ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ದಾಳಿಗೆ ಆನೆಮರಿ ಬಲಿ
ಗುಂಡ್ಲುಪೇಟೆ, ಮಾರ್ಚ್ 7: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ದಾಳಿಗೆ ಮರಿಯಾನೆಯೊಂದು ಬಲಿಯಾದ ಘಟನೆ ಈಚೆಗೆ ನಡೆದಿದೆ. ಹುಲಿ ಯೋಜನೆಯ ಕುಂದಕೆರೆ ವಲಯಕ್ಕೆ ಸೇರಿದ ಲೊಕ್ಕೆರೆ ಬೀಟ್ ಬಳಿ ಸುಮಾರು 1 ವರ್ಷ 2 ತಿಂಗಳ ಆನೆಯ ಗಂಡು ಮರಿ ಹುಲಿ ದಾಳಿಗೆ ಬಲಿಯಾಗಿದೆ.
ಮಾರ್ಚ್ 6ರಂದು ಗಸ್ತು ನಡೆಸುತ್ತಿದ್ದ ಅರಣ್ಯ ಸಿಬ್ಬಂದಿಗೆ ಆನೆ ಮರಿಯ ಕಳೇಬರ ಪತ್ತೆಯಾಗಿದ್ದು, ಹತ್ತಿರ ಹೋಗಿ ನೋಡಿದಾಗ ಹುಲಿ ದಾಳಿಗೆ ಸಾವನ್ನಪ್ಪಿರುವುದು ಗೊತ್ತಾಗಿದೆ. ಕೂಡಲೇ ಅವರು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ.[ಜಂಗಲ್ ಡೈರಿ: ಕಾರಣ ತಿಳಿಯದ ಕಾಡಿನ ಬೆಂಕಿಗೆ ಕಣ್ಮುಚ್ಚುತ್ತಿವೆ ಪ್ರಾಣಿ-ಪಕ್ಷಿ]
ಪಶುವೈದ್ಯರೊಂದಿಗೆ ಸ್ಥಳಕ್ಕೆ ತೆರಳಿದ ವಲಯಾರಣ್ಯಾಧಿಕಾರಿ ಶಿವಾನಂದ ಮಗ್ದುಂ, ಡಿಆರ್ ಎಫ್ ಓ ಶಬ್ಬೀರ್, ಗಾರ್ಡ್ ನವೀನ್ ಹಾಗೂ ಇತರರು ಭೇಟಿ ಮಾಡಿ ಮರಣೋತ್ತರ ಪರೀಕ್ಷೆ ನಂತರ ಅಂತ್ಯಸಂಸ್ಕಾರ ಮಾಡಿದರು. ಆನೆಯ ಕುತ್ತಿಗೆ ಭಾಗದಲ್ಲಿ ಹುಲಿಯು ಕಚ್ಚಿ ಮಾಂಸವನ್ನು ಕಿತ್ತು ತಿಂದ ಗುರುತುಗಳು ಕಂಡುಬಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Comments
chamarajanagar bandipur tiger elephant death wild life district news ಚಾಮರಾಜನಗರ ಬಂಡೀಪುರ ಹುಲಿ ಆನೆ ಸಾವು ಜಿಲ್ಲಾಸುದ್ದಿ
English summary
A baby elephant killed by a tiger in Bandipur national park, Chamrajanagar district. Which was found by forest department staff on March 6th.