ಚೀನಾದಿಂದ ಕಳಪೆ LED ಬಲ್ಬ್ ಆಮದು: ಬಲ್ಬ್ಗೂ ಬ್ರೇಕ್ ಹಾಕುತ್ತಾ ಸರ್ಕಾರ?
ನವದೆಹಲಿ, ಸೆಪ್ಟೆಂಬರ್ 19: ಚೀನಾದಿಂದ ಭಾರತಕ್ಕೆ ಆಮದಾಗುವ ಎಲ್ಇಡಿ ಬಲ್ಬ್ಗಳ ಗುಣಮಟ್ಟ ಪರೀಕ್ಷೆಯನ್ನು ಭಾರತ ಸರ್ಕಾರ ಬಿಗಿಗೊಳಿಸಿದೆ. ಇನ್ಮುಂದೆ ಚೀನಾದಿಂದ ಆಮದಾಗುವ ಎಲ್ಲಾ ಎಲ್ಇಡಿ ಉತ್ಪನ್ನಗಳಿಗೆ ಟೆಸ್ಟ್ಗಳನ್ನು ಕಡ್ಡಾಯಗೊಳಿಸಿದೆ.
ವಿದೇಶಾಂಗ ವ್ಯವಹಾರಗಳ ನಿರ್ದೇಶನಾಲಯ ಹೊರಡಿಸಿರುವ ಹೊಸ ಅಧಿಸೂಚನೆಯ ಪ್ರಕಾರ, ಆಮದಾಗುವ ಎಲ್ಲಾ ಎಲ್ ಇಡಿ ಉತ್ಪನ್ನಗಳ ಆಯ್ದ ಸ್ಯಾಂಪಲ್ಗಳನ್ನು ಗುಣಮಟ್ಟದ ಕಠಿಣ ಪರೀಕ್ಷೆಗೆ ಒಳಪಡಿಸಲಾಗುವುದು. ಚೀನಾ ಮೂಲದ ಆಮದನ್ನು ನಿರುತ್ತೇಜನಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಕಾಂಡ್ಲಾ, ಪಾರಾದಿಪ್, ಕೊಚ್ಚಿ, ಮುಂಬಯಿ ಬಂದರುಗಳಲ್ಲಿ ಈ ಗುಣಮಟ್ಟ ಪರೀಕ್ಷೆಗಳು ನಡೆಯಲಿವೆ. ಆಮದಾಗುವ ಉತ್ಪನ್ನಗಳನ್ನು ಆಯ್ದ ಸ್ಯಾಂಪಲ್ಗಳನ್ನು ಬ್ಯೂರೊ ಆಫ್ ಇಂಡಿಯಾ ಸ್ಟ್ಯಾಂಡರ್ಡ್ (ಬಿಐಎಸ್) ಪರೀಕ್ಷಿಸಲು ರವಾನಿಸಲಾಗುವುದು.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸರಕುಗಳ ಅಡಿಯಲ್ಲಿ (ಕಡ್ಡಾಯ ನೋಂದಣಿಯ ಅವಶ್ಯಕತೆ ) ಆದೇಶ, 2012, ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್ಟಿ) ಅಧಿಸೂಚನೆಯಲ್ಲಿ ಈ ಕುರಿತು ತಿಳಿಸಿದೆ.
7 ದಿನಗಳೊಳಗೆ ಪರೀಕ್ಷೆ ಮುಗಿಯಲಿದೆ. ಗುಣಮಟ್ಟ ಪರೀಕ್ಷೆ ಸಫಲವಾದರೆ ಕಸ್ಟಮ್ಸ್ ಕ್ಲಿಯರೆನ್ಸ್ ಸಿಗಲಿದೆ. ಇಲ್ಲದಿದ್ದರೆ ಉತ್ಪನ್ನವನ್ನು ಹಿಂತಿರುಗಿಸಲಾಗುವುದು ಅಥವಾ ನಾಶಪಡಿಸಲಾಗುವುದು.
ಚೀನಾದಿಂದ ಕಳಪೆ ದರ್ಜೆಯ ಎಲ್ ಇಡಿ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗೆ ಭಾರಿ ಪ್ರಮಾಣದಲ್ಲಿ ಆಮದಾಗುತ್ತಿವೆ. ಒಂದು ವೇಳೆ ಭಾರತವು ಅದನ್ನು ತಿರಸ್ಕರಿಸಿದರೆ ಚೀನಾಕ್ಕೆ ಗಣನೀಯ ನಷ್ಟವಾಗಲಿದೆ.
2020-21ರ ಹಣಕಾಸು ವರ್ಷದಲ್ಲಿ ಭಾರತವು ಚೀನಾದಿಂದ 19 ಶತಕೋಟಿಗಿಂತ ಹೆಚ್ಚಿನ ಡಾಲರ್ ಮೌಲ್ಯದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿತು, ದೀಪಗಳು ಮತ್ತು ಬೆಳಕಿನ ಫಿಟ್ಟಿಂಗ್ಗಳು 436 ಮಿಲಿಯನ್ ಡಾಲರ್ನಷ್ಟು ಮೌಲ್ಯದ್ದಾಗಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications