ಇನ್ನು ಬ್ಯಾಂಕಿಗೆ ಹಣ ಕಟ್ಟಿದರೂ ಶುಲ್ಕ, ಹಣ ತೆಗೆದರೂ ಶುಲ್ಕ!
ಪ್ರಮುಖ ಬ್ಯಾಂಕುಗಳಾದ ಎಚ್ ಡಿಎಫ್ ಸಿ, ಐಸಿಐಸಿಐ ಹಾಗೂ ಆ್ಯಕ್ಸಿಸ್ ಬ್ಯಾಂಕುಗಳ ನಿರ್ಧಾರ; ಪ್ರತಿ ನಗದು ಪಾವತಿಗೆ ಕನಿಷ್ಠ 5ರಿಂದ ಗರಿಷ್ಠ 150ವರೆಗಿನ ಶುಲ್ಕ ನಿಗದಿ; ಮಾಸಿಕ 4 ವಿತ್ ಡ್ರಾ ಉಚಿತ, ಆನಂತರದ ವಿತ್ ಡ್ರಾ ಮೇಲೆ ಶುಲ್ಕ.
ನವದೆಹಲಿ, ಮಾರ್ಚ್ 2: ಎಚ್ ಡಿಎಫ್ ಸಿ, ಐಸಿಐಸಿಐ, ಆ್ಯಕ್ಸಿಸ್ ಬ್ಯಾಂಕುಗಳು ಸೇರಿದಂತೆ ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳು ತಮ್ಮಲ್ಲಿನ ನಗದು ವ್ಯವಹಾರಗಳಿಗೆ 150 ರು.ವರೆಗಿನ ಶುಲ್ಕ ವಿಧಿಸಲು ನಿರ್ಧರಿಸಿವೆ.
ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಬುಧವಾರವೇ (ಮಾ. 1) ತಮ್ಮೆಲ್ಲಾ ಶಾಖೆಗಳಿಗೆ ಈ ಬ್ಯಾಂಕುಗಳ ಕೇಂದ್ರ ಕಚೇರಿಗಳು ಸುತ್ತೋಲೆ ಹೊರಡಿಸಿದ್ದು, ಮಾರ್ಚ್ 1ರಿಂದಲೇ ಇದು ಅಧಿಕೃತವಾಗಿ ಜಾರಿಗೊಳ್ಳಲಿದೆ.

ಈ ನಿಯಮಗಳು, ವೇತನ ಖಾತೆ ಹಾಗೂ ಉಳಿತಾಯ ಖಾತೆಗಳಿಗೂ ಅನ್ವಯವಾಗಲಿದೆ ಎಂದು ಬ್ಯಾಂಕುಗಳ ಮೂಲಗಳು ತಿಳಿಸಿವೆ.
ಅದರಂತೆ, ಪ್ರಮುಖ ಬ್ಯಾಂಕುಗಳ ಅಕೌಂಟ್ ಗಳಿಗೆ ಹಣ ತುಂಬಿದಾಗ ಕನಿಷ್ಠ 150 ರು.ಗಳ ಶುಲ್ಕ ಪಾವತಿಸಬೇಕಿದೆ. ಇದಲ್ಲದೆ, ಯಾವುದೇ ಖಾತೆಯಿಂದ ಹಣ ವಿತ್ ಡ್ರಾ ಮಾಡಬೇಕಾದರೂ ಶುಲ್ಕ ತುಂಬಬೇಕಿದೆ. ಆದರೆ, ಈ ವಿಚಾರದಲ್ಲಿ ಕೊಂಚ ರಿಯಾಯಿತಿ ನೀಡಲಾಗಿದೆ.
ಡಿಬಿಟ್ ಕಾರ್ಡುಗಳ ಮೂಲಕ ಅಥವಾ ಬ್ಯಾಂಕುಗಳಲ್ಲಿ ವಿತ್ ಡ್ರಾ ಫಾರ್ಮ್ ತುಂಬುವ ಮೂಲಕ ಹಣ ಬಿಡಿಸಿಕೊಳ್ಳುವುದಾದಲ್ಲಿ ಪ್ರತಿ ತಿಂಗಳು ನಾಲ್ಕು ಬಾರಿ ಮಾತ್ರ ಶುಲ್ಕ ರಹಿತವಾಗಿ ಹಣ ಪಡೆಯಬಹುದು. ಆದರೆ, ಯಾವುದೇ ತಿಂಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಬಾರಿ ಹಣ ಡ್ರಾ ಮಾಡಿಕೊಳ್ಳುವುದಾದರೆ ಪ್ರತಿಯೊಂದು ಹಣ ಹಿಂಪಡೆಯುವ ಪ್ರಕ್ರಿಯೆಗೂ ಆಯಾ ವ್ಯವಹಾರಗಳಲ್ಲಿ ಹಿಂಪಡೆದ ಹಣದ ಮೊತ್ತದ ಮೇಲೆ ಕನಿಷ್ಠ 5ರಿಂದ 150 ರು. ಶುಲ್ಕ ಅನ್ವಯವಾಗಲಿದೆ.
ಇದಲ್ಲದೆ, ಥರ್ಡ್ ಪಾರ್ಟಿ ಫಂಡ್ ವರ್ಗಾವಣೆಗೂ (ಬೇರೊಬ್ಬರ ಖಾತೆಗೆ ಹಣ ಜಮೆ ಮಾಡುವುದು) ಮಿತಿ ಹೇರಲಾಗಿದ್ದು, ದಿನವೊಂದಕ್ಕೆ ಕೇವಲ 25 ಸಾವಿರ ರು.ವರೆಗೆ ಮಾತ್ರ ವರ್ಗಾವಣೆ ಮಾಡಲು ಅವಕಾಶವಿರುತ್ತದೆ.
ಆದರೆ, ಐಸಿಐಸಿಐ ಬ್ಯಾಂಕಿನಲ್ಲಿ ಈ ಮಿತಿಯನ್ನು ಸಡಿಲಿಸಲಾಗಿದ್ದು ದಿನವೊಂದಕ್ಕೆ 50 ಸಾವಿರ ರು.ಗಳವರೆಗೂ ಜಮೆ ಮಾಡಲು ಅವಕಾಶ ನೀಡಲಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications