ಗಗನಕ್ಕೇರಿದ ಟೊಮೆಟೋ ಬೆಲೆ: ತಲೆ ಮೇಲೆ ಕೈ ಹೊತ್ತ ಜನ
ನವದೆಹಲಿ, ಜೂ. 2: ದೆಹಲಿ ಪ್ರದೇಶ ಹೊರತುಪಡಿಸಿ ಪ್ರಮುಖ ಮೆಟ್ರೋ ನಗರಗಳಲ್ಲಿ ಟೊಮೆಟೋ ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 77 ರುಪಾಯಿಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಸರಕುಗಳ ಮಿತವಾದ ಪೂರೈಕೆಯಿಂದಾಗಿ ಬೆಲೆಗಳು ಒಂದು ತಿಂಗಳ ಹಿಂದಿನ ಅವಧಿಗಿಂತ ಹೆಚ್ಚಾಗಿದ್ದು, ಸಾಮಾನ್ಯ ಜನರು ಖರೀದಿ ಮಾಡಲು ಹಿಂದೇಟು ಹಾಕಿ ತಲೆ ಮೇಲೆ ಕೈಹೊತ್ತಿದ್ದಾರೆ.
ಆದಾಗ್ಯೂ ಎಲ್ಲಾ ಪ್ರಮುಖ ಟೊಮೆಟೋ ಬೆಳೆಯುವ ಪ್ರದೇಶಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದ ನಂತರ ಜುಲೈನಲ್ಲಿ ಟೊಮೆಟೋ ಬೆಲೆಗಳು ತೀವ್ರ ಕುಸಿತವನ್ನು ಕಾಣುವ ನಿರೀಕ್ಷೆಯಿದೆ. ಗ್ರಾಹಕ ವ್ಯವಹಾರಗಳ ದತ್ತಾಂಶ ಇಲಾಖೆಯ ವರದಿಗಳ ಪ್ರಕಾರ ಪ್ರಮುಖ ನಗರಗಳಲ್ಲಿ ಟೊಮೆಟೊ ಸರಾಸರಿ ಬೆಲೆಗಳು ಕೆಜಿಗೆ 55 ರಿಂದ 60 ರೂ. ಆಗಿದೆ. ಕೃಷಿ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಹಿಂದಿನ ವರ್ಷಕ್ಕೆ ಹೋಲಿಸಿದರೆ 2021-22 ಬೆಳೆ ವರ್ಷದಲ್ಲಿ (ಜುಲೈ-ಜೂನ್) 20.3 ಮಿಲಿಯನ್ ಟನ್ಗಳಿಗೆ (ಎಂಟಿ) ಟೊಮೆಟೋ ಉತ್ಪಾದನೆಯು 4% ಕ್ಕಿಂತ ಹೆಚ್ಚು ಕುಸಿಯುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.
ವಿವಿಧ ನಗರಗಳಲ್ಲಿ ಟೊಮೆಟೋ ದರ ಹೀಗಿದೆ:
ಕೋಲ್ಕತ್ತಾ: ಗ್ರಾಹಕ ವ್ಯವಹಾರಗಳ ಸಚಿವಾಲಯವು ನೀಡಿದ ಅಂಕಿ ಅಂಶಗಳ ಪ್ರಕಾರ, ಏಪ್ರಿಲ್ 30 ರಂದು ಪ್ರತಿ ಕೆಜಿಗೆ 25 ರೂಪಾಯಿ ಇದ್ದ ಟೊಮೆಟೋ ಚಿಲ್ಲರೆ ಬೆಲೆ ಜೂನ್ 1ರಂದು ಕೆಜಿಗೆ 77 ರೂ. ಆಗಿದೆ.

ಮುಂಬೈ: ಮುಂಬೈನಲ್ಲಿ ಚಿಲ್ಲರೆ ಟೊಮೆಟೋ ದರವು ಮೇ 1 ರಂದು ಕೆಜಿಗೆ 36 ರೂಪಾಯಿಯಿಂದ ಜೂನ್ 1 ರಂದು 74 ರೂಪಾಯಿಗಳಿಗೆ ಏರಿದೆ.
ಚೆನ್ನೈ: ಚಿಲ್ಲರೆ ಟೊಮೆಟೋ ದರ ಚೆನ್ನೈನಲ್ಲಿ ಪ್ರತಿ ಕೆಜಿಗೆ 47 ರಿಂದ 62 ರೂ.ಗೆ ಏರಿಕೆಯಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ.
ದೆಹಲಿ: ಆದಾಗ್ಯೂ ದೆಹಲಿಯಲ್ಲಿ ಚಿಲ್ಲರೆ ಟೊಮೆಟೋ ದರವು ಪ್ರತಿ ಕೆಜಿಗೆ ರೂ. 39 ರಷ್ಟಿದೆ. ಈ ಅವಧಿಯಲ್ಲಿ ಪ್ರತಿ ಕೆಜಿಗೆ ರೂ 30 ರಷ್ಟಿತ್ತು.
ಇತರೆ ನಗರಗಳು: ಪೋರ್ಟ್ ಬ್ಲೇರ್, ಶಿಲ್ಲಾಂಗ್, ಕೊಟ್ಟಾಯಂ, ಪತ್ತನಂತಿಟ್ಟಾ - ನಾಲ್ಕು ನಗರಗಳಲ್ಲಿ ಬುಧವಾರ ಟೊಮೆಟೊ ಚಿಲ್ಲರೆ ಬೆಲೆ ಕೆಜಿಗೆ 100 ರೂ. ಏರಿಕೆ ಕಂಡು ಬಂದಿದೆ.

ಹಠಾತ್ ಬೆಲೆ ಏರಿಕೆ ಏಕೆ?: ಪ್ರಮುಖ ಉತ್ಪಾದನಾ ರಾಜ್ಯಗಳಾದ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಚಿಲ್ಲರೆ ಬೆಲೆಗಳು ಗಮನಾರ್ಹವಾಗಿ ಏರಿವೆ. ಮಾಹಿತಿ ಪ್ರಕಾರ ವಿವಿಧ ನಗರಗಳಲ್ಲಿ ಕೆಜಿಗೆ 50 ರಿಂದ 100 ರೂ. ಆಂಧ್ರಪ್ರದೇಶ ಮತ್ತು ಕರ್ನಾಟಕದಂತಹ ಪ್ರಮುಖ ಬೆಳೆಯುತ್ತಿರುವ ರಾಜ್ಯಗಳಿಂದ ಪೂರೈಕೆ ಮಿತವಾಗಿರುವುದೇ ಚಿಲ್ಲರೆ ಬೆಲೆಗಳ ಏರಿಕೆಗೆ ಕಾರಣ ಎಂದು ವ್ಯಾಪಾರಿಗಳು ಮತ್ತು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಟೊಮೇಟೊದ ಸರಾಸರಿ ಅಖಿಲ ಭಾರತ ಚಿಲ್ಲರೆ ಬೆಲೆಯು ತಿಂಗಳ ಹಿಂದಿನ ಅವಧಿಯಲ್ಲಿ ಪ್ರತಿ ಕೆಜಿಗೆ ರೂ 29.5 ರಿಂದ ಬುಧವಾರದಂದು ಪ್ರತಿ ಕೆಜಿಗೆ ರೂ 52.30 ಕ್ಕೆ 77 ರಷ್ಟು ಹೆಚ್ಚಳ ಕಂಡು ಬಂದಿದೆ.
(ಒನ್ಇಂಡಿಯಾ ಸುದ್ದಿ)
-
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ












Click it and Unblock the Notifications