ಭಾರತದ ಕೋಟ್ಯಧಿಪತಿಗಳಿಗೆ ಈ ವರ್ಷ $21 ಬಿಲಿಯನ್ ನಷ್ಟ
ಹಾಂಕಾಂಗ್/ಸೋಲ್, ಡಿಸೆಂಬರ್ 24: ಈ ವರ್ಷ ಬಿಲಿಯನೇರ್ಗಳ ಪಾಲಿಗೆ ಕಹಿ ನೀಡಿದೆ. ಜಗತ್ತಿನ ಅತಿ ವೇಗದ ಬೆಳವಣಿಗೆಯ ಪ್ರದೇಶವಾದ ಏಷ್ಯಾ, 2018ರಲ್ಲಿ ಆರ್ಥಿಕ ಹಿನ್ನಡೆ ಅನುಭವಿಸಿದೆ, ಅದರಲ್ಲಿಯೂ 500 ಸದಸ್ಯರ ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದಲ್ಲಿ ಸ್ಥಾನ ಪಡೆದಿರುವ ಏಷ್ಯಾದ 128 ಮಂದಿ ಒಟ್ಟಾರೆ $137 ಬಿಲಿಯನ್ ಡಾಲರ್ ಹಣವನ್ನು ಕಳೆದುಕೊಂಡಿದ್ದಾರೆ.
2012ರಿಂದ ಇದೇ ಮೊದಲ ಬಾರಿಗೆ ಏಷ್ಯಾ ಪ್ರದೇಶದಲ್ಲಿ ಬಿಲಿಯನೇರ್ಗಳ ಸಂಪತ್ತು ಕುಸಿತ ಕಂಡಿರುವುದು.
ಭಾರತದ 23 ಅತಿ ಶ್ರೀಮಂತರು ಒಟ್ಟಾರೆ $21 ಬಿಲಿಯನ್ ಹಣವನ್ನು ಕಳೆದುಕೊಂಡಿದ್ದಾರೆ. ಜಗತ್ತಿನ ಅತಿ ದೊಡ್ಡ ಉಕ್ಕು ತಯಾರಕ ಲಕ್ಷ್ಮಿ ಮಿತ್ತಲ್ $5.6 ಬಿಲಿಯನ್ ಅಂದರೆ, 29%ರಷ್ಟು ಒಟ್ಟಾರೆ ಸಂಪತ್ತಿನ ಪ್ರಮಾಣವನ್ನು ಕಳೆದುಕೊಂಡಿದ್ದಾರೆ. ಜಗತ್ತಿನ ನಾಲ್ಕನೆಯ ಅತಿ ದೊಡ್ಡ ಜನರಿಕ್ ಔಷಧ ತಯಾರಕ ಸನ್ ಫಾರ್ಮ್ಯಾಸಿಟಿಕಲ್ ಕೈಗಾರಿಕೆಯ ಸಂಸ್ಥಾಪಕ ದಿಲೀಪ್ ಸಾಂಘ್ವಿ ಅವರ ಸಂಪತ್ತು $4.6 ಬಿಲಿಯನ್ನಷ್ಟು ಕರಗಿದೆ.

ಆದರೆ, ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಮ್ಮ ಸಂಪತ್ತಿಗೆ $4 ಬಿಲಿಯನ್ ಹೆಚ್ಚುವರಿಯಾಗಿ ಸೇರಿಸಿಕೊಂಡಿದ್ದಾರೆ. ಜಪಾನಿನ ಅತಿ ಸಿರಿವಂತ ತಡಾಷಿ ಯನೈ $6.3 ಬಿಲಿಯನ್ ಸಂಪತ್ತನ್ನು ವೃದ್ಧಿಸಿಕೊಂಡಿದ್ದಾರೆ.
2018ರಲ್ಲಿ ಚೀನಾದ ತಂತ್ರಜ್ಞಾನ ವಲಯ ಭಾರಿ ಹೊಡೆತ ತಿಂದಿದೆ. ಭಾರತ ಮತ್ತು ದಕ್ಷಿಣ ಕೊರಿಯಾಗಳು ಕೂಡ ಇದರಿಂದ ಹೊರತಾಗಿಲ್ಲ. ಏಷ್ಯಾದ ಸಿರಿವಂತರ ಸಮಸ್ಯೆಗಳನ್ನು ನಿಭಾಯಿಸಲು ಬ್ಯಾಂಕುಗಳು ಮತ್ತು ಹಣ ವ್ಯವಸ್ಥಾಪಕರು ನೆರವಿಗೆ ಧಾವಿಸಿದ್ದರೂ ಈ ಇಳಿಕೆ ಉಂಟಾಗಿದೆ.
ಬ್ಲೂಮ್ಬರ್ಗ್ ಶ್ರೇಣಿಯಲ್ಲಿ ಸ್ಥಾನ ಪಡೆದಿರುವ 40 ಚೀನೀಯರ ಪೈಕಿ ಮೂರನೇ ಎರಡರಷ್ಟು ಮಂದಿ ಸಂಪತ್ತಿನ ನಷ್ಟ ಅನುಭವಿಸಿದ್ದಾರೆ.
ಈ ನಡುವೆ ತಂತ್ರಜ್ಞಾನ, ಜೈವಿಕ ತಂತ್ರಾಂಶ, ಔಷಧ ಕ್ಷೇತ್ರಗಳಿಂದ ನೂತನ ಕೋಟ್ಯಧಿಪತಿಗಳು ಈ ಸೂಚ್ಯಂಕದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕನಿಷ್ಠ ಆರು ಕೋಟ್ಯಧಿಪತಿಗಳು ಈ ವರ್ಷ ಮೃತಪಟ್ಟಿದ್ದಾರೆ. ಅವರು $29 ಬಿಲಿಯನ್ ಸಂಪತ್ತು ಬಿಟ್ಟುಹೋಗಿದ್ದಾರೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications