ಚುನಾವಣೆಯಲ್ಲಿ ಬಿಜೆಪಿಗೆ ಸೋಲು, ರುಪಾಯಿ ಮೌಲ್ಯ ಕುಸಿತ- 5 ಅಂಶಗಳು
ಮುಂಬೈ, ಡಿಸೆಂಬರ್ 12: ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳ ಹಿನ್ನಲೆಯಲ್ಲಿ ಷೇರುಪೇಟೆಯಲ್ಲಿ ಏರಿಳಿತ ಮುಂದುವರೆದಿದೆ. ಜೊತೆಗೆ ಡಾಲರ್ ಎದುರು ರುಪಾಯಿ ಮೌಲ್ಯ ಕೂಡಾ ಕುಸಿಯುತ್ತಿದೆ.
ಸೋಮವಾರದಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜೀನಾಮೆಯಿಂದ ಷೇರುಪೇಟೆಯಲ್ಲಿ ಭಾರಿ ಕುಸಿತ ಉಂಟಾಗಿತ್ತು. ಮಂಗಳವಾರ(ಡಿ.11)ದಂದು ಬಿಜೆಪಿ ಆಡಳಿತ ರಾಜ್ಯಗಳಲ್ಲಿನ ಫಲಿತಾಂಶದಲ್ಲಿ ಅತಂತ್ರ ಸ್ಥಿತಿ ಕಾಣಿಸಿದ್ದರಿಂದ ಕೆಲ ಷೇರುಗಳು ಆರಂಭಿಕ ಕುಸಿತ ಕಂಡಿದ್ದವು
ರುಪಾಯಿ ಮೌಲ್ಯ: ಮಂಗಳವಾರದಂದು 72.46 ರು ಪ್ರತಿ ಡಾಲರ್ ನಂತೆ ವಹಿವಾಟು ಆರಂಭಿಸಿತ್ತು. ಸೋಮವಾರದಂದು 50 ಪೈಸೆ ಕಳೆದುಕೊಂಡು 71.32ರು ನಂತೆ ಇತ್ತು. ಜಾಗತಿಕ ಮಾರುಕಟ್ಟೆ ವ್ಯತ್ಯಯ, ಊರ್ಜಿತ್ ಪಟೇಲ್ ರಾಜೀನಾಮೆ, ವಿದೇಶಿ ವಿನಿಯಮ ವ್ಯತ್ಯಾಸ ಎಲ್ಲವೂ ಕಾರಣವಾಗಿತ್ತು.
ಮಂಗಳವಾರಂದು 71.84ರಂತೆ ವಹಿವಾಟು ಮುಗಿದ್ದ ಡಾಲರ್ ವಿರುದ್ಧ ರುಪಾಯಿ ಬುಧವಾರದಂದು ಮೌಲ್ಯ 72.01 ನಷ್ಟಿತ್ತು. ಒಪೆಕ್ ಸಭೆ, ಕಚ್ಚಾತೈಲ ಉತ್ಪಾದನೆ ಪೂರೈಕೆ ಭಾರತದಂಥ ರಾಷ್ಟ್ರಗಳ ಆಮದು ಬೇಡಿಕೆ ಹೆಚ್ಚಳ ಎಲ್ಲವೂ ರುಪಾಯಿ ಮೌಲ್ಯ ಇನ್ನಷ್ಟು ಕುಸಿಯುವಂತೆ ಮಾಡುವ ಸಾಧ್ಯತೆಯನ್ನು ಉಂಟು ಮಾಡಿದೆ.
ಕಳೆದ ಕೆಲ ದಿನಗಳಿಂದಲೂ ಷೇರು ಮಾರುಕಟ್ಟೆ ಕುಸಿಯುತ್ತಲೇ ಇದ್ದು, ಚೇತರಿಕೆ ಕಾಣುವ ಲಕ್ಷಣಗಳಿಲ್ಲ. ಡಿಸೆಂಬರ್ 14ರಂದು ಹೊಸ ಗವರ್ನರ್ ಶಕ್ತಿಕಾಂತ್ ಅವರು ಆರ್ ಬಿಐ ಸಭೆ ನಡೆಸಲಿದ್ದು, ಸಭೆ ಬಳಿಕ ಪರಿಸ್ಥಿತಿ ಬದಲಾವಣೆ ನಿರೀಕ್ಷಿಸಬಹುದು.

ಮೂಲಾಂಶದಲ್ಲಿ ಬದಲಾವಣೆ ಸಾಧ್ಯತೆ
ಆರ್ ಬಿಐ ತನ್ನ ರೆಪೋ ದರ, ಸಿಆರ್ ಆರ್ ದರದಲ್ಲಿ ಬದಲಾವಣೆ ಮಾಡುವ ನಿರೀಕ್ಷೆಯಿದೆ. ಐಎಫ್ಎ ಗ್ಲೋಬಲ್ ಸಂಸ್ಥೆ ಪ್ರಕಾರ, ಹೊಸ ಗವರ್ನರ್ ಅವರಿಂದ ಸ್ಥಿರತೆ ಕಾಯ್ದುಕೊಳ್ಳುವ ಮಾರ್ಗದರ್ಶನ ಸಿಗುವ ನಿರೀಕ್ಷೆಯಿದೆ. ಡಾಲರ್ ಎದುರು ರುಪಾಯಿ ಕೆಲ ಸಮಯದ ಮಟ್ಟಿಗೆ 71.90 ರಿಂದ 72.35 ರು ನಂತೆ ವಹಿವಾಟು ನಡೆಸುವ ಸಾಧ್ಯತೆಗಳಿವೆ

ಹೂಡಿಕೆದಾರರಿಗೆ ಆಕರ್ಷಣೆ
ಎಚ್ ಡಿ ಎಫ್ ಸಿ ಬ್ಯಾಂಕಿನ ಆರ್ಥಿಕ ತಜ್ಞರ ಪ್ರಕಾರ, ನವೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಅಂಕಿ ಅಂಶ ಹೊರಬಂದ ನಂತರ ಮುಂದಿನ ಮಾರ್ಗದರ್ಶಿ ಸೂತ್ರಗಳು ತಿಳಿದು ಬರಲಿದೆ. ಆಹಾರ ಉತ್ಪನ್ನ, ಇಂಧನ ದರ ಮೇಲೆ ನಿಯಂತ್ರಣದ ಭರವಸೆ ಸಿಕ್ಕರೆ ಹೆಚ್ಚು ಹೂಡಿಕೆದಾರರನ್ನು ಆಕರ್ಷಿಸುವ ಸಾಧ್ಯತೆಯಿದೆ.

ಕಚ್ಚಾತೈಲ ದರ ಏರಿಳಿತ
ಜಾಗತಿಕ ಮಟ್ಟದಲ್ಲಿ ತೈಲ ಉತ್ಪಾದನಾ ರಾಷ್ಟ್ರಗಳ ನಡುವಿನ ಮಾತುಕತೆ ಸಂಘರ್ಷಗಳ ನಡುವೆ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 60.85 ರು ನಷ್ಟಿತ್ತು. ಒಪೆಕ್ ಸಭೆ ಬಳಿಕ ಉತ್ಪಾದನೆ ಹಾಗೂ ಪೂರೈಕೆ ಮೇಲಿನ ನಿಯಂತ್ರಣ ದರ ಮೇಲೆ ನಿರೀಕ್ಷೆಗಳಿವೆ.

ಕರೆನ್ಸಿ ಮಾರುಕಟ್ಟೆಯಲ್ಲಿನ ಪರಿಸ್ಥಿತಿ
ಬ್ರಿಟಿಷ್ ಪೌಂಡ್ ಕೂಡಾ ಕುಸಿತ ಕಂಡಿದ್ದು, ಡಾಲರ್ ಎದುರ 20 ತಿಂಗಳ ಹಿಂದಿನ ದರಕ್ಕೆ ಇಳಿದಿದೆ. ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ ಅವರು ಬ್ರೆಕ್ಸಿಟ್ ಒಪ್ಪಂದ ಕುರಿತ ಸಭೆಯನ್ನು ಮುಂದೂಡಿದ್ದೆ ಇದಕ್ಕೆ ಕಾರಣ.ಸದ್ಯಕ್ಕೆ ಡಾಲರ್ ಮೌಲ್ಯ ಸ್ಥಿರವಾಗಿದ್ದು, ಜಾಗತಿಕವಾಗಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications