ಎಚ್ ಪಿ ಕಂಪನಿಯಿಂದ 30 ಸಾವಿರ ಉದ್ಯೋಗ ಕಡಿತ
ಬೆಂಗಳೂರು, ಸೆ. 16: ಹ್ಯೂಲೆಟ್ ಪ್ಯಾಕರ್ಡ್ ಕೋ(ಎಚ್ ಪಿ) ಸಂಸ್ಥೆ ಮತ್ತೊಮ್ಮೆ ಭಾರಿ ಪ್ರಮಾಣದ ಉದ್ಯೋಗ ಕಡಿತ ಘೋಷಿಸಿದೆ. ಜೊತೆಗೆ ಕಂಪ್ಯೂಟರ್ ಹಾಗೂ ಪ್ರಿಂಟರ್ ವ್ಯವಹಾರ ಹಾಗೂ ಹಾರ್ಡ್ ವೇರ್ ಮತ್ತು ಇನ್ನಿತರ ಸರ್ವೀಸ್ ವಿಭಾಗ ಪ್ರತ್ಯೇಕ ಸಂಸ್ಥೆಗಳಾಗುವುದನ್ನು ಖಚಿತಪಡಿಸಿದೆ.
ಎಚ್ ಪಿ ಇಬ್ಭಾಗವನ್ನು ಸಮರ್ಧಿಸಿಕೊಂಡಿರುವ ಸಂಸ್ಥೆಯ ಸಿಇಒ ಮೆಗ್ ವಿಟ್ಮನ್ ಅವರು ಶೇ 10ರಷ್ಟು ಉದ್ಯೋಗಿಗಳು ಅಥವಾ ಸುಮಾರು 25 ರಿಂದ 30,000 ಉದ್ಯೋಗಿಗಳನ್ನು ಮನೆಗೆ ಕಳಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಈ ಮುಂಚೆ 55,000 ಉದ್ಯೋಗಿಗಳ ಕಡಿತಕ್ಕೆ ಮುಂದಾಗಿರುವುದಾಗಿ ಘೋಷಿಸಿತ್ತು.

ಎಚ್ ಪಿ ಸಂಸ್ಥೆಯ ಈ ನಿರ್ಧಾರದಿಂದ ವಾರ್ಷಿಕವಾಗಿ 2.7 ಬಿಲಿಯನ್ ಡಾಲರ್ ಉಳಿತಾಯವಾಗಲಿದೆ. ಸಂಸ್ಥೆಯಲ್ಲಿ ಸದ್ಯಕ್ಕೆ 3,00,000 ಉದ್ಯೋಗಿಗಳಿದ್ದಾರೆ.
1939ರಲ್ಲಿ ಕ್ಯಾಲಿಫೋರ್ನಿಯಾದ ಗ್ಯಾರೇಜ್ ನಲ್ಲಿ ಬಿಲ್ ಹ್ಯೂಲೆಟ್ ಹಾಗೂ ಡೇವ್ ಪ್ಯಾಕರ್ಡ್ ಅವರು ಆರಂಭಿಸಿದ ಈ ಸಂಸ್ಥೆ ಸಿಲಿಕಾನ್ ವ್ಯಾಲಿಯಲ್ಲಿ ಸದ್ದು ಮಾಡಿದ್ದಲ್ಲದೆ ಪಿಸಿ ವಿಭಾಗದಲ್ಲಿ ಕ್ರಾಂತಿ ಹುಟ್ಟುಹಾಕಿತ್ತು. 2001ರಲ್ಲಿ ಕಂಪ್ಯಾಕ್ ಕಂಪ್ಯೂಟರ್ ಖರೀದಿಸಿದ ಎಚ್ ಪಿ ಸಂಸ್ಥೆ ಡೆಲ್ ಹಾಗೂ ಐಬಿಎಂ ವಿರುದ್ಧ ಪಿಸಿ ವಿಭಾಗದಲ್ಲಿ ಭಾರಿ ಪೈಪೋಟಿ ನೀಡಿತ್ತು.
ವಿಟ್ ಮನ್ ಅವರು ಹ್ಯೂಲೆಟ್ ಪ್ಯಾಕರ್ಡ್ ಎಂಟರ್ ಪ್ರೈಸಸ್ ನ ಸಿಇಒ ಆಗಿ ಮುಂದುವರೆಯಲಿದ್ದಾರೆ. ಎಚ್ ಪಿ ಐಎನ್ ಸಿ(ಪ್ರಿಂಟಿಂಗ್, ಪರ್ಸನಲ್ ಕಂಪ್ಯೂಟರ್)ಗೆ ಡಿಯಾನ್ ವೈಸ್ಲರ್ ಚೇರ್ಮನ್ ಆಗಲಿದ್ದಾರೆ.
ಈ ವರ್ಷ ಹಲವು ದೊಡ್ಡ ಜಾಗತಿಕ ಕಂಪನಿಗಳ ವಿಭಜನೆಯನ್ನು ಕಾಣಬಹುದಾಗಿದೆ. ಕಂಪ್ಯೂಟರ್ (ಪಿಸಿ) ಕ್ಷೇತ್ರದಲ್ಲಿ ಹೊಸತನ ಹುಟ್ಟುಹಾಕಿದ ಎಚ್ ಪಿ ಸಂಸ್ಥೆ ಈಗ ತನ್ನ ಮೂಲ ಶಕ್ತಿಯನ್ನೇ ವಿಭಜನೆ ಮಾಡುತ್ತಿದೆ. ಪೆಪ್ಸಿಕೋ ಸಂಸ್ಥೆ ಕೂಡಾ ತಂಪು ಪಾನೀಯ ಹಾಗೂ ಸ್ನ್ಯಾಕ್ಸ್ ವಿಭಾಗ ಇಬ್ಭಾಗಕ್ಕೆ ಮುಂದಾಗಿದೆ. ಇದೇ ರೀತಿ ಇಬ್ಭಾಗದ ಯೋಜನೆ ಜನರಲ್ ಎಲೆಕ್ಟ್ರಿಕ್ ಸಂಸ್ಥೆಯಲ್ಲೂ ಚಾಲ್ತಿಯಲ್ಲಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications