ಷೇರು ಮಾರಾಟದ ಮೂಲಕ 15,000 ಕೋಟಿ ಸಂಗ್ರಹಿಸಲಿರುವ ಐಸಿಐಸಿಐ ಬ್ಯಾಂಕ್
ನವದೆಹಲಿ, ಜುಲೈ 8: ದೇಶದ ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್ ವಲಯ ಐಸಿಐಸಿಐ ಬ್ಯಾಂಕ್ ಲಿಮಿಟೆಡ್ ಕೊರೊನಾ ಸಾಂಕ್ರಾಮಿಕ ರೋಗದ ಆರ್ಥಿಕ ವಾತಾವರಣದಲ್ಲಿ ತನ್ನ ಬ್ಯಾಲೆನ್ಸ್ ಶೀಟ್ ಅನ್ನು ಬಲಪಡಿಸಲು, ಷೇರು ಮಾರಾಟದ ಮೂಲಕ 15,000 ಕೋಟಿ ರುಪಾಯಿ ಸಂಗ್ರಹಿಸಲು ಮುಂದಾಗಿದೆ.
ಬ್ಯಾಂಕ್ನ ಈ ಪ್ರಸ್ತಾವಿತ ನಿಧಿ ಸಂಗ್ರಹವು 13 ವರ್ಷಗಳ ನಂತರ ನಡೆಯುತ್ತಿದೆ. ಐಸಿಐಸಿಐ ಬ್ಯಾಂಕ್ ಕೊನೆಯದಾಗಿ ಜೂನ್ 2007 ರಲ್ಲಿ ಹೊಸದಾಗಿ ಷೇರುಗಳ ವಿತರಣೆಯ ಮೂಲಕ 8,750 ಕೋಟಿ ರುಪಾಯಿಗಳನ್ನು ಸಂಗ್ರಹಿಸಿತ್ತು.
ಭಾನುವಾರ, ಐಸಿಐಸಿಐ ಬ್ಯಾಂಕ್ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ಬ್ಯಾಲೆನ್ಸ್ ಶೀಟ್ ಅನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಗಮನಹರಿಸಿದೆ ಎಂದು ಹೇಳಿದೆ. ಬ್ಯಾಂಕಿನ ಶ್ರೇಣಿ -1 ಬಂಡವಾಳ ಅನುಪಾತವು 2020 ರ ಹಣಕಾಸು ವರ್ಷದಲ್ಲಿ ಶೇಕಡಾ 14.72ರಷ್ಟಿದ್ದರೆ, 2019 ರ ಹಣಕಾಸು ವರ್ಷದಲ್ಲಿ ಶೇಕಡಾ 15.09% ರಷ್ಟಿತ್ತು.

ಬ್ಯಾಂಕಿನ ಬಂಡವಾಳವು ಅಪಾಯ-ತೂಕದ ಆಸ್ತಿ ಅನುಪಾತಕ್ಕೆ (ಸಿಆರ್ಎಆರ್) 2019 ರ ಆರ್ಥಿಕ ವರ್ಷದಲ್ಲಿ ಶೇಕಡಾ 16.89 ರಿಂದ 2020 ಮಾರ್ಚ್ 31 ರ ವೇಳೆಗೆ ಶೇಕಡಾ 16.11ಕ್ಕೆ ಇಳಿದಿದೆ. ಈಗ, ಬ್ಯಾಂಕಿನ ಬಂಡವಾಳ ಸ್ಥಾನವು ದುರ್ಬಲಗೊಳ್ಳುವುದರೊಂದಿಗೆ, ಐಸಿಐಸಿಐ ಬ್ಯಾಂಕ್ ಹೆಚ್ಚು ಹಣವನ್ನು ಸಂಗ್ರಹಿಸುವ ಭರಾಟೆಯಲ್ಲಿದೆ ಷೇರು ಮಾರಾಟದ ಮೂಲಕ ಸಾಧ್ಯವಾದಷ್ಟು ಹಣ ಸಂಗ್ರಹಕ್ಕೆ ಮುಂದಾಗಿದೆ.
ಬ್ಯಾಂಕ್ ಈಗಾಗಲೇ ಕಳೆದ ತಿಂಗಳು ತನ್ನ ಎರಡು ವಿಮಾ ಅಂಗಸಂಸ್ಥೆಗಳಲ್ಲಿ ತನ್ನ ಹಿಡುವಳಿಗಳ ಒಂದು ಭಾಗವನ್ನು ಮಾರಾಟ ಮಾಡುವ ಮೂಲಕ 3,090 ಕೋಟಿ ರುಪಾಯಿ ಪಡೆದಿದೆ.
ಜೂನ್ 22 ರಂದು, ಐಸಿಐಸಿಐ ಬ್ಯಾಂಕ್ ತನ್ನ ಜೀವ ವಿಮಾ ವಿಭಾಗದ ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ಕಂ ಲಿಮಿಟೆಡ್ನಲ್ಲಿ ಶೇಕಡಾ 1.5ರಷ್ಟು ಪಾಲನ್ನು 840 ಕೋಟಿಗಳಿಗೆ ಮಾರಾಟ ಮಾಡಿತು. ಇದಕ್ಕೂ ಮೊದಲು ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಷುರೆನ್ಸ್ ಕೊ. ಲಿಮಿಟೆಡ್ನ ಶೇಕಡಾ 3.96ರಷ್ಟು ಷೇರುಗಳನ್ನು 2,250 ಕೋಟಿ ರುಪಾಯಿಗೆ ಮಾರಾಟ ಮಾಡಿತು.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications