ಷೇರು ಹೂಡಿಕೆದಾರ ರಾಕೇಶ್ ಝುಂಝುನ್ ವಾಲಾ ಮೇಲೆ 'ಸೆಬಿ' ಕಣ್ಣು
ನವದೆಹಲಿ, ಜೂನ್ 16: ದೇಶದ ಖ್ಯಾತ ಷೇರು ಹೂಡಿಕೆದಾರರಲ್ಲಿ ಒಬ್ಬರಾದ ರಾಕೇಶ್ ಝುಂಝುನ್ ವಾಲಾ ಅವರ ಮತ್ತು ಕುಟುಂಬದ ಒಡೆತನದ ಶಿಕ್ಷಣ ಸಂಸ್ಥೆಯಾದ ಆಪ್ಟೆಕ್ ಲಿಮಿಟೆಡ್ನ ಷೇರುಗಳಲ್ಲಿ ಆಂತರಿಕ ವಹಿವಾಟು ನಡೆಸಿದ ಆರೋಪದ ಮೇಲೆ ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ & ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಶೋಕಾಸ್ ನೋಟಿಸ್ ಅನ್ನು ನೀಡಿದೆ.
Recommended Video
ನಾಲ್ಕು ವರ್ಷಗಳ ಹಿಂದೆ ಸಂಸ್ಥೆಯ ಷೇರುಗಳಲ್ಲಿ ವಹಿವಾಟು ನಡೆಸಿದ್ದಕ್ಕಾಗಿ ಝುಂಝುನ್ ವಾಲಾ, ಅವರ ಕುಟುಂಬ ಸದಸ್ಯರು ಮತ್ತು ಆಪ್ಟೆಕ್ನ ಇತರ ಮಂಡಳಿಯ ಸದಸ್ಯರನ್ನು ಪರಿಶೀಲಿಸಿದೆ. ಬಿಲಿಯನೇರ್ ಹೂಡಿಕೆದಾರರ ಪೋರ್ಟ್ಫೋಲಿಯೊದಲ್ಲಿ ನಿರ್ವಹಣಾ ನಿಯಂತ್ರಣವನ್ನು ಹೊಂದಿರುವ ಏಕೈಕ ಕಂಪನಿ ಅಂದರೆ ಅದು ಆಪ್ಟೆಕ್.
ಝುಂಝುನ್ ವಾಲಾ ಅವರ ಬ್ಯಾಂಕ್ ಖಾತೆಗಳನ್ನು "ಲಾಭ ಗಳಿಸಿದ" ಮಟ್ಟಿಗೆ ಫ್ರೀಜ್ ಮಾಡಲು ಆದೇಶಿಸಲು ಸೆಬಿ ಯೋಜಿಸಿದೆ ಎಂದು ನೋಟಿಸ್ ತಿಳಿಸಿದೆ, ಈ ವಿಷಯದ ಬಗ್ಗೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಈ ವರ್ಷದ ಜನವರಿ 24ರಂದು, ಆಪ್ಟೆಕ್ ಷೇರುಗಳಲ್ಲಿ ಆಂತರಿಕ ವಹಿವಾಟು ನಡೆಸಿದ ಆರೋಪದ ಮೇಲೆ ಝುಂಝುನ್ ವಾಲಾವನ್ನು ಮಾರುಕಟ್ಟೆ ನಿಯಂತ್ರಕರಿಂದ(ಸೆಬಿ) ತನಿಖೆ ನಡೆಸಲಾಯಿತು. ಝುಂಝುನ್ ವಾಲಾ ಜೊತೆಗೆ, ಸಹೋದರ ರಾಜೇಶ್, ಪತ್ನಿ ರೇಖಾ, ಸಹೋದರಿ ಸುಧಾ ಮತ್ತು ಅತ್ತೆ ಸುಶೀಲದೇವಿ ಗುಪ್ತಾ ಅವರನ್ನು ಈ ವಿಷಯದಲ್ಲಿ ಸೆಬಿ ಪ್ರಶ್ನಿಸಲಾಗಿತ್ತು.
