Get Updates
Get notified of breaking news, exclusive insights, and must-see stories!

ತಮಿಳುನಾಡು ಸಂಸದ ರಾಜಾರಿಂದ ಪ್ರತ್ಯೇಕ ರಾಷ್ಟ್ರದ ಬೇಡಿಕೆ?

ಚೆನ್ನೈ, ಜು.4: ನಮಗೆ ಪ್ರತ್ಯೇಕ ರಾಷ್ಟ್ರದ ಬೇಡಿಕೆಗೆ ಆಗ್ರಹಿಸುವಂತೆ ಮಾಡಬೇಡಿ, ತಮಿಳುನಾಡು ರಾಜ್ಯಕ್ಕೆ ಸ್ವಾಯುತತ್ತೆ ನೀಡಿ ಎಂದು ನಾಮಕ್ಕಲ್‌ನಲ್ಲಿ ನಡೆದ ಡಿಎಂಕೆ ಸಭೆಯಲ್ಲಿ ಸಂಸದ ಎ. ರಾಜಾ ಅವರು ಕೇಂದ್ರ ಸರ್ಕಾರಕ್ಕೆ ಹೇಳಿದ್ದಾರೆ.

ಪ್ರತ್ಯೇಕ ರಾಷ್ಟ್ರ, ದ್ರಾವಿಡ ನಾಡು, ಬಹುಕಾಲದ ಬೇಡಿಕೆಯಾಗಿದೆ. ಇದು ಡಿಎಂಕೆ ಪಕ್ಷದ ವರಿಷ್ಠರಾದ ಅಣ್ಣ ಮತ್ತು ಪೆರಿಯಾರ್ ಅವರ ಬೇಡಿಕೆ ಕೂಡ ಹೌದು. ಆದಾಗ್ಯೂ, ಆಗಿನ ಜವಾಹರಲಾಲ್ ನೆಹರು ನೇತೃತ್ವದ ಸರ್ಕಾರವು ಪ್ರತ್ಯೇಕತೆಯನ್ನು ಕಾನೂನುಬಾಹಿರವೆಂದು ಪರಿಗಣಿಸಿದ ನಂತರ 1962ರಲ್ಲಿ ಅದನ್ನು ಕೈಬಿಡಲಾಯಿತು.

ಡಿಎಂಕೆ ಪಕ್ಷದಿಂದ ಆಗಾಗ ಫೆಡರಲಿಸಂ ಬೇಡಿಕೆ ಮುಂದಿಡುತ್ತಿದ್ದರೂ ಈ ಸಭೆ ದ್ರಾವಿಡನಾಡು ವಿಷಯವನ್ನು ಮತ್ತೆ ಕೆರಳಿಸಿದೆ. ನಾಮಕ್ಕಲ್‌ನಲ್ಲಿ ಡಿಎಂಕೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗಾಗಿ ನಡೆದ "ಮತಿಯಿಲ್ ಕೂಟಚಿ, ಮಾನಿಲತ್ತಿಲ್ ಸುಯಾಚಿ" (ಸ್ಥೂಲವಾಗಿ ಕೇಂದ್ರದಲ್ಲಿ ಫೆಡರಲಿಸಂ ಮತ್ತು ರಾಜ್ಯಗಳಿಗೆ ಸ್ವಾಯತ್ತತೆ) ಎಂಬ ಶೀರ್ಷಿಕೆಯ ಸಭೆಯಲ್ಲಿ ರಾಜಾ ಮಾತನಾಡಿದರು. ಇದು ಮಾಜಿ ಸಿಎಂ ಎಂ ಕರುಣಾನಿಧಿ ಅವರ ಆಲೋಚನೆಯಾಗಿದ್ದು, ಇದುವರೆಗೂ ಪಕ್ಷಕ್ಕೆ ಅಂಟಿಕೊಂಡಿದೆ.

ರಾಜಾ ಅವರು ಈ ಪರಿಕಲ್ಪನೆಯನ್ನು ಹೇಳುವುದರೊಂದಿಗೆ ಹಿಂದಿನ ಇತಿಹಾಸವನ್ನು ನೆನಪಿಸಿಕೊಂಡರು ಮತ್ತು ಪಾಕಿಸ್ತಾನದ ವಿಭಜನೆಯ ಹಾದಿಯನ್ನು ಹೇಳಿದರು. ಭಾರತದಲ್ಲಿ ಹಿಂದಿ ಮಾತ್ರ ರಾಷ್ಟ್ರ ಭಾಷೆಯಾಗಬೇಕು, ದೇಶವನ್ನು ಒಂದುಗೂಡಿಸಲು ಹಿಂದಿ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಒಂದು ಭಾಷೆ ದೇಶವನ್ನು ಒಂದುಗೂಡಿಸುತ್ತದೆಯೇ?'' ಎಂದು ಸಂಸದ ರಾಜಾ ಪ್ರಶ್ನಿಸಿದರು.

 ಉರ್ದುವಿನಲ್ಲಿ ಜಿನ್ನಾ ಮಾತು ಪಾಕಿಸ್ತಾನಕ್ಕೆ ಕಾರಣ

ಉರ್ದುವಿನಲ್ಲಿ ಜಿನ್ನಾ ಮಾತು ಪಾಕಿಸ್ತಾನಕ್ಕೆ ಕಾರಣ

ಪಾಕಿಸ್ತಾನ ಹುಟ್ಟಿದ ಕೆಲವೇ ದಿನಗಳಲ್ಲಿ, ರಾಷ್ಟ್ರದ ಪಿತಾಮಹ ಜಿನ್ನಾ ಪೂರ್ವ ಪಾಕಿಸ್ತಾನದ ದಕ್ಕಾಗೆ ಹೋಗಿ ಉರ್ದುವಿನಲ್ಲಿ ಮಾತನಾಡುತ್ತಿದ್ದಾಗ ಒಬ್ಬ ಚಿಕ್ಕ ಹುಡುಗ ಎದ್ದು ನಿಂತು ಅವರಿಗೆ ಬಾಂಗ್ಲಾ ತಿಳಿದಿದೆಯೇ ಹೊರತು ಉರ್ದು ಅಲ್ಲ ಎಂದು ಹೇಳಿದರು. ಇದರ ಹೊರತಾಗಿಯೂ, ಅವರು ಉರ್ದುವಿನಲ್ಲಿ ಮಾತನಾಡುವುದನ್ನು ಮುಂದುವರೆಸಿದರು. ಅದು ಪಾಕಿಸ್ತಾನದ ವಿಭಜನೆಗೆ ಕಾರಣವಾಯಿತು ಎಂದು ಅವರು ಹೇಳಿದರು.

ಭಾರತವನ್ನು 'ಯುನಿಯನ್ ಆಫ್ ಸ್ಟೇಟ್ಸ್' ಎಂದು ಹೆಸರಿಸುವುದು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಕಷ್ಟಕರವಾದ ಕೆಲಸವಾಗಿತ್ತು. ಏಕೆಂದರೆ ಆಗಿನ ಆಡಳಿತಾರೂಢ ಕಾಂಗ್ರೆಸ್ ಈ ಪದವನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಹಾಗಾಗಿ ನನ್ನ ಇಚ್ಛೆಯಿಲ್ಲದೆ ಬಲವಂತವಾಗಿ ಸಂವಿಧಾನದಲ್ಲಿ 'ಭಾರತಂ' ಪದವನ್ನು ಅಳವಡಿಸಲಾಗಿದೆ ಎಂಬ ಅಂಬೇಡ್ಕರ್ ಹೇಳಿಕೆಯನ್ನು ಸಂಸದ ರಾಜಾ ಉಲ್ಲೇಖಿಸಿದ್ದಾರೆ.

 ಕೇಂದ್ರ ಸರ್ಕಾರವು ಹೆಚ್ಚಿನ ಅಧಿಕಾರ ಹೊಂದಿದೆ

ಕೇಂದ್ರ ಸರ್ಕಾರವು ಹೆಚ್ಚಿನ ಅಧಿಕಾರ ಹೊಂದಿದೆ

ಸಂವಿಧಾನವು ಮೂರು ಅಧಿಕಾರಗಳ ಪಟ್ಟಿಯನ್ನು ಒದಗಿಸುತ್ತದೆ. ಅವುಗಳೆಂದರೆ ಕೇಂದ್ರ, ರಾಜ್ಯ ಮತ್ತು ಸಮವರ್ತಿ ಪಟ್ಟಿ ಎಂದು ಸೂಚಿಸಿದ ರಾಜಾ, ಕೇಂದ್ರ ಸರ್ಕಾರವು ಹೆಚ್ಚಿನ ಅಧಿಕಾರವನ್ನು ಹೊಂದಿದೆ ಎಂದು ಹೇಳಿದ್ದಾರೆ. ತಂಜಾವೂರು ದೇವಸ್ಥಾನದಲ್ಲಿ ರಾಜ ರಾಜ ಚೋಳನ ಪ್ರತಿಮೆಯನ್ನು ಸ್ಥಾಪಿಸಲು ಕರುಣಾನಿಧಿ ಬಯಸಿದಾಗ, ಅವರು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ದೇವಾಲಯವು ಪುರಾತತ್ತ್ವ ಶಾಸ್ತ್ರದ ನಿಯಂತ್ರಣದಲ್ಲಿತ್ತು. ಇದನ್ನು ಕೇಂದ್ರ ಸರ್ಕಾರವು ನಿಯಂತ್ರಿಸುತ್ತದೆ ಎಂದು ಅವರು ಹೇಳಿದರು. ಆರಂಭದಲ್ಲಿ ದ್ರಾವಿಡ ನಾಡಿನ ಬೇಡಿಕೆಯನ್ನು ಮುಂದಿಟ್ಟು, 1962ರಲ್ಲಿ ಪ್ರತ್ಯೇಕತೆಯ ಬೇಡಿಕೆಗೆ ಕಡಿವಾಣ ಹಾಕಲು ತಂದ ಕಾನೂನಿಂದಾಗಿ ಅಂದಿನ ಸಿಎಂ ಅಣ್ಣಾ ಅದನ್ನು ಕೈಬಿಡಬೇಕಾಯಿತು ಎಂದರು.

 ಹಕ್ಕುಗಳನ್ನು ಮೊಟಕುಗೊಳಿಸಲು ಕಾನೂನು

ಹಕ್ಕುಗಳನ್ನು ಮೊಟಕುಗೊಳಿಸಲು ಕಾನೂನು

ಸಂಸತ್ತಿನಲ್ಲಿ ಈ ಬಗ್ಗೆ ಮಾತನಾಡಿದ ಅಣ್ಣಾ, ತಮಿಳುನಾಡಿನ ಬೇಡಿಕೆಯನ್ನು ನಿಯಂತ್ರಿಸಲು ಇದನ್ನು ತರಲಾಗಿದೆ ಎಂದು ನನಗೆ ತಿಳಿದಿದೆ. ನಮ್ಮ ಹಕ್ಕುಗಳನ್ನು ಮೊಟಕುಗೊಳಿಸಲು ಕಾನೂನನ್ನು ತರುವುದು ನೋವಿನ ಸಂಗತಿಯಾಗಿದೆ. ಆದರೆ ಇದು ವಿರೋಧಿ ರೀತಿಯಲ್ಲಿ ಅಲ್ಲ, ಬದಲಾಗಿ ನಾಯಕತ್ವದ ರೀತಿಯಲ್ಲಿಎಂದು ಅವರು ನೆನಪಿಸಿಕೊಂಡರು.

 ಅಮಿತ್‌ ಶಾ ಏಕತೆ ಬೇಕಾದರೆ ಹಿಂದಿ ಕಲಿಯಿರಿ ಎನ್ನುತ್ತಾರೆ

ಅಮಿತ್‌ ಶಾ ಏಕತೆ ಬೇಕಾದರೆ ಹಿಂದಿ ಕಲಿಯಿರಿ ಎನ್ನುತ್ತಾರೆ

ರಾಜ್ಯಗಳಿಗೆ ಸಣ್ಣಪುಟ್ಟ ಹಕ್ಕುಗಳೂ ಇಲ್ಲ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳನ್ನು ಒಂದೇ ರೀತಿ ನೋಡಬೇಕೆಂದು ಹೇಳುತ್ತಾರೆ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಿಮಗೆ ಏಕತೆ ಬೇಕಾದರೆ ಹಿಂದಿ ಕಲಿಯಿರಿ ಎಂದು ಹೇಳುತ್ತಾರೆ. ಪಕ್ಷದ ಸಂಸ್ಥಾಪಕ ಪಿತಾಮಹ ಪೆರಿಯಾರ್ ಅವರು ಸಾಯುವವರೆಗೂ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿದರು. ಆದರೆ ನಾವು (ಡಿಎಂಕೆ) ನಮ್ಮ ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯ ಸಮಗ್ರತೆಯ ಬೇಡಿಕೆಯನ್ನು ಬದಿಗಿಟ್ಟಿದ್ದೇವೆ. ಆದ್ದರಿಂದ, ನಾನು ಇದನ್ನು ಅತ್ಯಂತ ನಮ್ರತೆಯಿಂದ ಹೇಳುತ್ತಿದ್ದೇನೆ. ನಮ್ಮ ಸಿಎಂ ಇಲ್ಲಿಯವರೆಗೆ ಅಣ್ಣಾ ಅವರ ಹಾದಿಯಲ್ಲಿ ಸಾಗುತ್ತಿದ್ದಾರೆ, ಪೆರಿಯಾರ್ ಮಾರ್ಗದಲ್ಲಿ ನಮ್ಮನ್ನು ತಳ್ಳಬೇಡಿ. ಪ್ರತ್ಯೇಕ ರಾಜ್ಯಕ್ಕಾಗಿ ನಮ್ಮ ಬೇಡಿಕೆಯನ್ನು ಪುನರುಜ್ಜೀವನಗೊಳಿಸಬೇಡಿ. ನಮಗೆ ರಾಜ್ಯ ಸ್ವಾಯತ್ತತೆ ಕೊಡಿ,'' ಎಂದರು.

ವರದಿಗಳ ಪ್ರಕಾರ, ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಚುನಾಯಿತ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಡಿಎಂಕೆ ಸರ್ಕಾರ ಅಥವಾ ಸಿಎಂಗೆ ಅಪಖ್ಯಾತಿ ತರುವಂತಹ ಏನಾದರೂ ಮಾಡಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+