ನಟ ಧನುಷ್ 'ಜನ್ಮರಹಸ್ಯ' ಮಾರ್ಚ್ 9ರ ನಂತರ ತೀರ್ಪು!
ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ಮಾರ್ಚ್ 9ರ ತನಕ ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ. ಧನುಷ್ ನಮ್ಮ ಮಗ ಎಂದು ಕದಿರೇಸನ್ ಅವರು ಹಾಕಿರುವ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.
ಚೆನ್ನೈ, ಮಾರ್ಚ್ 03: ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ನಟ ಧನುಷ್, ಮಾರ್ಚ್ 9ರ ತನಕ ನೆಮ್ಮದಿಯ ನಿಟ್ಟುಸಿರು ಬಿಡಬಹುದಾಗಿದೆ. 'ಧನುಷ್ ನಮ್ಮ ಮಗ' ಎಂದು ಕದಿರೇಸನ್ ಎಂಬುವವರು ಹಾಕಿರುವ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಮಾರ್ಚ್ 9ರಂದು ಧನುಷ್ ಅವರು ಡಿಎನ್ಎ ಪರೀಕ್ಷೆಗೆ ಒಳಪಡಬೇಕೇ? ಬೇಡವೇ? ಎಂಬುದನ್ನು ಮದ್ರಾಸ್ ಹೈಕೋರ್ಟ್ ತಿಳಿಸಲಿದೆ.
ಈ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಮಾರ್ಚ್
02ರಂದು
ವಿಚಾರಣೆ
ನಡೆಸಿದ
ಜಸ್ಟೀಸ್
ಜಿ
ಚೊಕ್ಕಲಿಂಗಂ
ಅವರು
ಮುಂದಿನ
ಆದೇಶದ
ತನಕ
ಧನುಷ್
ವಿರುದ್ಧದ
ತನಿಖೆಗೆ
ತಡೆ
ನೀಡಿದ್ದು,
ಮಾರ್ಚ್
9ಕ್ಕೆ
ವಿಚಾರಣೆಯನ್ನು
ಮುಂದೂಡಿದ್ದಾರೆ.
ಮೇಲೂರಿನ ಹಿರಿಯ ದಂಪತಿಗಳಾದ ಕದಿರೇಸನ್ ಹಾಗೂ ಮೀನಾಕ್ಷಿ ಅವರು ಧನುಷ್ ನಮ್ಮ ಮಗ ಎಂದು ಕೋರ್ಟಿಗೆ ಅರ್ಜಿ ಹಾಕಿದ್ದಾರೆ. ಧನುಷ್ ಅವರನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿ, ನಾನು ಪರೀಕ್ಷೆಗೆ ಸಿದ್ಧ ಎಂದು ಕದಿರೇಸನ್ ಹೇಳಿದ್ದಾರೆ.
ಆದರೆ, ಡಿಎನ್ಎ ಪರೀಕ್ಷೆಗೆ ತಡವಾಗಿ ಅರ್ಜಿ ಹಾಕಿದ್ದೇಕೆ? ಎಂದು ಕದಿರೇಸನ್ ಪರ ವಕೀಲರನ್ನು ನ್ಯಾ. ಚೊಕ್ಕಲಿಂಗಂ ಪ್ರಶ್ನಿಸಿದ್ದಾರೆ. ಇದರ ಜತೆಗೆ ಮೇಲೂರಿನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನೀಡಿರುವ ಆದೇಶವನ್ನು ರದ್ದುಗೊಳಿಸುವಂತೆ ಧನುಷ್ ಕೋರಿರುವ ಅರ್ಜಿ ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಲಾಗಿದೆ.
ಮಚ್ಚೆ ಇದೆ: ಧನುಷ್ ಮೈಮೇಲೆ ಎಲ್ಲೆಲ್ಲಿ ಮಚ್ಚೆ, ಗುರುತುಗಳಿವೆ ಎಂಬುದನ್ನು ಕದಿರೇಸನ್ ಅವರು ಸ್ಪಷ್ಟವಾಗಿ ತಿಳಿಸಿ, ನಮ್ಮ ಮಗನನ್ನು ನಮಗೆ ಕೊಡಿ ಎಂದಿದ್ದರು. ಈಗಾಗಲೇ ಧನುಷ್ ಅವರ ದೈಹಿಕ ಪರೀಕ್ಷೆ ನಡೆಸಿ ದೃಢಪಡಿಸಿ ಹೈಕೋರ್ಟಿಗೆ ವರದಿ ಸಲ್ಲಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಫೆಬ್ರವರಿ 28ರಂದು ನ್ಯಾ. ಚೊಕ್ಕಲಿಂಗಂ ಅವರ ಮುಂದೆ ಧನುಷ್ ಹಾಗೂ ಪೋಷಕರಾದ ನಿರ್ದೇಶಕ ಕಸ್ತೂರಿ ರಾಜ ಹಾಗೂ ವಿಜಯಲಕ್ಷ್ಮಿ ಅವರು ಹಾಜರಾಗಿದ್ದರು. ಧನುಷ್ ಅವರ ಬಾಲ್ಯದ ದಿನಗಳ ಚಿತ್ರಗಳನ್ನು ಎರಡು ಕಡೆಯವರು ನೀಡಿದ್ದಾರೆ.
'ಧನುಷ್ ನಮ್ಮ ಮೂರನೇ ಮಗ, ಬಾಲ್ಯದಲ್ಲಿ ಕಾಣೆಯಾದವನು ಸಿಕ್ಕಿರಲಿಲ್ಲ. ನಂತರ ಸಿನಿಮಾ ಸ್ಟಾರ್ ಆದಮೇಲೆ ಎಲ್ಲಿದ್ದಾನೆ ಎಂಬುದು ತಿಳಿಯಿತು' ಎಂದು ಕದಿರೇಸನ್ ವಾದಿಸಿದ್ದಾರೆ.