ತಮಿಳರು ವಿರೋಧಿಸಿದರೂ ಮೇಕೆದಾಟು ಯೋಜನೆ ಜಾರಿ: ಸಿಎಂ
ಮೈಸೂರು, ಅಕ್ಟೋಬರ್ 07: ಕೃಷ್ಣಾ, ಕಾವೇರಿ ಸೇರಿದಂತೆ ಅಂತಾರಾಜ್ಯ ನದಿ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬುದು ನಮ್ಮ ನಿಲುವು. ಬಹು ನಿರೀಕ್ಷಿತ ಮೇಕೆದಾಟು ಯೋಜನೆಯ ಡಿಪಿಆರ್ ಸಿದ್ಧವಾಗಿದ್ದು, ಶೀಘ್ರದಲ್ಲೇ ಯೋಜನೆ ಜಾರಿಗೊಳಿಸಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಹು ನಿರೀಕ್ಷಿತ ಮೇಕೆದಾಟು ಯೋಜನೆ ಸಂಬಂಧ 5,700 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ. ಸಂಪುಟ ಸಭೆಯಲ್ಲಿ ಪರಾಮರ್ಶೆ ನಡೆಸಿದ ಬಳಿಕ ಯೋಜನೆಗೆ ಚಾಲನೆ ನೀಡಲಾಗುವುದು. ಇದರಿಂದ ವಿದ್ಯುತ್ ಉತ್ಪಾದನೆ ಮಾಡಲಾಗುವುದು. ಹೆಚ್ಚುವರಿ ನೀರು ಸಂಗ್ರಹಿಸಲಾಗುವುದು ಎಂದರು. [ಮೇಕೆದಾಟು ಯೋಜನೆ ವಿವಾದವೇನು?]
ಕಾವೇರಿ
ಕಣಿವೆಯಲ್ಲಿ
18.85
ಲಕ್ಷ
ಎಕರೆ
ಪ್ರದೇಶದಲ್ಲಿ
ಅಚ್ಚುಕಟ್ಟು
ಇದೆ.
ಈ
ಪೈಕಿ
6.15
ಲಕ್ಷ
ಎಕರೆಯಲ್ಲಿ
ಬೆಳೆ
ಇದೆ.
ಹೇಮಾವತಿ
ಬಲದಂಡೆ
ನಾಲೆ
ಮೂಲಕ
ಈ
ಬಾರಿ
ಬೆಳೆಗಳಿಗೆ
ನೀರು
ಬಿಡಲು
ಆಗಲಿಲ್ಲ.ಇದರಿಂದ
1.80
ಲಕ್ಷ
ಎಕರೆ
ಪ್ರದೇಶದಲ್ಲಿ
ಬೆಳೆ
ಹಾಳಾಗಿದೆ.
[ಮೇಕೆದಾಟು
ಕುಡಿಯುವ
ನೀರಿನ
ಯೋಜನೆ
ಡಿಪಿಆರ್
ಸಿದ್ಧ]
ಉಳಿದ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಒಳಗಾಗಿರುವ ಪ್ರದೇಶಗಳಿಗೆ ಹೆಚ್ಚಿನ ನೆರವು ಕೋರಿ ಶೀಘ್ರವೇ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು. 110 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಇನ್ನೂ ಕೆಲ ತಾಲೂಕುಗಳು ಪಟ್ಟಿಗೆ ಸೇರಬಹುದು ಎಂದರು.
ಕಾವೇರಿ
ಕಣಿವೆಯ
ಸ್ಥಿತಿಗತಿ
ಪರಿಶೀಲನೆಗೆ
ನೇಮಕಗೊಂಡಿರುವ
ಕೇಂದ್ರ
ತಂಡ
ಕಾವೇರಿ
ಕೊಳ್ಳದಲ್ಲಿ,
ಕೆ
ಆರ್
ಎಸ್,
ಹಾರಂಗಿ,
ಕಬಿನಿ
ಹಾಗೂ
ಹೇಮಾವತಿ
ಅಣೆಕಟ್ಟಿನ
ಪ್ರದೇಶದಲ್ಲಿ
ಅಧ್ಯಯನ
ನಡೆಸಲಿದೆ
ಎಂದು
ಹೇಳಿದರು.
(ಒನ್ಇಂಡಿಯಾ
ಸುದ್ದಿ)
ಏನಿದು ಮೇಕೆದಾಟು ಯೋಜನೆ?
ಮಳೆಗಾಲದ
ಸಂದರ್ಭದಲ್ಲಿ
ಕಾವೇರಿ
ನದಿಯಿಂದ
ಹೆಚ್ಚು
ನೀರು
ತಮಿಳುನಾಡಿಗೆ
ಹರಿದು
ಹೋಗುತ್ತದೆ.
ಅಂತಹ
ಸಂದರ್ಭದಲ್ಲಿ
ನೀರನ್ನು
ಸಂಗ್ರಹಿಸಿ,
ಮೈಸೂರು,
ಬೆಂಗಳೂರು
ನಗರಗಳಿಗೆ
ಕುಡಿಯುವ
ನೀರಿಗಾಗಿ
ಉಪಯೋಗಿಸಿಕೊಳ್ಳಲು
ಮೇಕೆದಾಟು
ಬಳಿ
ಡ್ಯಾಂ
ನಿರ್ಮಾಣ
ಮಾಡುವುದು
ಯೋಜನೆ.
.
ಪ್ರತಿ
ವರ್ಷ
ನಾವು
ಸುಮಾರು
192
ಟಿಎಂಸಿ
ನೀರನ್ನು
ತಮಿಳುನಾಡಿಗೆ
ಬಿಡುತ್ತೇವೆ.
ಜೂನ್,
ಜುಲೈ
ಮತ್ತು
ಆಗಸ್ಟ್
ತಿಂಗಳಿನಲ್ಲಿ
ಇದರ
ಪ್ರಮಾಣ
ಕಡಿಮೆ
ಇರುತ್ತದೆ.
ಕೆಲವು
ಸಲ
ಹೆಚ್ಚಿನ
ನೀರನ್ನು
ಬಿಡುಗಡೆ
ಮಾಡಿದಾಗ
ಅದು
ಸಮುದ್ರ
ಸೇರುತ್ತದೆ.
ತಮಿಳುನಾಡಿನ ವಿರೋಧ ಏಕೆ?
ಆದರೆ, ತಮಿಳುನಾಡು ಈ ಯೋಜನೆಗೆ ಭಾರೀ ವಿರೋಧ ವ್ಯಕ್ತಪಡಿಸಿದೆ. ಈ ಯೋಜನೆಗೆ ಅನುಮತಿ ನೀಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯಲಾಗಿದೆ. ಅಣೆಕಟ್ಟು ನಿರ್ಮಾಣ ಮಾಡಿದರೆ ಕಾಡು ನಾಶವಾಗುತ್ತದೆ ಎಂಬುದು ತಮಿಳುನಾಡಿನ ವಾದ.
ಕರ್ನಾಟಕ ಸರ್ಕಾರ ಯೋಜನೆಯಿಂದ ತಮಿಳುನಾಡಿಗೆ ನೀರಿನ ಕೊರತೆ ಉಂಟಾಗುವುದಿಲ್ಲ. ಯಾವುದೇ ಹಾನಿಯೂ ಆಗುವುದಿಲ್ಲ. ಎಲ್ಲವನ್ನು ಗಮನದಲ್ಲಿಟ್ಟುಕೊಂಡೇ ಯೋಜನಾ ವರದಿ ಸಿದ್ಧಪಡಿಸಲಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.
ಯೋಜನೆಯ ಸಮಗ್ರ ಯೋಜನಾ ವರದಿ
ಮೇಕೆದಾಟು ಯೋಜನೆಯ ಸಮಗ್ರ ಯೋಜನಾ ವರದಿ ಪ್ರಕಾರ ಎರಡು ಕಡೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡಲಾಗುತ್ತದೆ. ಸುಮಾರು 60 ಟಿಎಂಸಿ ನೀರು ಸಂಗ್ರಹವಾಗಲಿದೆ. ಕುಡಿಯುವ ನೀರಿನ ಪೂರೈಕೆ ಜೊತೆ ವಿದ್ಯುತ್ ಉತ್ಪಾದನೆಗೂ ಆದ್ಯತೆ ನೀಡಲಾಗುತ್ತದೆ. ಈ ಯೋಜನೆಗೆ ಸುಮಾರು 5 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಮೇಕೆದಾಟು ಕಾನೂನು ಸ್ಥಿತಿಗತಿ ಏನು?
ಕಾವೇರಿ ನ್ಯಾಯಧೀಕರಣದ ತೀರ್ಪು 2007ರ ಫೆಬ್ರವರಿ 2ರಂದು ಹೊರಬಿತ್ತು. ಆಗ ಕರ್ನಾಟಕ ಸರ್ಕಾರ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆ ನಮ್ಮ ಮುಂದಿದೆ ಎಂದು ನ್ಯಾಯಾಧೀಕರಣ ಮುಂದೆ ಅರ್ಜಿ ಸಲ್ಲಿಸಿದೆ. ಇದೇ ರೀತಿ ಸುಪ್ರೀಂಕೋರ್ಟ್ಗೂ ಸಹ ಅರ್ಜಿಯನ್ನು ಸಲ್ಲಿದ್ದೇವೆ. ಅದರ ತೀರ್ಪನ್ನು ನ್ಯಾಯಾಧೀಕರಣವಿನ್ನೂ ನೀಡಬೇಕಾಗಿದೆ.