ಟಿವಿ 9 ವಾಹಿನಿ ಕೊಳ್ಳಲಿದ್ದಾರೆಯೇ ಸಂಸದ ರಾಜೀವ್ ಚಂದ್ರಶೇಖರ್?
ಕನ್ನಡದ ಜನಪ್ರಿಯ ಸುದ್ದಿ ವಾಹಿನಿಯಾದ ಟಿ.ವಿ. 9 ಕೊಳ್ಳಲು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ನಿರ್ಧಾರ. ವಾಹಿನಿಯಲ್ಲಿರುವವ ಶೇ. 60ರಷ್ಟು ಷೇರು ಕೊಳ್ಳಲು ರಾಜೀವ್ ಚಂದ್ರಶೇಖರ್ ಸಿದ್ಧ ಎಂದ ಮೂಲಗಳು.
ಬೆಂಗಳೂರು, ಜುಲೈ 15: ಕನ್ನಡ ಸುದ್ದಿ ವಾಹಿನಿಗಳ ಲೋಕದಲ್ಲಿ ಅತ್ಯಂತ ಜನಪ್ರಿಯ ಸುದ್ದಿಸಂಸ್ಥೆಯೆಂದೆನಿಸಿರುವ 'ಟಿವಿ 9 ಕನ್ನಡ' ವಾಹಿನಿಯನ್ನು ಕೊಳ್ಳಲು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಪ್ರಯತ್ನಿಸಿದ್ದಾರೆಂಬ ವರದಿಯೊಂದು ಮಾಧ್ಯಮ ಲೋಕದಲ್ಲಿ ಗುಲ್ಲೆಬ್ಬಿಸಿದೆ.
'ಜ್ಯೂಪಿಟರ್ ಕ್ಯಾಪಿಟಲ್ಸ್' ಎಂಬ ಸಂಸ್ಥೆಯ ಒಡೆಯರೂ ಆಗಿರುವ ರಾಜೀವ್ ಚಂದ್ರಶೇಖರ್, ಟಿವಿ 9ನಲ್ಲಿನ ಸುಮಾರು ಶೇ. 60ರಷ್ಟು ಷೇರನ್ನು ಕೊಳ್ಳಲು ಮುಂದಾಗಿದ್ದಾರೆಂದು 'ಎಕ್ಸ್ ಚೇಂಜ್ 4 ಮೀಡಿಯಾ' ಎಂಬ ಸುದ್ದಿಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.

ಈ ಬಗ್ಗೆ ತಮ್ಮನ್ನು ಸಂಪರ್ಕಿಸಿದ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ರಾಜೀವ್ ಚಂದ್ರಶೇಖರ್ ತಾವು ಟಿವಿ 9 ಕೊಳ್ಳುತ್ತಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಮಾಧ್ಯಮ ಲೋಕದ ವ್ಯವಹಾರಗಳ ಕೆಲ ಉನ್ನತ ಮೂಲಗಳು ರಾಜೀವ್ ಅವರ ಕಡೆಗೇ ಕೈ ತೋರಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಟಿವಿ 9ನಲ್ಲಿ ತಮ್ಮ ಷೇರುಗಳನ್ನು ಮಾರಾಟಕ್ಕಿಟ್ಟಿರುವ ಶ್ರೀನಿವಾಸ್ ರಾಜು ಎಂಬುವರು, ಎಕ್ಸ್ ಚೇಂಜ್ 4 ಮೀಡಿಯಾದೊಂದಿಗೆ ಮಾತನಾಡಿ, ತಮ್ಮ ಷೇರುಗಳನ್ನು ಮಾರಾಟ ಮಾಡಲು ತಾವು ಸಿದ್ಧರಿದ್ದು, ಸುಮಾರು 4 ಕಂಪನಿಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ಹೇಳಿದ್ದಾರೆ.
ಆದರೆ, ಈ ಬಗ್ಗೆ ಹೆಚ್ಚಿನ ವಿವರ ಹೇಳಲು ನಿರಾಕರಿಸಿದ ಅವರು ಗೌಪ್ಯತೆ ಕಾಪಾಡುವ ಒಪ್ಪಂದಕ್ಕೆ ತಾವು ಸಹಿ ಹಾಕಿರುವುದರಿಂದ ಈ ಬಗ್ಗೆ ಹೆಚ್ಚಿನದ್ದೇನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಒಂದು ಮೂಲದ ಪ್ರಕಾರ, ಟಿವಿ 9 ಕನ್ನಡದಲ್ಲಿ ಶ್ರೀನಿವಾಸ್ ರಾಜು ಅವರ ಪಾಲು 500ರಿಂದ 600 ಕೋಟಿ ರು.ಗಳಿಷ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಅದೇನೇ ಇರಲಿ, ಟಿವಿ 9 ಕನ್ನಡ ಸಂಸ್ಥೆ ಮಾರಾಟಕ್ಕಿದೆ ಎಂಬ ಮಾತು ಬಹು ದಿನಗಳಿಂದಲೇ ಕೇಳಿಬರುತ್ತಿರುವುದಂತೂ ಸತ್ಯ. ಅದರ ಬೆನ್ನಲ್ಲೇ, ಹಲವಾರು ವದಂತಿಗಳೂ ಹೀಗೆ ಹರಿದಾಡುತ್ತಿರುವೂ ಅಷ್ಟೇ ಸತ್ಯ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications