕೇಸ್ ಅನ್ನು ಸದನಕ್ಕೆ ತಂದಿದ್ದ ಅವರು, ಜಯಲಲಿತಾ ಅವರ ಮಾದರಿಯಲ್ಲಿಯೇ ಹಲವು ಜನಪ್ರಿಯ ಘೋಷಣೆಗಳನ್ನು ಮಾಡಿದ್ದಾರೆ.

ತಮಿಳುನಾಡು ಸರ್ಕಾರದ ಬಜೆಟ್ನ ಮುಖ್ಯಾಂಶಗಳು ಇಲ್ಲಿವೆ...
* ನಿವೃತ್ತ ನೌಕರರಿಗೆ ವಿಶೇಷ ಪಿಂಚಣಿ, ಇದಕ್ಕಾಗಿ 29,000 ಕೋಟಿ ಮೀಸಲು. ಸರ್ಕಾರಿ ನೌಕರರ ಸಂಬಳದಲ್ಲಿ ಹೆಚ್ಚಳ ಇದಕ್ಕಾಗಿ 55,399 ಕೋಟಿ ಮೀಸಲು.
* ಉಚಿತ ಸೀರೆ ಮತ್ತು ಪಂಚೆ ವಿತರಣೆಗೆ 491 ಕೋಟಿ ಅನುದಾನ. ಆಹಾರ ಸಬ್ಸಿಡಿಗೆ 6000 ಕೋಟಿ, ಪ್ರವಾಸೋದ್ಯಮ ಇಲಾಖೆಗೆ 788 ಕೋಟಿ.
* 9975 ಮಂದಿಯನ್ನು ಸರ್ಕಾರಿ ಉದ್ಯೋಗಕ್ಕೆ ಈ ವರ್ಷ ನೇಮಕ ಮಾಡಿಕೊಳ್ಳಲಾಗುವುದು ಎಂದು ಬಜೆಟ್ನಲ್ಲಿ ಘೋಷಣೆ. 500 ವಿದ್ಯುತ್ ಚಾಲಿತ ಬಸ್ಸುಗಳ ಖರೀದಿ.
* 980 ಕೋಟಿ ವೆಚ್ಚದಲ್ಲಿ 1 ಲಕ್ಷ ಮನೆ ನಿರ್ಮಾಣ ಮತ್ತು ಅವನ್ನು ಗಾಜಾ ಚಂಡಮಾರುತ ಸಂತ್ರಸ್ಥರಿಗೆ ವಿತರಣೆ. 12,000 ಕೋಟಿ ಆರೋಗ್ಯಕ್ಕೆ, 10,500 ಕೋಟಿ ಕೃಷಿಗೆ ನೀಡಲಾಗಿದೆ.
* ಚೆನ್ನೈ ನಲ್ಲಿ ಅಂಡರ್ಗ್ರೌಂಡ್ ಪಾರ್ಕಿಂಗ್ ನಿರ್ಮಾಣ ಮಾಡಲು 2000 ಕೋಟಿ ಅನುದಾನ ನೀಡಲಾಗಿದೆ. ಇದನ್ನು ಖಾಸಗಿ-ಸರ್ಕಾರ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ.
* ಇನ್ನೂ ಹಲವು ಜನಪ್ರಿಯ ಘೋಷಣೆಗಳನ್ನು ತಮಿಳುನಾಡು ಸರ್ಕಾರ ಘೋಷಿಸಿದ್ದು, ಯಾವುದೇ ಹೊಸ ತೆರಿಗೆ ಹೇರಿಲ್ಲ, ಅಲ್ಲದೆ ಯಾವ ತೆರಿಗೆಯನ್ನೂ ಏರಿಕೆಯೂ ಮಾಡಿಲ್ಲ.
-
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price












Click it and Unblock the Notifications