ಸಿಇಒ ಮತ್ತು ಆಪ್ಟೆಕ್ ನಿರ್ದೇಶಕ ಉತ್ಪಾಲ್ ಶೆತ್ ಅವರ ಸಹೋದರಿ ಉಷ್ಮಾ ಶೆತ್ ಸುಲೇ ಅವರನ್ನು ಸೆಬಿ ಕರೆಸಿತ್ತು. ಹೂಡಿಕೆದಾರ ರಮೇಶ್ ಎಸ್ ದಮಾನಿ ಮತ್ತು ನಿರ್ದೇಶಕ ಮಧು ಜಯಕುಮಾರ್ ಸೇರಿದಂತೆ ಇತರ ಮಂಡಳಿಯ ಸದಸ್ಯರ ಪಾತ್ರದ ಬಗ್ಗೆಯೂ ಸೆಬಿ ತನಿಖೆ ನಡೆಸುತ್ತಿದೆ.
ಸೆಬಿ ಮೇ 2016 ಮತ್ತು ಅಕ್ಟೋಬರ್ 2016 ರ ನಡುವಿನ ವಹಿವಾಟಿನ ಬಗ್ಗೆ ತನಿಖೆ ನಡೆಸುತ್ತಿದೆ. ಭಾರತೀಯ ಷೇರು ಮಾರುಕಟ್ಟೆಯ ವಾರೆನ್ ಬಫೆಟ್ ಎಂದು ಕರೆಯಲ್ಪಡುವ ರಾಕೇಶ್ ಝುಂಝುನ್ ವಾಲಾ ಮತ್ತು ಅವರ ಕುಟುಂಬ ಸದಸ್ಯರು ಆಪ್ಟೆಕ್ನ ಹಣಕಾಸು ಮತ್ತು ವಿಸ್ತರಣಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ಹೊಂದಿದ್ದರು. ಈ ಮಾಹಿತಿಯ ಆಧಾರದ ಮೇಲೆ ವಹಿವಾಟು ನಡೆದಿದೆ ಎಂಬ ಆರೋಪ ಇದೆ.
ಜೊತೆಗೆ ಷೇರುಗಳಲ್ಲಿ ವ್ಯಾಪಾರ ಮಾಡಲು ನಿರ್ದೇಶಕರಿಗೆ ಏಕೆ ಆದ್ಯತೆ ನೀಡಿದೆ ಎಂದು ಆಪ್ಟೆಕ್ನಿಂದ ತಿಳಿಯಲು ಮಾರುಕಟ್ಟೆ ನಿಯಂತ್ರಕವು ಪ್ರಯತ್ನಿಸಿದೆ.
ಷೇರುಗಳ ಆಂತರಿಕ ವಹಿವಾಟು ಎಂದರೇನು?
ಒಬ್ಬ ವ್ಯಕ್ತಿಗೆ ಸಂಬಂಧಪಟ್ಟಂತೆ ಪಟ್ಟಿ ಮಾಡಲಾದ ಷೇರು ವ್ಯಾಪಾರವು ನಿರ್ವಹಣೆಯಲ್ಲಿರುವ ಅಥವಾ ಅವರ ಹತ್ತಿರವಿರುವ ವ್ಯಕ್ತಿಗಳಿಂದ ಗೌಪ್ಯ ಮಾಹಿತಿಗೆ ಪ್ರವೇಶವನ್ನು ಹೊಂದುವ ಮೂಲಕ ಷೇರು ವಿನಿಮಯ ಕೇಂದ್ರದಲ್ಲಿ ಒಬ್ಬರ ಸ್ವಂತ ಲಾಭಕ್ಕಾಗಿ ವ್ಯಾಪಾರ ಮಾಡುವ ಕಾನೂನುಬಾಹಿರ ಅಭ್ಯಾಸ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications