ಜಸ್ಟ್ ಡಯಲ್ನ 41% ಪಾಲು ರಿಲಯನ್ಸ್ ರೀಟೇಲ್ ತೆಕ್ಕೆಗೆ
ಮುಂಬೈ, ಸೆಪ್ಟೆಂಬರ್ 02: ಸೆಬಿ ಸ್ವಾಧೀನ ನಿಯಮಾವಳಿಗಳಿಗೆ ಅನುಗುಣವಾಗಿ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್ ವಿ ಎಲ್), ಜಸ್ಟ್ ಡಯಲ್ ಲಿಮಿಟೆಡ್ನ (ಜಸ್ಟ್ ಡಯಲ್) ಏಕೈಕ ನಿಯಂತ್ರಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದು ಸೆಪ್ಟೆಂಬರ್ 1, 2021ರಿಂದ ಅನುಷ್ಠಾನಕ್ಕೆ ಬಂದಿದೆ. ಜಸ್ಟ್ ಡಯಲ್ನ ನಿಯಂತ್ರಣ ಷೇರುಗಳ ಖರೀದಿ ಬಗ್ಗೆ 2021ರ ಜುಲೈ 16ರಂದು ರಿಲಯನ್ಸ್ ಹೇಳಿಕೆ ನೀಡಿತ್ತು.
ಎ). ಜಸ್ಟ್ ಡಯಲ್ನ ಪ್ರತಿ 10 ರೂ ಮೌಲ್ಯದ ಈಕ್ವಿಟಿ ಷೇರುಗಳನ್ನು ಪ್ರತಿ ಷೇರಿಗೆ 1,020 ರೂಪಾಯಿ ದರದಲ್ಲಿ ಒಟ್ಟು 1.31 ಕೋಟಿ ಈಕ್ವಿಟಿ ಷೇರುಗಳನ್ನು ಜುಲೈ 20, 2021ರಂದು ವಿ ಎಸ್ ಎಸ್ ಮಣಿ ಅವರಿಂದ ಬ್ಲಾಕ್ ವಿಂಡೋ ಸೌಲಭ್ಯದ ಮೂಲಕ ಷೇರು ವಿನಿಮಯದಲ್ಲಿ ಆರ್ಆರ್ವಿಎಲ್ ಖರೀದಿಸಿದೆ. ಜಸ್ಟ್ ಡಯಲ್ನ ಬಾಕಿ ಪಾವತಿಯ ಈಕ್ವಿಟಿ ಷೇರು ಬಂಡವಾಳದ ಆದ್ಯತಾನಂತರದ ಶೇ 15.63ರಷ್ಟನ್ನು ಈ ಖರೀದಿ ಒಳಗೊಂಡಿದೆ.
ಬಿ) ಸೆಪ್ಟೆಂಬರ್ 1, 2021ರಂದು, ಆದ್ಯತಾ ವಿಚಾರಗಳಿಗೆ ಅನುಗುಣವಾಗಿ, 10 ರೂಪಾಯಿಯ ಷೇರುಗಳನ್ನು ಪ್ರತಿ ಈಕ್ವಿಟಿ ಷೇರಿಗೆ 1022.25 ರೂಪಾಯಿ ದರದಲ್ಲಿ (ಪ್ರತಿ ಈಕ್ವಿಟಿ ಷೇರಿನ 1012.25 ರೂಪಾಯಿ ಪ್ರೀಮಿಯಂ ಸೇರಿದಂತೆ) 2.12 ಕೋಟಿ ಈಕ್ವಿಟಿ ಷೇರುಗಳನ್ನು ಜಸ್ಟ್ ಡಯಲ್ ಹಂಚಿಕೆ ಮಾಡಿದೆ. ಇದು ಆರ್ ಆರ್ ವಿ ಎಲ್ ಗೆ ಬಾಕಿ ಪಾವತಿಯ ಷೇರು ಬಂಡವಾಳದ ಆದ್ಯತಾನಂತರದ ಶೇ 25.35ರಷ್ಟನ್ನು ಪ್ರತಿನಿಧಿಸುತ್ತದೆ ಎಂದು ಷೇರುಪೇಟೆಗೆ ನೀಡಿದ ಪ್ರಕಟಣೆಯಲ್ಲಿ ರಿಲಯನ್ಸ್ ಸಂಸ್ಥೆ ಹೇಳಿದೆ.

ಆರ್ಆರ್ವಿಎಲ್ ಬಗ್ಗೆ:
ರಿಲಯನ್ಸ್ ಇಂಡಸ್ಟ್ರೀಸ್ ಗ್ರೂಪ್ನ ಅಂಗಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ಆರ್ವಿಎಲ್ )ಯಾಗಿದೆ. ರಿಲಯನ್ಸ್ ರೀಟೇಲ್ ಭಾರತದ ಅತಿದೊಡ್ಡ ಮತ್ತು ಹೆಚ್ಚು ಲಾಭದಾಯಕ ರೀಟೇಲ್ ಕಂಪನಿ. ಡೆಲೋಯಿಟ್ ಗ್ಲೋಬಲ್ ಪವರ್ಸ್ ವಿಶ್ವದ ವೇಗವಾಗಿ ಬೆಳೆಯುತ್ತಿರುವ ರೀಟೇಲ್ ವ್ಯಾಪಾರಿಗಳಲ್ಲಿ ಒಂದಾಗಿದೆ. ರೀಟೇಲ್ ಮಾರಾಟ 2021 ಸೂಚ್ಯಂಕದಲ್ಲಿ 53 ನೇ ಸ್ಥಾನದಲ್ಲಿರುವ ಏಕೈಕ ಭಾರತೀಯ ಕಂಪನಿ ಇದಾಗಿದೆ.
ಜಸ್ಟ್ ಡಯಲ್ ಭಾರತದ ಪ್ರಮುಖ ಸ್ಥಳೀಯ ಸರ್ಚ್ ಇಂಜಿನ್ ವೇದಿಕೆಯಾಗಿದೆ. ಇದು ವೆಬ್ಸೈಟ್, ಆಪ್, ಟೆಲಿಫೋನ್, ಪಠ್ಯ, ಸಂಸ್ಥೆ, ಕಚೇರಿ ಹೀಗೆ ಬಹು ವೇದಿಕೆಗಳ ಮೂಲಕ ಭಾರತದಾದ್ಯಂತ ಸೇವೆಗಳನ್ನು ಒದಗಿಸುತ್ತದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications