ನೌಕರರಿಗೆ ದೀಪಾವಳಿ ಬೋನಸ್ 400 ಫ್ಲ್ಯಾಟ್, 1,260 ಕಾರು
ಸೂರತ್, ಅಕ್ಟೋಬರ್ 28: ಕೋಟ್ಯಧಿಪತಿ, ವಜ್ರದ ಉದ್ಯಮಿ ಸಾವ್ಜಿ ಧೋಲಾಕಿಯಾ ದೀಪಾವಳಿ ಬೋನಸ್ ಆಗಿ ತಮ್ಮ ನೌಕರರಿಗೆ ನೀಡಿರುವುದು 400 ಫ್ಲ್ಯಾಟ್ ಹಾಗೂ 1,260 ಕಾರು. ಹರೇ ಕೃಷ್ಣ ಎಕ್ಸ್ ಪೋರ್ಟ್ಸ್ ಧೋಲಾಕಿಯಾ ಅವರು ನಡೆಸುತ್ತಿರುವ ಕಂಪನಿ. ಈ ವರ್ಷ ನೌಕರಿಗೆ ದೀಪಾವಳಿ ಬೋನಸ್ ನೀಡಲು ಅವರು ಖರ್ಚು ಮಾಡಿರುವುದು 51 ಕೋಟಿ ರುಪಾಯಿ.
ಈ ವರ್ಷ ಕಂಪನಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. 1,716 ನೌಕರರಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಕಾರಣಕ್ಕೆ 'ಬೆಸ್ಟ್ ಪರ್ಫಾಮರ್ಸ್' ಎಂದು ಗುರುತಿಸಿ, ಬೋನಸ್ ನೀಡಲಾಗಿದೆ. ಕಳೆದ ಮಂಗಳವಾರ ನಡೆದ ನೌಕರರ ಸಭೆಯಲ್ಲಿ ಈ ತೀರ್ಮಾನ ಘೋಷಿಸಲಾಗಿದೆ. 2011ರಿಂದಲೂ ದೀಪಾವಳಿ ಸಂದರ್ಭದಲ್ಲಿ ಹರೇ ಕೃಷ್ಣ ಎಕ್ಸ್ ಪೋರ್ಟ್ಸ್ ಈ ರೀತಿ ನೌಕರರಿಗೆ ಬೋನಸ್ ನೀಡುತ್ತಾ ಬಂದಿದೆ.[ಮೋದಿ ಸರಕಾರದಿಂದ ಯೋಧರಿಗೆ ಭರ್ಜರಿ ದೀಪಾವಳಿ ಬೋನಸ್]

ಕಳೆದ ವರ್ಷ ಕಂಪನಿಯು ನೌಕರರಿಗೆ 200 ಫ್ಲ್ಯಾಟ್ ಹಾಗೂ 491 ಕಾರು ನೀಡಿತ್ತು. ಅದರ ಹಿಂದಿನ ವರ್ಷ ಪರ್ಫಾಮೆನ್ಸ್ ಇನ್ಸೆಂಟಿವ್ಸ್ ಎಂದು 50 ಕೋಟಿ ನೀಡಲಾಗಿತ್ತು ಎಂದು ಧೋಲಾಕಿಯಾ ಹೇಳಿದ್ದಾರೆ. ಧೋಲಾಕಿಯಾ ಅವರು ಮೂಲತಃ ಅಮ್ರೇಲಿ ಜಿಲ್ಲೆಯ ದುಧಲ ಹಳ್ಳಿಯವರು. ಅವರ ಸಂಬಂಧಿಯಿಂದ ಸಾಲ ಪಡೆದು, ವಜ್ರದ ವ್ಯವಹಾರ ಆರಂಭಿಸಿದ್ದರು.[ಕೇಂದ್ರ ನೌಕರರಿಗೆ ಬೋನಸ್ ಘೋಷಿಸಿದ ಅರುಣ್ ಜೇಟ್ಲಿ]
ಇಂಥ ದೊಡ್ಡ ಮೊತ್ತದ ಆಸ್ತಿ ಸಲೀಸಾಗಿ ಆಗಿರುವುದಲ್ಲ. ತಮ್ಮ ಮಗ 'ದ್ರವ್ಯ' ಸ್ವಂತ ಕಾಲಿನ ಮೇಲೆ ನಿಲ್ಲುವುದನ್ನು ಕಲಿಯಲಿ, ಬದುಕಿನ ನಿರ್ಧಾರ ಸ್ವತಂತ್ರವಾಗಿ ತೆಗೆದುಕೊಳ್ಳುವುದು ರೂಢಿಯಾಗಲಿ ಎಂಬ ಕಾರಣಕ್ಕೆ ಮೂರು ಜೊತೆ ಬಟ್ಟೆ ಹಾಗೂ ಏಳು ಸಾವಿರ ರುಪಾಯಿ ಹಣ ಕೊಟ್ಟು ಕೊಚ್ಚಿಗೆ ಕಳುಹಿಸಿದ್ದರು ಧೋಲಾಕಿಯಾ.
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ









Click it and Unblock the Notifications