ಟೆಕ್ಕಿಗಳೇ ಎಚ್ಚರ ! ನಿಮ್ಮ ಉದ್ಯೋಗಕ್ಕೆ ಕಾದಿದೆ ಸಂಚಕಾರ!
ಸಾಮಾನ್ಯವಾಗಿ ವಾರ್ಷಿಕ ಅಪ್ರೈಸಲ್ ಪ್ರಕ್ರಿಯೆಗಳ ನಂತರ, ಒಂದಿಷ್ಟು ಉದ್ಯೋಗಗಳನ್ನು ಕಡಿತ ಮಾಡುತ್ತಿದ್ದ ಈ ಕಂಪನಿಗಳು, ಈ ಬಾರಿ ದೊಡ್ಡ ಮಟ್ಟದಲ್ಲೇ ಉದ್ಯೋಗ ಕಡಿತಕ್ಕೆ ಕೈ ಹಾಕಿವೆ.
ನವದೆಹಲಿ, ಏಪ್ರಿಲ್ 21: ಅಮೆರಿಕ, ಸಿಂಗಾಪುರ ಹಾಗೂ ಆಸ್ಟ್ರೇಲಿಯಾ ಸರ್ಕಾರಗಳ ವೀಸಾ ನಿಯಮಗಳಲ್ಲಿ ಭಾರೀ ಬದಲಾವಣೆಗಳಾಗಿರುವುದು ಭಾರತೀಯ ಐಟಿ ವಲಯದಲ್ಲಿ ಹೊಸ ತಲ್ಲಣ ಸೃಷ್ಟಿ ಮಾಡಿದೆ.
ಸಾಮಾನ್ಯವಾಗಿ ವಾರ್ಷಿಕ ಅಪ್ರೈಸಲ್ ಪ್ರಕ್ರಿಯೆಗಳ ನಂತರ, ಒಂದಿಷ್ಟು ಉದ್ಯೋಗಗಳನ್ನು ಕಡಿತ ಮಾಡುತ್ತಿದ್ದ ಈ ಕಂಪನಿಗಳು, ಈ ಬಾರಿ ದೊಡ್ಡ ಮಟ್ಟದಲ್ಲೇ ಉದ್ಯೋಗ ಕಡಿತಕ್ಕೆ ಕೈ ಹಾಕಿವೆ.
ವಿಪ್ರೋದಲ್ಲಿ ಈಗಾಗಲೇ 600 ಮಂದಿಗೆ ಕೊಕ್ ನೀಡಲಾಗಿದ್ದು, ಈ ಸಂಖ್ಯೆ ಅಲ್ಲಿ 2000ಕ್ಕೆ ಮುಟ್ಟುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.[600 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ವಿಪ್ರೋ]

ಅಷ್ಟೇ ಅಲ್ಲ, ಕಾಗ್ನಿಜೆಂಟ್ ಹಾಗೂ ಇನ್ನಿತರ ಕಂಪನಿಗಳಲ್ಲಿ ಈ ವರ್ಷ ಜಾಗತಿಕ ಮಟ್ಟದಲ್ಲಿ ಸುಮಾರು 10 ಸಾವಿರದಷ್ಟು ಉದ್ಯೋಗ ಕಡಿತವಾಗಬಹುದು ಎಂದು ಅಂದಾಜಿಸಲಾಗಿದೆ.
ಒಂದೆಡೆ ಇಂಥ ಉದ್ಯೋಗ ಕಡಿತಗಳಾದರೆ, ಮತ್ತೊಂದೆಡೆ ಕಂಪನಿಗಳ ನೇಮಕಾತಿಯಲ್ಲೂ ಗಣನೀಯ ಇಳಿಕೆ ಕಂಡಿದೆ. ಉದಾಹರಣೆಗೆ, 2015-16ರಲ್ಲಿ ಇನ್ಫೋಸಿಸ್ ಕಂಪನಿಯು 17,857 ಇಂಜಿನಿಯರ್ ಗಳಿಗೆ ತನ್ನಲ್ಲಿ ಕೆಲಸ ಕೊಟ್ಟಿದ್ದರೆ, 2016-17ರಲ್ಲಿ ಈ ನೇಮಕಾತಿಯ ಪ್ರಮಾಣ 6,320ರಷ್ಟಿತ್ತು. ಅಂದರೆ, ನೇಮಕಾತಿಯಲ್ಲಿ ಅರ್ಧಕ್ಕಿಂತಲೂ ಕಡಿಮೆ ಎಂದರ್ಥ.
ಇನ್ನು, ಫ್ರಾನ್ಸ್ ಮೂಲದ ಕ್ಯಾಪ್ ಜೆಮಿನಿಯಲ್ಲೂ ಕೆಲವಾರು ಬದಲಾವಣೆಗಳನ್ನು ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಔಟ್ ಸೋರ್ಸಿಂಗ್ ಲೆಕ್ಕಾಚಾರದಲ್ಲಿ ಸುಮಾರು ಶೇ. 40ರಷ್ಟು ಸಿಬ್ಬಂದಿಯನ್ನು ಹೊರಗುತ್ತಿಗೆ ರೂಪದಲ್ಲಿ ಕೆಲಸ ಕೊಡುತ್ತಿದ್ದ ಈ ಕಂಪನಿ ಅದರ ಪ್ರಮಾಣವನ್ನು ಶೇ. 15ಕ್ಕೆ ಇಳಿಸಿದೆ.
ಟಾಟಾ ಕನ್ಸಲ್ಟೆನ್ಸಿ ಕಂಪನಿ ಕೂಡ ತನ್ನ ಹೊಸ ನೇಮಕಾತಿಯಲ್ಲಿ ಗಣನೀಯ ಕಡಿತ ಮಾಡಲು ಮುಂದಾಗಿದೆ.
ಈ ಎಲ್ಲಾ ಬೆಳವಣಿಗಳಿಂದಾಗಿ, ಕೆಲಸ ಕಳೆದುಕೊಂಡ ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಮತ್ತೊಂದೆಡೆ ಕೆಲಸ ಸಿಕ್ಕುವುದು ದುರ್ಲಭ ಎನ್ನುವಂತಾಗಿದೆ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications