ಕನ್ನಡ ಶುಭಾಶಯ ವಿನಿಮಯಕ್ಕೊಂದು App
ಬೆಂಗಳೂರು, ಡಿ.3: ಅಂತರ್ಜಾಲದಲ್ಲಿ ಸ್ಥಳೀಯ ಭಾಷೆ ಬಳಕೆ ಹೆಚ್ಚಳದಿಂದ ಮಾತ್ರ ಉಳಿಗಾಲ ಸಾಧ್ಯ ಎಂಬ ಅರಿವು ಬೆಳೆಸಿಕೊಂಡಿರುವ ಸ್ಟಾರ್ ಅಪ್ ಕಂಪನಿ ಅಂತರ್ಜಾಲ್ ಇನ್ನೋವೇಷನ್ ಪ್ರೈ ಲಿ. ತನ್ನ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕನ್ನಡದ ಗಾದೆ, ಸರ್ವಜ್ಞನ ವಚನಗಳ ಜೊತೆಗೆ ಈಗ ಶುಭಾಶಯ ವಿನಿಯಮಕ್ಕೊಂದು ಅಪ್ಲಿಕೇಷನ್ ಸಿದ್ಧಪಡಿಸಿದ್ದಾರೆ.
ಸಂದರ್ಭ ಯಾವುದೇ ಇರಲಿ ನಿಮ್ಮ ನೆಚ್ಚಿನ ವ್ಯಕ್ತಿಗಳಿಗೆ ನಿಮ್ಮದೇ ಭಾಷೆಯಲ್ಲಿ ಶುಭಾಶಯ ತಿಳಿಸಿ, ಇಷ್ಟವಾದ ಸಂದೇಶ, ಚಿನ್ಹೆ, ವಿನ್ಯಾಸಗಳಿಂದ ಕೂಡಿದ ವೈಯಕ್ತಿಕ ಗ್ರೀಟಿಂಗ್ ಕಾರ್ಡ್ ರಚಿಸಿ ತಕ್ಷಣವೇ ನಿಮ್ಮ ಮೊಬೈಲ್ ನಿಂದ ಕಳಿಸಲು ಈ ಅಪ್ಲಿಕೇಷನ್ ನೆರವಾಗುತ್ತದೆ.

ಇಮೇಲ್, ಎಂಎಂಎಸ್, ಫೇಸ್ಬುಕ್, ಟ್ವಿಟ್ಟರ್ ಮೂಲಕ ಈ ಕಾರ್ಡನ್ನು ಹಂಚಿಕೊಳ್ಳಬಹುದು. ಭಾಷೆಯ ಮೇಲಿನ ಪ್ರೇಮ, ಮಾತೃಭಾಷೆಯ ಬಳಕೆ ಹೆಚ್ಚಳ ಮಾಡಲು ಬಯಸುವ ವ್ಯಕ್ತಿಗಳಿಗೆ ಈ ಅಪ್ಲಿಕೇಷನ್ ಹೇಳಿ ಮಾಡಿಸಿದಂತಿದೆ. [ಎಸ್ಸೆಂಎಸ್ ಬಳಕೆಗೆ ಸರ್ಕಾರದಿಂದ ತಂತ್ರಾಂಶ]
ದಿನನಿತ್ಯದ ಬಳಕೆಯಲ್ಲಿ ಕನ್ನಡ ಭಾಷೆ ಹೆಚ್ಚೆಚ್ಚು ಬಳಸುವಂತೆ ಮಾಡಲು ತಂತ್ರಜ್ಞಾನ ನೆರವು ಬೇಕಾಗುತ್ತದೆ. ಸದ್ಯಕ್ಕೆ ಮೊಬೈಲ್ ಅಪ್ಲಿಕೇಷನ್ ಆಂಡ್ರಾಯ್ಡ್ ಫೋನ್ ಹಾಗೂ ಐಫೋನ್ ಗಳಲ್ಲಿ ಲಭ್ಯವಿದೆ. ಐಫೋನ್ ಗಳಲ್ಲಿ ಬಳಸಲು 60 ರು ಬೆಲೆ ತೆರಬೇಕಾಗುತ್ತದೆ ಎಂದು ಅಂತರ್ಜಾಲ್ ಇನ್ನೋವೇಷನ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ಶ್ರೀಕಾಂತ್ ಶಾಸ್ತ್ರಿ ಹೇಳಿದ್ದಾರೆ. [ಕನ್ನಡ ಪದಬಂಧ ಅಪ್ಲಿಕೇಷನ್]
ಕನ್ನಡ ಗಾದೆಗಳ ಆಪ್ ಆಂಡ್ರಾಯ್ಡ್ ನಲ್ಲಿ ನಿಮ್ಮ ಮೊಬೈಲಿನಲ್ಲಿ ಇಳಿಸಿಕೊಳ್ಳಲು 50 ರು ನೀಡಬೇಕು. ಹಾಗೆ ಸರ್ವಜ್ಞನ ವಚನಗಳುಳ್ಳ ಅಪ್ಲಿಕೇಷನ್ ಗೆ 110 ರು ನಿಗದಿ ಪಡಿಸಲಾಗಿದೆ. ಕನ್ನಡ ಅಕ್ಷರಗಳು, ಶಾಪಿಂಗ್ ಲಿಸ್ಟ್ ಅಪ್ಲಿಕೇಷನ್ ಐಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. [ಆಂಡ್ರಾಯ್ಡ್ ಮಾರುಕಟ್ಟೆಗೆ 'ಪದ' ಎಂಟ್ರಿ]
ಕನ್ನಡ ಜೊತೆಗೆ ತಮಿಳು, ತೆಲುಗು, ಮಲಯಾಳಂ ಅಲ್ಲದೆ ಇಟಲಿ, ಪೋಲ್ಯಾಂಡ್, ಜರ್ಮನಿ, ರಷ್ಯಾ ಸೇರಿದಂತೆ ಅನೇಕ ದೇಶಗಳ ಭಾಷೆಗಳಲ್ಲಿನ ಗಾದೆಗಳ ಸಂಗ್ರಹ ಇಲ್ಲಿ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಅಂತರ್ಜಾಲ್ ಸಂಸ್ಥೆ ವೆಬ್ ತಾಣ ವೀಕ್ಷಿಸಿ
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications