ಸಿದ್ದರಾಮಯ್ಯ ನಿವೃತ್ತಿಯಾದ್ರೆ, ನಾನು ಕೂಡ ನಿವೃತ್ತಿಯಾಗುವೆ: ಸಿ.ಪುಟ್ಟರಂಗಶೆಟ್ಟಿ
ಚಾಮರಾಜನಗರ, ಜನವರಿ, 22: ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕೆಂದು ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಮರಾಜನಗರದಲ್ಲಿ ಹೇಳಿದರು.
ಚಾಮರಾಜನಗರದಲ್ಲಿ ನಡೆದ ಕುರುಬರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಹರಿಕಾರರು, ನನ್ನ ನೆಚ್ಚಿನ ನಾಯಕರಾದ ಸಿದ್ದರಾಮಯ್ಯ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಬೇಕು.
ಸಿದ್ದರಾಮಯ್ಯರನ್ನ
ಕಂಡರೇ
ಮೋದಿಗೆ
ಭಯ:
ಕಾಂಗ್ರೆಸ್
ಶಾಸಕ
ಪುಟ್ಟರಂಗಶೆಟ್ಟಿ
ವ್ಯಂಗ್ಯ
2013ರಲ್ಲಿ
ಸಿದ್ದರಾಮಯ್ಯನವರು
ಮುಖ್ಯಮಂತ್ರಿಯಾಗಿ
5
ವರ್ಷಗಳ
ಕಾಲ
ಹಿಂದುಳಿದ
ವರ್ಗಗಳ
ಕಲ್ಯಾಣಕ್ಕಾಗಿ
ಹೆಚ್ವಿನ
ಒತ್ತು
ನೀಡಿದ್ದರು.
ಸಿದ್ದರಾಮಯ್ಯ
ಸಿಎಂ
ಆಗಿದ್ದ
ಅವಧಿಯಲ್ಲಿ
ತಾಲೂಕು
ಹಾಗೂ
ಜಿಲ್ಲಾ
ಕೇಂದ್ರಗಳಲ್ಲಿ
ಹಿಂದುಳಿದ
ವರ್ಗಗಳ
ಸಮುದಾಯ
ಭವನಗಳು
ನಿರ್ಮಾಣಕ್ಕಾಗಿ
ಹೆಚ್ಚಿನ
ಅನುದಾನ
ನೀಡಿದ್ದರು
ಎಂದರು.
ಹಾಗೆಯೇ ನನ್ನ ಕ್ಷೇತ್ರದಲ್ಲಿ ತಾಲೂಕು ಕುರುಬರ ಸಂಘದ ಸಮುದಾಯ ಭವನಕ್ಕೆ 1 ಕೋಟಿ ರೂಪಾಯಿ, ಉಪ್ಪಾರ ಸಮುದಾಯ ಭವನಕ್ಕೆ 2 ಕೋಟಿ ರೂಪಾಯಿ, ಅಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರು. ಅವರು ಮತ್ತೆ ಮುಖ್ಯಮಂತ್ರಿ ಆದರೆ ಸಾಮಾಜಿಕ ನ್ಯಾಯ ದೊರೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ರಾಜಕೀಯದಿಂದ ನಿವೃತ್ತಿಯಾದರೇ ನಾನು ನಿವೃತ್ತಿಯಾಗುತ್ತೇನೆ ಎಂದು ಘೋಷಿಸಿದರು.
STಗೆ ಸೇರಿಸಲು ಕುಲಶಾಸ್ತೀಯ ಆಧ್ಯಯನ
ಉಪ್ಪಾರ ಸಮುದಾಯದವನಾದ ನಾನು ಮೂರು ಬಾರಿ ಶಾಸಕನಾಗಲು ಸಿದ್ದರಾಮಯ್ಯ ಅವರ ಕೊಡುಗೆ ಅಪಾರವಿದೆ. ನಂತರ ನಮ್ಮ ಹಕ್ಕುಗಳನ್ನು ರಕ್ಷಣೆ ಮಾಡುವಲ್ಲಿ ನಿರಂತರವಾಗಿ ಶ್ರಮಿಸಿದ್ದರು. ನಾನು ಅವರ ಜೊತೆಯಲ್ಲಿಯೇ ಬೆಳೆದಿದ್ದೇನೆ. ಉಪ್ಪಾರ ಸಮಾಜವನ್ನು ಎಸ್ಟಿಗೆ ಸೇರಿಸಲು ಕುಲಶಾಸ್ತೀಯ ಆಧ್ಯಯನಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಈಗ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡಿದೆ. ಅವರ ಅವಧಿಯಲ್ಲಿ ಪೂರ್ಣಗೊಂಡಿದ್ದರೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ನಮ್ಮ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡುತ್ತಿದ್ದರು.
ಮುಂದಿನ ದಿನಗಳಲ್ಲಿ ಸಹಕಾರ ಸಂಘ ಸ್ಥಾಪನೆ
ನಗರದ
ಹೃದಯ
ಭಾಗದಲ್ಲಿ
ಇಷ್ಟೊಂದು
ಪ್ರಮಾಣದ
ಜಾಗ
ಮಾಡಿಕೊಟ್ಟ
ಸಮಾಜದ
ಹಿರಿಯರಾದ
ಬೆಣ್ಣೆ
ರಾಮೇಗೌಡ,
ನಂಜೇಗೌಡ
ಅವರನ್ನು
ಎಲ್ಲರೂ
ಸ್ಮರಿಸಿಕೊಳ್ಳಬೇಕು.
1967ರಲ್ಲಿ
ದೂರದೃಷ್ಠ
ವಹಿಸುವ
ಮೂಲಕ
ಸಮಾಜಕ್ಕೆ
ದೊಡ್ಡ
ಕೊಡುಗೆಯನ್ನು
ನೀಡಿದ್ದರು.
ಅದನ್ನು
ಉಳಿಸಿ
-
ಬೆಳಸುವುದು
ನಮ್ಮೆಲ್ಲರ
ಕರ್ತವ್ಯವಾಗಿದೆ
ಎಂದರು.
ಅಧ್ಯಕ್ಷತೆ
ವಹಿಸಿದ್ದ
ಸಂಘದ
ಉಪಾಧ್ಯಕ್ಷ
ಆರ್.ಉಮೇಶ್
ಮಾತನಾಡಿ,
ನಿಮ್ಮೆಲ್ಲರ
ಸಹಕಾರದಿಂದ
ಕುರುಬರ
ಸಂಘದಿಂದ
ವಿದ್ಯಾರ್ಥಿ
ನಿಲಯ,
ಅಂಗಡಿ
ಮಳಿಗೆ
ಉದ್ಘಾಟನೆಯಾಗಿದೆ.
5
ವರ್ಷಗಳ
ಶ್ರಮ
ಸಾರ್ಥಕಗೊಂಡಿದೆ.
ಸಿದ್ದರಾಮಯ್ಯ
ಅವರು
ಮುಖ್ಯಮಂತ್ರಿಯಾಗಿದ್ದಾಗ
ಹಾಸ್ಟೆಲ್
ನಿರ್ಮಾಣಕ್ಜೆ
50
ಲಕ್ಷ
ರೂಪಾಯಿ
ಮಂಜೂರು
ಮಾಡಿದ್ದರು
ಎಂದರು.
ಸಿದ್ದರಾಮಯ್ಯ ಸಿಎಂ ಆದ್ರೆ ಉದ್ಘಾಟನೆ
ಇನ್ನು ಕನಕ ಸಮುದಾಯ ಭವನಕ್ಕೆ 1 ಕೋಟಿ ರೂಪಾಯಿ ನೀಡಿದ್ದರು. ಮತ್ತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರೆ ಭವನ ಉದ್ಘಾಟನೆಯಾಗುತ್ತದೆ. ಅದೇ ರೀತಿಯಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳ ಸಚಿವರಾಗಿದ್ದಾಗ ಸಮುದಾಯಕ್ಕೆ 100 ಕೊಳವಿ ಬಾವಿ, ಅನೇಕ ಸವಲತ್ತುಗಳನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ
ಸಂಘದ
ಅಭಿವೃದ್ದಿ
ಜೊತೆಗೆ
ಮುಂದಿನ
ದಿನಗಳಲ್ಲಿ
ಸಿರಗಳ್ಳಿ
ಶ್ರೀ
ಲಕ್ಷ್ಮಿದೇವಿ
ದೇವಸ್ಥಾನ,
ಸೋಮೇಶ್ವರ
ದೇವಸ್ಥಾನ
ಜೀರ್ಣೊದ್ಧಾರ
ಹಾಗೂ
ಸಹಕಾರ
ಬ್ಯಾಂಕ್
ಸ್ಥಾಪನೆ
ಮಾಡಲಾಗುವುದು
ಎಂದರು.
ಇದೇ
ಸಂದರ್ಭದಲ್ಲಿ
ಸಮುದಾಯದ
ಗ್ರಾಮ
ಪಂಚಾಯತಿ
ಸದಸ್ಯರಿಗೆ
ಸನ್ಮಾನ
ಹಾಗೂ
ಪ್ರತಿಭಾವಂತ
ಮಕ್ಕಳಿಗೆ
ಪುರಸ್ಕಾರ
ನೀಡಿ,
ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ
ಸಂಘದ
ಗೌರವ
ಅಧ್ಯಕ್ಷ
ಡಿ.ಸೋಮಣ್ಣಗೌಡ,
ಕನಕ
ನೌಕರರ
ಸಂಘದ
ಅಧ್ಯಕ್ಷ
ನಿಂಗೇಗೌಡ,
ಪ್ರಧಾನ
ಕಾರ್ಯದರ್ಶಿ
ಕೆ.ಪಿ.ನಾಗರಾಜು,
ಖಜಾಂಚಿ
ಕುದೇರು
ಲಿಂಗಣ್ಣ,
ಸಹ
ಕಾರ್ಯದರ್ಶಿ
ಮಣಿಕಂಠ,
ಸಂಘಟನಾ
ಕಾರ್ಯದರ್ಶಿ
ಶಂಕರ್,
ಮಾಜಿ
ಅಧ್ಯಕ್ಷ
ಎಸ್.ರಾಜಶೇಖರ್,
ನಿರ್ದೇಶಕರಾದ
ಕಾಳನಹುಂಡಿ
ಬಸವರಾಜು,
ಮಹದೇವಸ್ವಾಮಿ,
ಮಾದಪ್ಪ,
ಶಾರದಮ್ಮ,
ಸೋಮಣ್ಣ,
ಮುಖಂಡರಾದ
ಮಹೇಶ್,
ಸ್ವಾಮಿ,
ಮಾದಾಪುರ
ರವಿ,
ಶಿಕ್ಷಕ
ಬಸವರಾಜು
ಸೇರಿದಂತೆ
ಮತ್ತತರರು
ಹಾಜರಿದ್ದರು.