ರುಪಾಯಿ ದುರ್ಬಲಕ್ಕೆ ಪಿ-ನೋಟ್ಸ್ ಕಾರಣ ಎಂದ ಸ್ವಾಮಿ, ಏನಿದು ಪಿ-ನೋಟ್ಸ್?
ಅಮೆರಿಕದ ಡಾಲರ್ ವಿರುದ್ಧ ಭಾರತದ ರುಪಾಯಿ ಮೌಲ್ಯ ದುರ್ಬಲವಾಗಲು ಪಾರ್ಟಿಸಿಪೇಟರಿ ನೋಟ್ಸ್ (ಪಿಎನ್) ಕಾರಣವೇ? ಹೌದು ಎನ್ನುತ್ತಿದ್ದಾರೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ.
"ನಾನು ಮುಂಚಿನಿಂದಲೂ ಎಚ್ಚರಿಸುತ್ತಿದ್ದೇನೆ. ಕಪ್ಪು ಹಣವನ್ನು ಕಾನೂನುಬದ್ಧಗೊಳಿಸಿ ಭಾರತದೊಳಕ್ಕೆ ದೊಡ್ಡ ಮಟ್ಟದ ಹಣ ವಿದೇಶಿ ಬಂಡವಾಳವಾಗಿ ಹರಿದು ಬರುತ್ತಿರುವುದು ಸಿಂಗಾಪುರ ಹಾಗೂ ಮಾರಿಷಸ್ ನಿಂದ. ಅದೂ ಪಾರ್ಟಿಸಿಪೇಟರಿ ನೋಟ್ಸ್ ಮೂಲಕ ಕಪ್ಪು ಹಣ ಭಾರತದೊಳಗೆ ಬಂದು, ದೇಶದ ಕರೆನ್ಸಿ ಮೌಲ್ಯವನ್ನು ಕುಗ್ಗಿಸುತ್ತಿದೆ. ಆದ್ದರಿಂದ ಅವುಗಳನ್ನು ರದ್ದು ಮಾಡಬೇಕು" ಎಂದು ಹೇಳಿದ್ದಾರೆ.
ಅಂದಹಾಗೆ ಪಿ- ನೋಟ್ಸ್ ಅಂತ ಕರೆಯುವ ಇವುಗಳಿಂದ ಭಾರತದ ಆರ್ಥಿಕತೆಯಲ್ಲಿ ಬಹಳ ಏರುಪೇರಾಗುತ್ತದೆ ಎಂಬ ಕಾಳಜಿ ಬಹಳ ಹಿಂದಿನಿಂದಲೂ ಇದೆ. ಪಿ-ನೋಟ್ಸ್ ಅಂದರೆ ಫೈನಾನ್ಷಿಯಲ್ ಇನ್ ಸ್ಟ್ರುಮೆಂಟ್. ಹೂಡಿಕೆದಾರರು ಅಥವಾ ಹೆಡ್ಜ್ ಫಂಡ್ಸ್ ಹೀಗೆ ಯಾರು ಭಾರತದ 'ಸೆಬಿ' ಜತೆಗೆ ನೋಂದಣಿ ಮಾಡಿರುವುದಿಲ್ಲವೋ ಅಂಥವರು ದೇಶದ 'ಸೆಕ್ಯೂರಿಟೀಸ್'ನಲ್ಲಿ (ಷೇರು ಮತ್ತಿತರದರಲ್ಲಿ) ಹೂಡಿಕೆ ಮಾಡಲು ಇದು ಅಗತ್ಯ.

ಈ ಹೂಡಿಕೆಯಿಂದ ಬರುವ ಡಿವಿಡೆಂಡ್ (ಲಾಭಾಂಶ) ಅಥವಾ ಬಂಡವಾಳದ ಮೇಲಿನ ಲಾಭ ಹೂಡಿಕೆದಾರರಿಗೆ ವಾಪಸ್ ಆಗುತ್ತದೆ. ಭಾರತದ ನೀತಿ ನಿರೂಪಕರು ಈ ಪಿ-ನೋಟ್ಸ್ ಗಳ ವಿರುದ್ಧವಾಗಿದ್ದಾರೆ. ಅದಕ್ಕೆ ಕಾರಣ ಏನೆಂದರೆ ದೇಶದ ಆರ್ಥಿಕ ವ್ಯವಸ್ಥೆಗೆ ಇದರಿಂದ ಮಾರಕವಾಗುತ್ತದೆ ಎಂಬುದು ಅವರ ಅಭಿಪ್ರಾಯ.
ಇನ್ನು ಭಾರತದ ಬಂಡವಾಳ ಮಾರುಕಟ್ಟೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ ಐಐ) ಶೀಘ್ರವಾಗಿ ಹಣ ಒದಗಿಸುತ್ತಾರೆ. ಅದೂ ಅಲ್ಪಾವಧಿಯ ಹೂಡಿಕೆಯಾಗಿರುತ್ತದೆ. ಅದಕ್ಕಾಗಿ ಹೆಚ್ಚು ನಿಯಮಗಳೇನೂ ಇಲ್ಲ. ಆದ್ದರಿಂದ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕೆ ಮತ್ತು ನೀತಿ-ನಿಬಂಧನೆಗಳ ಸಿಕ್ಕು ತಪ್ಪಿಸಿಕೊಂಡು ಅನುಮತಿ ಪಡೆಯುವುದಕ್ಕೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಪಿ-ನೋಟ್ಸ್ ಬಳಸುತ್ತಾರೆ.
ಪಿ-ನೋಟ್ಶ್ ಗಳನ್ನು ನೀಡುವವರು ಯಾರು, ಅದರ ನಿಜವಾದ ಮಾಲೀಕರು ಯಾರು ಅಂತೆಲ್ಲ ಗುರುತಿಸುವುದು ಕಷ್ಟ. ಆ ಮೂಲಕ ಬರುವ ಹಣದ ಲೆಕ್ಕ ಕೂಡ ಸಿಗಲ್ಲ. ಪಿ-ನೋಟ್ಸ್ ಮೂಲಕ ನಡೆಸುವ ವ್ಯವಹಾರ ಸೆಬಿ ವ್ಯಾಪ್ತಿಗೂ ಬರುವುದಿಲ. ಸೆಬಿ ಜತೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನೋಂದಣಿ ಮಾಡಬೇಕೇನೋ ಹೌದು. ಆದರೆ ಪಿ-ನೋಟ್ಸ್ ವ್ಯವಹಾರ ನೋಂದಣಿ ಆಗಬೇಕೆಂದಿಲ್ಲ. ಇದರಿಂದ ಅಕ್ರಮ ಹಣ ವರ್ಗಾವಣೆಗೆ ಅವಕಾಶ ಆಗುತ್ತದೆ.
ಆದರೆ, ಪಿ-ನೋಟ್ಸ್ ಮೇಲೆ ನಿಬಂಧನೆ ಹೇರುವುದಕ್ಕೆ ಸರಕಾರ ಪ್ರಯತ್ನಿಸಿದರೆ ವಿದೇಶಿ ಬಂಡವಾಳ ಹರಿದುಬರುವುದಕ್ಕೆ ತೊಡಕಾಗುತ್ತದೆ. ಈ ಹಿಂದೆ ಅಂದರೆ 2007ರ ಅಕ್ಟೋಬರ್ ನಲ್ಲಿ ಅಂಥ ವ್ಯವಹಾರಕ್ಕೆ ತಡೆ ಹಾಕಲು ಸರಕಾರ ಮುಂದಾದಾಗ ಷೇರು ಮಾರುಕಟ್ಟೆಯು 1744 ಅಂಶಗಳ ಕುಸಿತ ಕಂಡಿತ್ತು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications