ಎಂಟಿಆರ್ ಆಹಾರ, ಮೈಸೂರು ಸ್ಯಾಂಡಲ್ ಸೋಪ್ ಯುಎಸ್ ನಲ್ಲಿ ತಿರಸ್ಕೃತ
ಬೆಂಗಳೂರು, ಸೆಪ್ಟೆಂಬರ್ 22: ಅಮೆರಿಕಾದಲ್ಲಿ ಕರ್ನಾಟಕದ ಮೈಸೂರು ಸ್ಯಾಂಡಲ್ ಸೋಪ್, ಎಂಟಿ ಆರ್ ನ ಆಹಾರ ಪದಾರ್ಥಗಳನ್ನು ತಿರಸ್ಕರಿಸಲಾಗಿದೆ ಎಂದು ವರದಿಯಾಗಿದೆ.
ಈ ವರ್ಷದ ಜನವರಿ ಹಾಗೂ ಆಗಸ್ಟ್ ಮಧ್ಯೆ ಭಾರತದ ವಿವಿಧ ರಾಜ್ಯಗಳ 1859 ಸರಕನ್ನು ಅಮೆರಿಕಾ ತಿರಸ್ಕೃತಗೊಳಿಸಿದೆ. ಆ ಪೈಕಿ ಕೆಲವು ಡೀಲರ್ಸ್ ಗಳಂತೂ ನೇರವಾಗಿ ತಯಾರಿಕರಿಂದಲೇ ವಸ್ತುಗಳನ್ನು ಖರೀದಿಸಿದವರಲ್ಲ. ಬ್ರ್ಯಾಂಡೆಡ್ ವಸ್ತುಗಳನ್ನು ರಫ್ತು ಮಾಡಿದ್ದವರೇ ಬಲಿಪಶುಗಳಾಗಿದ್ದಾರೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.[ಇನ್ನು ಹಾಪ್ ಕಾಮ್ಸ್ ನಲ್ಲಿ ಎಂಟಿಆರ್ ಉತ್ಪನ್ನಗಳು ಲಭ್ಯ]

ಎಂಟಿ ಆರ್ ಫುಡ್ಸ್ ನ ಸಿಇಒ ಸಂಜಯ್ ಶರ್ಮಾ, ಅಮೆರಿಕಾ ಆಹಾರ ಸುರಕ್ಷತೆ ಕಾಯ್ದೆ ಅನ್ವಯ ತಿರಸ್ಕೃತವಾದ ಸರಕುಗಳನ್ನು ರಫ್ತು ಮಾಡಿದ್ದವರು ಸಣ್ಣ ವ್ಯಾಪಾರಿಗಳು. ಅವರು ಸ್ಥಳೀಯವಾಗಿ ಖರೀದಿಸಿದವರು. ಆ ದೇಶದ ಆಮದು ನಿಯಮ ತಿಳಿದುಕೊಳ್ಳದೆ ಹೀಗೆ ಆಗಿದೆ. ಇದರಿಂದ ಅಮೆರಿಕಾದ ಆಹಾರ ಸುರಕ್ಷತೆ ಅಧಿಕಾರಿಗಳ ಕಣ್ಣಲ್ಲಿ ಕಂಪೆನಿಯ ಬ್ರ್ಯಾಂಡ್ ಹಾಗೂ ವಿಶ್ವಾಸಾರ್ಹತೆ ಕಡಿಮೆ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ವಿಪ್ರೋ ಕಂಪೆನಿ ತಯಾರಿಸುವ ವಸ್ತುಗಳು ತಿರಸ್ಕೃತವಾಗಿವೆ. ಈ ಬಗ್ಗೆ ಗ್ರಾಹಕರ ವಿಭಾಗದವರು ಸ್ಪಷ್ಟನೆ ನೀಡಿದ್ದು, ನಾವು ಅಮೆರಿಕಾಗೆ ರಫ್ತು ಮಾಡುವುದಿಲ್ಲ. ಈ ವರದಿಯಿಂದ ಆಶ್ಚರ್ಯವಾಗಿದೆ. ಅವು ನಕಲಿ ವಸ್ತುಗಳು. ಆ ಸ್ಯಾಂಪಲ್ ಗಳು ಮೈಸೂರಿನಲ್ಲಿ ತಯಾರಾದವು ಎಂದು ತಿಳಿದುಬಂದಿದೆ.[ಎಂಟಿಆರ್ ನಲ್ಲಿ ದೋಸೆ, ರವಾ ಇಡ್ಲಿ, ಹಲ್ವಾ ಸವಿದ ಸಿಎಂ]
ನಾವು ಮೈಸೂರಿನಲ್ಲಿ ಯಾವ ಸೋಪೂ ತಯಾರಿಸುವುದಿಲ್ಲ. ಇದರಿಂದ ಭಾರತದ ಮಾರುಕಟ್ಟೆಯಲ್ಲೂ ತೊಂದರೆ ಆಗುತ್ತೆ. ನಾವು ಗ್ರಾಹಕರಿಗೆ ಖಂಡಿತಾ ನಕಲಿ ವಸ್ತುಗಳನ್ನು ಪೂರೈಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಅಮೆರಿಕಾದ ಆಹಾರ ಮತ್ತು ಔಷಧ ಒಕ್ಕೂಟ 2015ರಲ್ಲಿ ಭಾರತದ ಹಲವು ತಿನಿಸುಗಳ ಆಮದನ್ನು ತಿರಸ್ಕರಿಸುವಂತೆ ಸಲಹೆ ನೀಡಿತ್ತು ಎಂದು ವರದಿಯಾಗಿತ್ತು. ಹಲ್ದೀರಾಮ್ಸ್ ಅವರ ಹಲವು ತಿನಿಸುಗಳು ತಿರಸ್ಕೃತವಾಗಿದ್ದವು. ಅದೇ ವರ್ಷದ ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿದ್ದ ತಿರಸ್ಕೃತ ತಿನಿಸುಗಳ ಪಟ್ಟಿಯಲ್ಲಿ ಹಲ್ದೀರಾಮ್ಸ್ ಕಂಪೆನಿಯ ಹಲವು ತಿನಿಸುಗಳಿದ್ದವು.[ರೈಲಿನಲ್ಲಿ ಸಿಗಲಿದೆ ಎಂಟಿಆರ್ ಇಡ್ಲಿ, ಸಾಂಬಾರ್]
ಇನ್ನು ಇದಕ್ಕೆ ಕಾರಣವನ್ನೂ ಕೊಡಲಾಗಿದೆ. ಪ್ಯಾಕೇಜಿಂಗ್ ಸಮಸ್ಯೆ, ಕಲಬೆರಕೆ ಆರೋಪ, ಇದರ ಜತೆಗೆ ಭಾರತದ ಪದಾರ್ಥಗಳಲ್ಲಿ ಕೀಟನಾಶಕ ಔಷಧಗಳ ಪ್ರಮಾಣ ಹೆಚ್ಚು, ಬ್ಯಾಕ್ಟೀರಿಯಾಗಳು ಇರುತ್ತವೆ ಎನ್ನಲಾಗಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ












Click it and Unblock the Notifications