ಕೈ ಜೋಡಿಸಲಿವೆ ಮೈಕ್ರೋಸಾಫ್ಟ್, ಇಂಟೆಲ್, ಜೆಪಿ ಮಾರ್ಗನ್!!
ಜಾಗತಿಕ ಮಟ್ಟದಲ್ಲಿ ವ್ಯಾಪಾರ ಕುಸಿದಿರುವ ಕಾರಣದಿಂದಾಗಿ ಪರಸ್ಪರ ಕೈ ಜೋಡಿಸಿದ ಕಂಪನಿಗಳು; ಹೊಸ ಸಹಭಾಗಿತ್ವದಿಂದ ವ್ಯಾಪಾರಾಭಿವೃದ್ಧಿಯ ನಿರೀಕ್ಷೆ
ನ್ಯೂಯಾರ್ಕ್, ಫೆಬ್ರವರಿ 28: ದೈತ್ಯ ಕಂಪನಿಗಳಾದ ಮೈಕ್ರೋ ಸಾಫ್ಟ್, ಇಂಟೆಲ್ ಕಾರ್ಪೊರೇಷನ್, ಜೆಪಿ ಮಾರ್ಗನ್ ಚೇಸ್ ಆ್ಯಂಡ್ ಕೋ ಸೇರಿದಂತೆ ಸುಮಾರು 12 ಕಂಪನಿಗಳು ಪರಸ್ಪರ ಕೈ ಜೋಡಿಸುಲು ಮುಂದಾಗಿದ್ದು, ಈ ಮೂಲಕ ತಂತ್ರಜ್ಞಾನ ಹಾಗೂ ವ್ಯಾಪಾರ ಅಭಿವೃದ್ಧಿಗೆ ಹೊಸದೊಂದು ಭಾಷ್ಯ ಬರೆಯಲು ಸಿದ್ಧವಾಗಿವೆ.
ಇದರ ಪರಿಣಾಮ ಭಾರತದಲ್ಲೂ ಆಗಲಿದೆ ಎಂದು ತಜ್ಞರು ನಿರೀಕ್ಷಿಸಿದ್ದಾರೆ. ಈ ದೈತ್ಯ ಕಂಪನಿಗಳ ಪರಸ್ಪರ ಕೈ ಜೋಡಿಸುವಿಕೆಯ ಮೂಲಕ ಆನ್ ಲೈನ್ ನಲ್ಲಿ ಪರಸ್ಪರ ಹೊಂದಾಣಿಕೆಯಲ್ಲಿ ಕೆಲಸ ಮಾಡಲು ಹೊಸತೊಂದು ವೇದಿಕೆ ಸೃಷ್ಟಿಯಾಗಲಿದ್ದು, ಈ ಕಂಪನಿಗಳ ನಡುವೆ ಸದೃಢ ನೆಟ್ ವರ್ಕ್ ಸಾಧಿಸಿ ಉತ್ಪನ್ನಗಳ ಗುಣಮಟ್ಟವನ್ನು ಅಗಾಧವಾಗಿ ಹೆಚ್ಚಿಸಲು ನೆರವಾಗುವುದಲ್ಲದೆ, ಗ್ರಾಹಕರಿಗೂ ಇದರಿಂದ ವಿಶೇಷ ಅನುಕೂಲ ಕಲ್ಪಿಸಲು ನಿರ್ಧರಿಸಲಾಗಿದೆ. ಇದರ ಪರಿಣಾಮ ಶೀಘ್ರವೇ ಭಾರತದ ಮೇಲೂ ಆಗಿ ಇಲ್ಲಿನ ಗ್ರಾಹಕರಿಗೆ ಈ ಕಂಪನಿಗಳ ಸಂಘದಿಂದ ಅತ್ಯುತ್ತಮ ಸೇವೆ, ಉತ್ಪನ್ನಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ಇತರ ಪ್ರತಿಷ್ಠಿತ ಕಂಪನಿಗಳಾದ ಆಕ್ಸೆಂಚರ್, ಥಾಮ್ಸನ್ ರಾಯ್ಟರ್ ಮುಂತಾದ ಕಂಪನಿಗಳೂ ಈ ಸಹಭಾಗಿತ್ವದಲ್ಲಿ ಪರಸ್ಪರ ಕೈ ಜೋಡಿಸಲಿರುವುದು ವಿಶೇಷ.
ಬದಲಾದ ಜಾಗತಿಕ ಆರ್ಥಿಕ ಸನ್ನಿವೇಶದಲ್ಲಿ ವಿಶ್ವಮಟ್ಟದಲ್ಲಿ ವ್ಯಾಪಾರದ ತೇಜಿ ಮಂದಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಪರಸ್ಪರ ಕೈ ಜೋಡಿಸುವಿಕೆಯಿಂದ ವ್ಯಾಪಾರ ಅಭಿವೃದ್ಧಿಯ ನಿಟ್ಟಿನಲ್ಲಿ ಹೊಸ ಅವಕಾಶಗಳನ್ನು ತೆರೆಯುವಂತೆ ಮಾಡಲು ನಿರ್ಧರಿಸಲಾಗಿದೆ.
ಇದರಿಂದ ಆಯಾ ಕಂಪನಿಗಳ ಗ್ರಾಹಕರಿಗೂ ಅನುಕೂಲವಾಗಲಿದ್ದು, ನಿರ್ದಿಷ್ಟ ಗ್ರಾಹಕರು ಒಂದೇ ದರದ ಪ್ಯಾಕೇಜ್ ನಡಿಯಲ್ಲಿ ಈ ಗುಂಪಿನ ಇತರೆ ಕಂಪನಿಗಳ ಉತ್ಪಾದನೆಗಳನ್ನು ಉಪಯೋಗಿಸಿಕೊಳ್ಳುವಂಥ ಅವಕಾಶಗಳೂ ಮುಂದಿನ ದಿನಗಳಲ್ಲಿ ಸಿಗಲಿದೆ ಎಂದೂ ಹೇಳಲಾಗಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications