ಸುಸ್ತಿದಾರ ಮಲ್ಯರಿಂದ ಸಾಲ ವಸೂಲಿ ಕಷ್ಟ ಕಷ್ಟ
ಬೆಂಗಳೂರು, ಸೆ.2: ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಅತಿ ಹೆಚ್ಚು ಸಾಲ ಪಡೆದಿರುವ ಟಾಪ್ 50 ಕಂಪನಿಗಳ ಪೈಕಿ ವಿಜಯ್ ಮಲ್ಯ ಒಡೆತನದ ಕಂಪನಿಗಳು ಮುಂಚೂಣಿಯಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಅತಿ ಹೆಚ್ಚು ಸಾಲಗಾರ ಎಂಬ ಹಣೆಪಟ್ಟಿ ಯುಬಿ ಸಮೂಹ, ಕಿಂಗ್ ಫಿಷರ್ ಸಂಸ್ಥೆಯ ವಿಜಯ್ ಮಲ್ಯ ಅವರಿಗೆ ದಕ್ಕಿದ ಬೆನ್ನಲ್ಲೇ ಮದ್ಯದ ದೊರೆ ವಿಜಯಮಲ್ಯ ಅವರನ್ನ ಸುಸ್ತಿದಾರ (wilful defaulter) ಎಂದು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ. ಆದರೆ, ಈ ರೀತಿ ಘೋಷಿಸುವುದು ಸರಿಯಲ್ಲ ಎಂದು ಕಿಂಗ್ ಫಿಷರ್ ಸಂಸ್ಥೆ ಪ್ರತಿಕ್ರಿಯಿಸಿದೆ. [ಸಾಲದ ವಿಷ್ಯದಲ್ಲೂ ಮಲ್ಯ ಇಸ್ ಕಿಂಗ್]
ಕಿಂಗ್ ಫಿಷರ್ ಸಂಸ್ಥೆಯ ಮೂವರು ನಿರ್ದೇಶಕರೂ ಸೇರಿ ವಿಜಯ್ ಮಲ್ಯ ಅವರನ್ನು ಸುಸ್ತಿದಾರ ಎಂದು ಪರಿಗಣಿಸಬಾರದು ಎಂದು ಸುಪ್ರೀಂಕೋರ್ಟಿಗೆ ಮೊರೆ ಹೊಕ್ಕಿದ್ದಾರೆ. ಅದರೆ, ಸುಸ್ತಿದಾರನೆಂದರೂ ಸರಿ ಸಾಲಗಾರ ಎಂದರೂ ಸರಿ ಮಲ್ಯರಿಗೆ ಮಾತ್ರ ಸಾಲ ಹಿಂತಿರುಗಿಸುವ ಉದ್ದೇಶ ಇದ್ದ ಹಾಗೇ ಕಾಣುವುದಿಲ್ಲ.
ಬ್ಯಾಂಕಿಂಗ್ ನಲ್ಲಿ ಸಾಕಷ್ಟು ಸುಧಾರಣೆ, ಉದಾರೀಕರಣ, ನಿಯಮಗಳ ಬದಲಾವಣೆಗಳ ನಡುವೆಯೂ ಬ್ಯಾಂಕಿನಿಂದ ಸಾಲ ಪಡೆದು ಹಿಂತಿರುಗಿಸದ ಕಾರ್ಪೊರೆಟ್ ಸಂಸ್ಥೆಗಳ ಸಂಖ್ಯೆ ಬೆಳೆಯುತ್ತಲೆ ಇದೆ. ಅದರಲ್ಲೂ ಮಲ್ಯರಂಥ ಚಾಣಕ್ಷ ಸಾಲಗಾರ ಇದ್ದರೆ ಮುಗಿದೇ ಹೋಯ್ತು

ಮಲ್ಯ ತಲೆ ಮೇಲೆ ಹೊತ್ತಿರುವ ಸಾಲ ಎಷ್ಟು?
ಬ್ಯಾಂಕಿಂಗ್ ಕ್ಷೇತ್ರದ ಅಂದಾಜು ಪ್ರಕಾರ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಗೆ 8,000 ಕೋಟಿ ರೂ ಸಾಲ ನೀಡಲಾಗಿದೆ. ಇದಕ್ಕೆ ವಿಜಯ್ ಮಲ್ಯ ಅವರು ವೈಯಕ್ತಿಕ ಗ್ಯಾರಂಟಿ ಜತೆಗೆ ಕಂಪನಿ ಷೇರುಗಳು, ಯುಬಿ, ಯುನೈಟೆಡ್ ಸ್ಪಿರೀಟ್ಸ್ ಕಂಪನಿಯ ಷೇರುಗಳ ಖಾತ್ರಿ ನೀಡಿದ್ದರು.
ಮಾರುಕಟ್ಟೆಯಲ್ಲಿನ ಮಾತುಕತೆ ಪ್ರಕಾರ ಮಲ್ಯ ಅವರ ತಲೆ ಮೇಲೆ ಸರಿ ಸುಮಾರು 12,000 ಕೋಟಿ ರೂ ಸಾಲ ಇದೆಯಂತೆ.
ಬ್ಯಾಂಕಿನ ಸಾಲ ನಿಯಮ ಏನು ಹೇಳುತ್ತದೆ?
ಸಾಲದ ಖಾತೆಯಲ್ಲಿ 91ನೇ ದಿವಾದರೂ ವಾಪಸಾತಿ ಬಾರದಿದ್ದರೆ ಸಾಲ ನೀಡಿದ ಕಂಪನಿಯ ಆಸ್ತಿಪಾಸ್ತಿ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು, ಗ್ಯಾರಂಟಿ ನೀಡಿದ ಇತರೆ ಕಂಪನಿ ಅಥವಾ ವ್ಯಕ್ತಿಯ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಬಹುದಾಗಿದೆ. ಸದ್ಯದ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಹರಾಜು ಹಾಕಬಹುದಾಗಿದೆ.
ಅಂದರೆ 2014ನೇ ಸಾಲಿನ ಆರ್ಥಿಕ ವರ್ಷ ಆರಂಭಕ್ಕೂ ಮುನ್ನ ಕೂಡಾ ವಿಜಯ್ ಮಲ್ಯ ಅವರ ಕಿಂಗ್ ವಿಮಾನ ಒಂದು ಪೈಸೆಯನ್ನೂ ಮರುಪಾವತಿ ಮಾಡಿಲ್ಲ. ಕೈಯಲ್ಲಿ ಮೊತ್ತ ಇಲ್ಲ ಎಂದು ಮಲ್ಯ ಕೈಯಾಡಿಸಿದ್ದಾರೆ. ಸುಸ್ತಿದಾರನೆಂದರೂ ಸರಿ ಸಾಲ ವಾಪಸ್ ಪಡೆಯುವುದು ಕಷ್ಟ ಕಷ್ಟ.

17 ಬ್ಯಾಂಕ್ ಗಳ ಸಾಲದ ಕಥೆ ಏನು?
2015ರ ವೇಳೆಗೆ ಸಾಲ ಒಂದು ಹಂತ ಮುಟ್ಟಿರುತ್ತದೆ. ಅಲ್ಲಿಗೆ ಮಲ್ಯ ಅವರ ಸಾಲ ವಾಪಸ್ ಪಡೆಯಲು ಮುಂದಾಗಿರುವ ಎಸ್ ಬಿಐ ಸೇರಿದಂತೆ 17 ಬ್ಯಾಂಕುಗಳ ಅಧ್ಯಕ್ಷರು, ಆಡಳಿತ ಮಂಡಳಿ ಬದಲಾಗಿರುತ್ತದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕೃಪಾ ಕಟಾಕ್ಷ ತೋರಿ ಸಾಲ ವಜಾ ಮಾಡಿದರೆ(ಯಾವ ಕಾರಣಕ್ಕೂ ಜನ ಒಪ್ಪಲ್ಲ ಬಿಡಿ) ಬ್ಯಾಂಕ್ ಗಳು ಒಂದಷ್ಟು ಹಣ ಕಾಣಬಹುದು. ಇಲ್ಲದಿದ್ದರೆ, ಮಲ್ಯ ಅವರಿಂದ ಹಣ ಹಿಂಪಡೆಯುವುದು ಕಷ್ಟ. ಇಷ್ಟಕ್ಕೂ ಮಲ್ಯ ಬಳಿ ದುಡ್ಡು ಇಲ್ವ?

ವಿಜಯ್ ಮಲ್ಯ ಆಸ್ತಿ ಮೊತ್ತ ಎಷ್ಟು?
ಮಲ್ಯ ಅವರ ಹತ್ತಿರ ಈಗ ಇರುವ ಆಸ್ತಿ ಲೆಕ್ಕಾಚಾರ ಹಾಕಿದರೆ, 3,800 ರಿಂದ 4 ಸಾವಿರ ಕೋಟಿ ರು ತೂಗುತ್ತಾರೆ. ಸಾಲದ ಪ್ರಮಾಣದ ಅರ್ಧದಷ್ಟು ತೀರಿಸಬಹುದು. ಆದರೆ, ಮಲ್ಯರಿಗೆ ಸಾಲ ತೀರಿಸುವ ಮನಸ್ಸೇ ಇಲ್ಲ.
* UB groupನ ಮಾರುಕಟ್ಟೆ ಮೌಲ್ಯ 3,261 ಕೋಟಿ ರು (17.35 % ಮಲ್ಯ ಪಾಲುದಾರಿಕೆ)
* ಯುನೈಟೆಡ್ ಸ್ಪಿರೀಟ್ಸ್ ಮೌಲ್ಯ: 413 ಕೋಟಿ ರು (1.20 %)
* ಮಂಗಳೂರು ಕೆಮಿಕಲ್ಸ್ : 16 ಕೋಟಿ ರು (2.01%)
* ಯುಬಿ ಹೋಲ್ಡಿಂಗ್ಸ್ : 106 ಕೋಟಿ ರು (44.47%)
* ಮೆಕ್ ಡೊವೆಲ್ ಹೋಲ್ಡಿಂಗ್ಸ್ : 8 ಕೋಟಿ ರು (14.49%0
* ಯುಬಿ ಇಂಜಿನಿಯರಿಂಗ್: 0 (0.91%)
* ಕಿಂಗ್ ಫಿಷರ್ ಏರ್ ಲೈನ್ಸ್ : 20 ಕೋಟಿ ರು (8.49 %)
ಒಟ್ಟಾರೆ : 3824 ಕೋಟಿ ರು

ಮಲ್ಯರಿಗೆ ನೀಡಿರುವ ಸರಕಾರಿ ಬ್ಯಾಂಕುಗಳು
State Bank of India, IDBI Bank, Punjab National Bank ಮತ್ತು Bank of Baroda, ICICI Bank ಮತ್ತು J&K Bank ಪ್ರಮುಖವಾದವು.
ಎಸ್ ಬಿಐ 1600 ಕೋಟಿ ರು.ಗೂ ಅಧಿಕ ಸಾಲ ನೀಡಿದ್ದರೆ, ಪಿಎನ್ ಬಿ ಹಾಗೂ ಐಡಿಬಿಐ 800 ಕೋಟಿ ರು, ಬಿಒಐ ಹಾಗೂ ಬಿಒಬಿ ಕ್ರಮವಾಗಿ 650 ಮತ್ತು 550 ಕೋಟಿ ರೂ. ಸಾಲಗಳನ್ನು ನೀಡಿವೆ

ಮದ್ಯದಂಗಡಿ ನಂಬಿಕೊಳ್ಳುವಂತಿಲ್ಲ
ಯುನೈಟೆಡ್ ಸ್ಪಿರೀಟ್ಸ್ ಹಾಗೂ ಡಿಯಾಜಿಯೋ ಸಂಸ್ಥೆ ಒಪ್ಪಂದ ಮತ್ತೆ ತೂಗೂಯ್ಯಾಲೆಯಲ್ಲಿದೆ. ಬಿಯರ್ ಮಾರುಕಟ್ಟೆ ದಿಗ್ಗಜ Heineken ಜೊತೆ ಕೈಜೋಡಿಸಿರುವುದರಿಂದ ಯುಬಿ ಉಳಿಸಿಕೊಳ್ಳಲು ಮಿಕ್ಕೆಲ್ಲ ಆಸ್ತಿ ಪಾಸ್ತಿ ಅಡ ಇಡಲು ಮಲ್ಯ ಸಿದ್ದರಿದ್ದಾರೆ ಎಂದಾಯಿತು.
ಕಿಂಗ್ ಫಿಷರ್ ಏರ್ ಲೈನ್ಸ್ ಕಂಪೆನಿಗೆ ವಿಮಾನ ಖರೀದಿಸಲು ಫ್ರಾನ್ಸ್ ಮೂಲದ ಬಿಎನ್ ಪಿ ಪಾರಿಬಾಸ್ ಕಂಪೆನಿ 200 ಕೋಟಿ ರೂ. ಸಾಲ ನೀಡಿತ್ತು. ಈ ಸಮಯದಲ್ಲಿ ಸಾಲಕ್ಕೆ ಯುಬಿ ಸಮೂಹ ಸಂಸ್ಥೆಯನ್ನು ಖಾತ್ರಿಯಾಗಿ ನೀಡಲಾಗಿತ್ತು. ಇದನ್ನು ಹಿಂತಿರುಗಿಸಿಲ್ಲ . ಹಾಗಾಗಿ ಮದ್ಯದಂಗಡಿ ಮುಚ್ಚಿ ಸಾಲ ವಾಪಸ್ ಮಾಡುವಂತೆ ಆಗ್ರಹ ಕೇಳಿ ಬಂದಿದೆ.
ಆಸ್ತಿ ಪಾಸ್ತಿ ಮಾರಿದರೂ ದುಡ್ಡು ಹುಟ್ಟಲ್ಲ
Sarfesi Act (Securitsation and reconstruction of financial assets and enforcement of security interest act)- 2002 ಕಾಯಿದೆ ಇದೆಯದರೂ ಮಲ್ಯ ಜಾಣತನದಿಂದ ಇದರ ವ್ಯಾಪ್ತಿಗೂ ನಿಲುಕದಂತೆ ಸಾಲ ಮಾಡಿದ್ದಾರೆ.
ಮಲ್ಯರ ಕಂಪನಿಗಳ ಮಾರುಕಟ್ಟೆ ಮೌಲ್ಯ 4 ಸಾವಿರ ಕೋಟಿ ರು ಇದ್ದರೂ ಬ್ಯಾಂಕುಗಳ ಕೈಗೆ ಸುಲಭಕ್ಕೆ ದಕ್ಕುತ್ತಿಲ್ಲ. ಮುಂಬೈನ ಕಿಂಗ್ ಫಿಷರ್ ವಿಲ್ಲಾ, ಕೇಪ್ ಟೌನ್ ನ ಬಂಗಲೆ(ಜಿಂಬಾಬ್ವೆ ಉದ್ಯಮಿಗೆ 40 ಕೋಟಿಗೆ ಸೇಲ್), ಕಿಂಗ್ ಫಿಷರ್ ಏರ್ ಲೈನ್ಸ್ 4ಕೋಟಿ ಷೇರುಗಳು,ಫೋರ್ಸ್ ಇಂಡಿಯಾ ಎಫ್ 1 ಟೀಂ, ರೇಸಿಂಗ್ ಕುದುರೆಗಳ ಮಾರಾಟಕ್ಕೆ ಬ್ಯಾಂಕ್ ಗಳು ಆಗ್ರಹಿಸಿವೆ.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications