ಕನ್ನಡ ಶುಭಾಶಯ ವಿನಿಮಯಕ್ಕೊಂದು App
ಬೆಂಗಳೂರು, ಡಿ.3: ಅಂತರ್ಜಾಲದಲ್ಲಿ ಸ್ಥಳೀಯ ಭಾಷೆ ಬಳಕೆ ಹೆಚ್ಚಳದಿಂದ ಮಾತ್ರ ಉಳಿಗಾಲ ಸಾಧ್ಯ ಎಂಬ ಅರಿವು ಬೆಳೆಸಿಕೊಂಡಿರುವ ಸ್ಟಾರ್ ಅಪ್ ಕಂಪನಿ ಅಂತರ್ಜಾಲ್ ಇನ್ನೋವೇಷನ್ ಪ್ರೈ ಲಿ. ತನ್ನ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕನ್ನಡದ ಗಾದೆ, ಸರ್ವಜ್ಞನ ವಚನಗಳ ಜೊತೆಗೆ ಈಗ ಶುಭಾಶಯ ವಿನಿಯಮಕ್ಕೊಂದು ಅಪ್ಲಿಕೇಷನ್ ಸಿದ್ಧಪಡಿಸಿದ್ದಾರೆ.
ಸಂದರ್ಭ ಯಾವುದೇ ಇರಲಿ ನಿಮ್ಮ ನೆಚ್ಚಿನ ವ್ಯಕ್ತಿಗಳಿಗೆ ನಿಮ್ಮದೇ ಭಾಷೆಯಲ್ಲಿ ಶುಭಾಶಯ ತಿಳಿಸಿ, ಇಷ್ಟವಾದ ಸಂದೇಶ, ಚಿನ್ಹೆ, ವಿನ್ಯಾಸಗಳಿಂದ ಕೂಡಿದ ವೈಯಕ್ತಿಕ ಗ್ರೀಟಿಂಗ್ ಕಾರ್ಡ್ ರಚಿಸಿ ತಕ್ಷಣವೇ ನಿಮ್ಮ ಮೊಬೈಲ್ ನಿಂದ ಕಳಿಸಲು ಈ ಅಪ್ಲಿಕೇಷನ್ ನೆರವಾಗುತ್ತದೆ.

ಇಮೇಲ್, ಎಂಎಂಎಸ್, ಫೇಸ್ಬುಕ್, ಟ್ವಿಟ್ಟರ್ ಮೂಲಕ ಈ ಕಾರ್ಡನ್ನು ಹಂಚಿಕೊಳ್ಳಬಹುದು. ಭಾಷೆಯ ಮೇಲಿನ ಪ್ರೇಮ, ಮಾತೃಭಾಷೆಯ ಬಳಕೆ ಹೆಚ್ಚಳ ಮಾಡಲು ಬಯಸುವ ವ್ಯಕ್ತಿಗಳಿಗೆ ಈ ಅಪ್ಲಿಕೇಷನ್ ಹೇಳಿ ಮಾಡಿಸಿದಂತಿದೆ. [ಎಸ್ಸೆಂಎಸ್ ಬಳಕೆಗೆ ಸರ್ಕಾರದಿಂದ ತಂತ್ರಾಂಶ]
ದಿನನಿತ್ಯದ ಬಳಕೆಯಲ್ಲಿ ಕನ್ನಡ ಭಾಷೆ ಹೆಚ್ಚೆಚ್ಚು ಬಳಸುವಂತೆ ಮಾಡಲು ತಂತ್ರಜ್ಞಾನ ನೆರವು ಬೇಕಾಗುತ್ತದೆ. ಸದ್ಯಕ್ಕೆ ಮೊಬೈಲ್ ಅಪ್ಲಿಕೇಷನ್ ಆಂಡ್ರಾಯ್ಡ್ ಫೋನ್ ಹಾಗೂ ಐಫೋನ್ ಗಳಲ್ಲಿ ಲಭ್ಯವಿದೆ. ಐಫೋನ್ ಗಳಲ್ಲಿ ಬಳಸಲು 60 ರು ಬೆಲೆ ತೆರಬೇಕಾಗುತ್ತದೆ ಎಂದು ಅಂತರ್ಜಾಲ್ ಇನ್ನೋವೇಷನ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ಶ್ರೀಕಾಂತ್ ಶಾಸ್ತ್ರಿ ಹೇಳಿದ್ದಾರೆ. [ಕನ್ನಡ ಪದಬಂಧ ಅಪ್ಲಿಕೇಷನ್]
ಕನ್ನಡ ಗಾದೆಗಳ ಆಪ್ ಆಂಡ್ರಾಯ್ಡ್ ನಲ್ಲಿ ನಿಮ್ಮ ಮೊಬೈಲಿನಲ್ಲಿ ಇಳಿಸಿಕೊಳ್ಳಲು 50 ರು ನೀಡಬೇಕು. ಹಾಗೆ ಸರ್ವಜ್ಞನ ವಚನಗಳುಳ್ಳ ಅಪ್ಲಿಕೇಷನ್ ಗೆ 110 ರು ನಿಗದಿ ಪಡಿಸಲಾಗಿದೆ. ಕನ್ನಡ ಅಕ್ಷರಗಳು, ಶಾಪಿಂಗ್ ಲಿಸ್ಟ್ ಅಪ್ಲಿಕೇಷನ್ ಐಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. [ಆಂಡ್ರಾಯ್ಡ್ ಮಾರುಕಟ್ಟೆಗೆ 'ಪದ' ಎಂಟ್ರಿ]
ಕನ್ನಡ ಜೊತೆಗೆ ತಮಿಳು, ತೆಲುಗು, ಮಲಯಾಳಂ ಅಲ್ಲದೆ ಇಟಲಿ, ಪೋಲ್ಯಾಂಡ್, ಜರ್ಮನಿ, ರಷ್ಯಾ ಸೇರಿದಂತೆ ಅನೇಕ ದೇಶಗಳ ಭಾಷೆಗಳಲ್ಲಿನ ಗಾದೆಗಳ ಸಂಗ್ರಹ ಇಲ್ಲಿ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಅಂತರ್ಜಾಲ್ ಸಂಸ್ಥೆ ವೆಬ್ ತಾಣ ವೀಕ್ಷಿಸಿ
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications