ಚಾಮರಾಜನಗರ ಜಿಲ್ಲೆಯಲ್ಲಿ ರಾಜ್ಕುಮಾರ್ ರಂಗಮಂದಿರ ಲೋಕಾರ್ಪಣೆ
ಚಾಮರಾಜನಗರ, ಆಗಸ್ಟ್, 15: ಚಾಮರಾಜನಗರ ಜಿಲ್ಲೆಯಾಗಿ 25 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ದಶಕದಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದ ರಂಗಮಂದಿರ ಕಾಮಗಾರಿಯನ್ನು ಚುರುಕುಗೊಳಿಸಿ ಸಚಿವ ವಿ.ಸೋಮಣ್ಣ ಸ್ವಾತಂತ್ರ್ಯ ದಿನಾಚರಣೆಯಂದು ಲೋಕಾರ್ಪಣೆಗೊಳಿಸಿದರು. ಜೊತೆಗೆ ರಂಗಮಂದಿರಕ್ಕೆ 'ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರ' ಎಂದು ಹೆಸರಿಡಲಾಯಿತು.
ಜನಪದೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಸಿರಿವಂತವಾಗಿರುವ ಜಿಲ್ಲೆಯಲ್ಲಿ ಒಂದು ಸುಸ್ಸಜಿತ ರಂಗಮಂದಿರಕ್ಕಾಗಿ ಕೂಗು ಎದ್ದಿತ್ತು. ಒಂದು ಸುಸಜ್ಜಿತ ರಂಗಮಂದಿರ ಬೇಕು ಎನ್ನುವುದು ಹಲವು ಕಲಾವಿದರ ಕೂಗಾಗಿತ್ತು. ಕಲಾವಿದರ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ 2009-10ನೇ ಸಾಲಿನಲ್ಲಿ ರಂಗಮಂದಿರ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಜಿಲ್ಲಾಡಳಿತ ಭವನದ ಸಮೀಪ ಒಂದು ಎಕರೆ 20 ಗುಂಟೆ ಪ್ರದೇಶದಲ್ಲಿ 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಆದರೆ ಒಳಾಂಗಣದ ಕೆಲಸ ಆಗಿರಲಿಲ್ಲ.
ಒಳಾಂಗಣದಲ್ಲಿ ಸ್ಥಳಾವಕಾಶ ಕಡಿಮೆ ಇದೆ. ಹಾಗೂ ರಂಗಮಂದಿರದ ರೀತಿಯಲ್ಲಿ ನಿರ್ಮಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಮಹದೇವ ಪ್ರಸಾದ್ ಮತ್ತೆ ಕೆಲವು ಕಾಮಗಾರಿ ನಡೆಸಲು ಸೂಚಿಸಿದ್ದರು. ಬಳಿಕ ಉಳಿದ ಕೆಲಸಗಳನ್ನು ಮಾಡಲು ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಸರ್ಕಾರ 2.50 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಕೆಲಸ ಮಾತ್ರ ನಿಧಾನಗತಿಯಲ್ಲಿ ಸಾಗಿತ್ತು. ಹಣವಿದ್ದರೂ ಕೆಲಸ ಪೂರ್ಣ ಆಗಿಲ್ಲ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಲಾವಿದರು, ರಂಗಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದರು.
ಕಾಮಗಾರಿಗೆ
ಚುರುಕು
ನೀಡಿದ್ದ
ವಿ
ಸೋಮಣ್ಣ:
ವಿ.ಸೋಮಣ್ಣ
ಜಿಲ್ಲಾ
ಉಸ್ತುವಾರಿ
ಸಚಿವರಾದ
ಬಳಿಕ
ಈ
ವಿಚಾರ
ಗಮನಕ್ಕೆ
ಬರುತ್ತಿದ್ದಂತೆಯೇ
ಅಧಿಕಾರಿಗಳನ್ನು
ತರಾಟೆಗೆ
ತೆಗೆದುಕೊಂಡಿದ್ದರು.
ಕಾಮಗಾರಿ
ಬೇಗ
ಮುಗಿಸುವಂತೆ
ತಾಕೀತು
ಮಾಡಿದ್ದರು.
ಜಿಲ್ಲೆಯಾಗಿ
25
ವರ್ಷ
ತುಂಬುತ್ತಿರುವ
ಸಂದರ್ಭದಲ್ಲಿ
ರಂಗಮಂದಿರದ
ಉದ್ಘಾಟನೆ
ಆಗಬೇಕು
ಎಂದು
ಅವರು
ಕಟ್ಟುನಿಟ್ಟಾಗಿ
ಹೇಳಿದ್ದರು.
ಅದರಂತೆಯೇ ಜುಲೈ ತಿಂಗಳ ನಂತರ ಕಾಮಗಾರಿ ವೇಗವಾಗಿ ಒಟ್ಟಾರೆ ರಂಗಮಂದಿರಕ್ಕೆ 6.50 ರೂಪಾಯಿ ಕೋಟಿಯಷ್ಟು ವೆಚ್ಚವಾಗಿದೆ. ಇನ್ನು ಲಿಫ್ಟ್ ಅಳವಡಿಸುವ ಕಾರ್ಯ ಬಾಕಿ ಇದೆ. ಇಲ್ಲಿ ಸುಮಾರು 500 ಜನರ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇದೆ. ನಾಟಕ ಕಲಾವಿದರು ಸೇರಿದಂತೆ ರಂಗ ಚಟುವಟಿಕೆಗೆ ಈಗ ಒಂದು ಪ್ರಶಸ್ತ ಸ್ಥಳ ಸಿಕ್ಕಿದಂತಾಗಿದೆ ಎಂದರು.
ಪುನೀತ್ ಭಾವಚಿತ್ರ ಕೊಡುಗೆ:
ಇನ್ನು ರಂಗಮಂದಿರ ಲೋಕಾರ್ಪಣೆ ಸಮಾರಂಭದಲ್ಲಿ ಗಣ್ಯರಿಗೆ ಪುನೀತ್ ಭಾವಚಿತ್ರವನ್ನು ಕೊಟ್ಟು ಸನ್ಮಾನಿಸಿದ್ದು ವಿಶೇಷವಾಗಿತ್ತು. ಅಪರೂಪದ ಮನುಷ್ಯ ಅಪ್ಪುವನ್ನು ಸ್ಮರಿಸುತ್ತಾ ಕಾರ್ಯಕ್ರಮದಲ್ಲಿ ಗಣ್ಯರಿಗೆ ಅವರ ಭಾವಚಿತ್ರವನ್ನು ಕೊಟ್ಟಿರುವುದು ಗಮನ ಸೆಳೆದಿದೆ.