ಭಾರತದ ಅತಿ ಶ್ರೀಮಂತ ವ್ಯಕ್ತಿಗಳ ಸಂಪತ್ತು ಎಷ್ಟು ಹೆಚ್ಚಿದೆ ಗೊತ್ತೇ?
ನವದೆಹಲಿ, ಸೆಪ್ಟೆಂಬರ್ 25: ಹುರುನ್ ರಿಪೋರ್ಟ್ ಇಂಡಿಯಾ ಮತ್ತು ಐಐಎಫ್ಎಲ್ ವೆಲ್ತ್ ಸಂಸ್ಥೆಗಳು ಬುಧವಾರ ಬಿಡುಗಡೆ ಮಾಡಿರುವ ಹುರುನ್ ಇಂಡಿಯಾ ರಿಚ್ ಲಿಸ್ಟ್ 2019ರ ಪ್ರಕಾರ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಸಂಪತ್ತು ಏರಿಕೆಯಾಗಿದ್ದರೂ, ಅದು ಗಣನೀಯ ಪ್ರಮಾಣದಲ್ಲಿ ಇಲ್ಲ.
ಹುರುನ್ ಇಂಡಿಯಾ ಲಿಸ್ಟ್ ದೇಶದಾದ್ಯಂತ 41 ವಲಯಗಳ 953 ಶ್ರೀಮಂತ ವ್ಯಕ್ತಿಗಳ ಮಾಹಿತಿ ಸಂಗ್ರಹ ಮಾಡಿತ್ತು. ಇದರಲ್ಲಿ ಕನಿಷ್ಠ 1,000 ಸಂಪತ್ತು ಉಳ್ಳವರನ್ನು ಮಾತ್ರ ಪರಿಗಣಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಪಟ್ಟಿಯಲ್ಲಿ ಶೇ 15ರಷ್ಟು ಸಂಖ್ಯೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೂರನೇ ಒಂದರಷ್ಟು, ಅಂದರೆ 344 ವ್ಯಕ್ತಿಗಳು ಸಂಪತ್ತಿನಲ್ಲಿ ಇಳಿಕೆ ಕಂಡಿದ್ದರೆ, 112 ಮಂದಿ ಕನಿಷ್ಠ ಗುರಿ ಮುಟ್ಟುವಲ್ಲಿ ವಿಫಲರಾಗಿದ್ದಾರೆ.
ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ 122 ಹೆಚ್ಚು ವ್ಯಕ್ತಿಗಳು ಈ ಪಟ್ಟಿಗೆ ಸೇರಿಕೊಂಡಿದ್ದಾರೆ. 2016ರ ಪಟ್ಟಿಗೆ ಹೋಲಿಸಿದರೆ 1,000 ಕೋಟಿಗೂ ಮೀರಿದ ಸಂಪತ್ತು ಉಳ್ಳವರ ಸಂಖ್ಯೆ ಶೇ 181ರಷ್ಟು ಹೆಚ್ಚಾಗಿದೆ.

ಮುಕೇಶ್ ಅಂಬಾನಿ ಆದಾಯ
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ರಿಲಯನ್ಸ್ ಸಮೂಹದ ಅಧ್ಯಕ್ಷ ಮುಕೇಶ್ ಅಂಬಾನಿ 3,80,700 ಕೋಟಿ ರೂ ಆದಾಯ ಹೊಂದಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರ ಸಂಪತ್ತು ಶೇ 3ರಷ್ಟು ಮಾತ್ರ ಹೆಚ್ಚಳವಾಗಿದೆ.

ಅದಾನಿ ಆದಾಯ ಭಾರಿ ಹೆಚ್ಚಳ
ಗೌತಮ್ ಅದಾನಿ ಮತ್ತು ಕುಟುಂಬದ ಆದಾಯ ಶೇ 33ರಷ್ಟು ಹೆಚ್ಚಾಗಿದೆ. ಅದಾನಿ ಕುಟುಂಬದ ಸಂಪತ್ತು 94,500 ಕೋಟಿ ರೂ. ಎಸ್ಪಿ ಹಿಂದೂಜಾ ಮತ್ತು ಕುಟುಂಬದ ಸಂಪತ್ತು ಶೇ 17ರಷ್ಟು ಏರಿಕೆಯಾಗಿದ್ದು, 1,86,500 ಕೋಟಿ ಮೌಲ್ಯದ ಸಂಪತ್ತು ಹೊಂದಿದ್ದಾರೆ.

ಮಿತ್ತಲ್ ಆದಾಯ ಕುಸಿತ
ಎಲ್ಎನ್ ಮಿತ್ತಲ್ ಮತ್ತು ಕುಟುಂಬದ ಸಂಪತ್ತು ಶೇ 6ರಷ್ಟು ಕುಸಿದಿದೆ. ಕುಟುಂಬ ಈಗ 1,07,300 ಕೋಟಿ ರೂ. ಸಂಪತ್ತು ಹೊಂದಿದೆ. ಅಜೀಂ ಪ್ರೇಮ್ಜಿ ಅವರ ಸಂಪತ್ತು ಶೇ 22ರಷ್ಟು ಹೆಚ್ಚಳವಾಗಿದ್ದು, 1,17,100 ಕೋಟಿ ರೂ. ಇದೆ.

ಉಳಿದ ಸಿರಿವಂತರ ಪಟ್ಟಿ
* ಉದಯ್ ಕೋಟಕ್ (ಕೋಟಕ್ ಮಹೀಂದ್ರಾ ಬ್ಯಾಂಕ್) - 94,100 ಕೋಟಿ ರೂ ಸಂಪತ್ತು. ಶೇ 20ರಷ್ಟು ಏರಿಕೆ.
* ಸಿರಸ್ ಎಸ್ ಪೂನ್ವಾಲಾ (ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ))- 88,800 ಕೋಟಿ ರೂ. ಶೇ 22ರಷ್ಟು ಹೆಚ್ಚಳ.
* ಸಿರಸ್ ಪಲ್ಲೊಂಜಿ ಮಿಸ್ತ್ರಿ (ಶಪೂರ್ಜಿ ಪಲ್ಲೊಂಜಿ)- 76,800 ಕೋಟಿ ರೂ. ಶೇ 11ರಷ್ಟು ಏರಿಕೆ.
* ಶಾಪೂರ್ ಪಲ್ಲೊಂಜಿ ಮಿಸ್ತ್ರಿ (ಶಪೂರ್ಜಿ ಪಲ್ಲೊಂಜಿ)- 76,800 ಕೋಟಿ ರೂ. ಶೇ 11ರಷ್ಟು ಹೆಚ್ಚಳ.
* ದಿಲೀಪ್ ಸಿಂಘ್ವಿ (ಸನ್ ಫಾರ್ಮಾಸಿಟಿಕಲ್)- 71,500 ಕೋಟಿ ರೂ. ಶೇ 20ರಷ್ಟು ಇಳಿಕೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications