4ಜಿ ಸ್ಪೀಡ್ : ಏರ್ ಟೆಲ್ ಹಿಂದಿಕ್ಕಿದ ರಿಲಯನ್ಸ್ ಜಿಯೋ
ಮಾರ್ಚ್ ತಿಂಗಳಿನಲ್ಲಿ ರಿಲಯನ್ಸ್ ಜಿಯೋ ಮೊಬೈಲ್ ಜಾಲದ ಸರಾಸರಿ ಡೌನ್ಲೋಡ್ ವೇಗ ಪ್ರತಿಸ್ಪರ್ಧಿಗಳಾದ ಐಡಿಯಾ ಸೆಲ್ಯುಲರ್ ಹಾಗೂ ಭಾರ್ತಿ ಏರ್ಟೆಲ್ ಹೋಲಿಕೆಯಲ್ಲಿ ಬಹುಪಾಲು ಎರಡರಷ್ಟಿತ್ತು
ನವದೆಹಲಿ, ಏಪ್ರಿಲ್ 23: ಕಳೆದ ಮಾರ್ಚ್ ತಿಂಗಳಿನಲ್ಲಿ ರಿಲಯನ್ಸ್ ಜಿಯೋ ಮೊಬೈಲ್ ಜಾಲದ ಸರಾಸರಿ ಡೌನ್ಲೋಡ್ ವೇಗ ಪ್ರತಿಸ್ಪರ್ಧಿಗಳಾದ ಐಡಿಯಾ ಸೆಲ್ಯುಲರ್ ಹಾಗೂ ಭಾರ್ತಿ ಏರ್ಟೆಲ್ ಹೋಲಿಕೆಯಲ್ಲಿ ಬಹುಪಾಲು ಎರಡರಷ್ಟಿತ್ತು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ವರದಿ ತಿಳಿಸಿದೆ.
ಈ ಅವಧಿಯಲ್ಲಿ ಜಿಯೋ ಜಾಲದ ಸರಾಸರಿ ಡೌನ್ಲೋಡ್ ವೇಗ 16.48 ಮೆಗಾಬಿಟ್ಸ್ ಪರ್ ಸೆಕೆಂಡ್ (ಎಂಬಿಪಿಎಸ್) ಇದ್ದರೆ ಐಡಿಯಾ ಸೆಲ್ಯುಲರ್ ಜಾಲದಲ್ಲಿ 8.33 ಎಂಬಿಪಿಎಸ್ ಹಾಗೂ ಭಾರ್ತಿ ಏರ್ಟೆಲ್ನಲ್ಲಿ 7.66 ಎಂಬಿಪಿಎಸ್ ಇತ್ತು ಎಂದು ಈ ಮಾಸಿಕ ವರದಿ ಹೇಳುತ್ತದೆ.[ಏನಿದು ಜಿಯೋ ಧನ್ ಧನಾ ಧನ್? ಇಲ್ಲಿದೆ ಫುಲ್ ಡಿಟೇಲ್]

ಇದೇ ಅವಧಿಯಲ್ಲಿ ವೋಡಾಫೋನ್ನ ಸರಾಸರಿ ಡೌನ್ಲೋಡ್ ವೇಗ 5.66 ಎಂಬಿಪಿಎಸ್ ಇತ್ತು. ಇದೇ ರೀತಿ ರಿಯಲನ್ಸ್ ಕಮ್ಯೂನಿಕೇಶನ್ಸ್ ಜಾಲದಲ್ಲಿ 2.64 ಎಂಬಿಪಿಎಸ್, ಟಾಟಾ ಡೊಕೊಮೊದಲ್ಲಿ 2.52 ಎಂಬಿಪಿಎಸ್, ಬಿಎಸ್ಎನ್ಎಲ್ನಲ್ಲಿ 2.26 ಎಂಬಿಪಿಎಸ್ ಹಾಗೂ ಏರ್ಸೆಲ್ನಲ್ಲಿ 2.01 ಎಂಬಿಪಿಎಸ್ ಸರಾಸರಿ ಡೌನ್ಲೋಡ್ ವೇಗ ದಾಖಲಾಗಿದೆ.[ಧನ್ ಧನಾ ಧನ್ ವಿರುದ್ಧ ಏರ್ ಟೆಲ್ ತ್ರಿಬ್ಬಲ್ ಆಫರ್]
ತಾನು ಸಂಗ್ರಹಿಸುವ ದತ್ತಾಂಶವನ್ನು 'ಮೈಸ್ಪೀಡ್' ತಂತ್ರಾಂಶದ ನೆರವಿನಿಂದ ತತ್ಕ್ಷಣದಲ್ಲೇ ವಿಶ್ಲೇಷಿಸುವ ಟ್ರಾಯ್ ಸರಾಸರಿ ಡೌನ್ಲೋಡ್ ವೇಗವನ್ನು ಲೆಕ್ಕಹಾಕುತ್ತದೆ.
ಈ ನಡುವೆ ದೆಹಲಿ-ಮುಂಬೈ ನಗರಗಳು ಹಾಗೂ ಕರ್ನಾಟಕ-ತಮಿಳುನಾಡು ರಾಜ್ಯಗಳ ವ್ಯಾಪ್ತಿಯಲ್ಲಿ ಮೊಬೈಲ್ ಜಾಲಗಳ ಸಂಪರ್ಕ ವೇಗ ಕುರಿತು 'ಓಪನ್ ಸಿಗ್ನಲ್' ಎಂಬ ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಭಾರ್ತಿ ಏರ್ಟೆಲ್ಗೆ ಮೊದಲ ಸ್ಥಾನ ದೊರೆತಿದೆ. 11.5 ಎಂಬಿಪಿಎಸ್ ಸರಾಸರಿ ಸಂಪರ್ಕ ವೇಗದೊಡನೆ ಭಾರ್ತಿ ಏರ್ಟೆಲ್ ಈ ಪಟ್ಟಿಯ ಮೊದಲನೇ ಸ್ಥಾನದಲ್ಲಿದ್ದರೆ 3.92 ಎಂಬಿಪಿಎಸ್ ವೇಗದೊಡನೆ ರಿಲಯನ್ಸ್ ಜಿಯೋ ನಾಲ್ಕನೇ ಸ್ಥಾನದಲ್ಲಿದೆ.
ಡಿಸೆಂಬರ್ 2016 ರಿಂದ ಫೆಬ್ರುವರಿ 2017ರ ಅವಧಿಯಲ್ಲಿ 93,464 ಬಳಕೆದಾರರನ್ನೊಳಗೊಂಡ 130 ಕೋಟಿ ಮಾಪನಗಳಿಂದ (ಡೇಟಾಪಾಯಿಂಟ್) ಮಾಹಿತಿ ಸಂಗ್ರಹಣೆ ಮಾಡಿದ್ದಾಗಿ ಈ ಸಮೀಕ್ಷೆ ಹೇಳಿಕೊಂಡಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications