ಇನ್ನು, ಜಿ ಮೇಲ್ ನಲ್ಲೂ ನಗದು ವರ್ಗಾವಣೆ ಸುಲಭ ಸಾಧ್ಯ!
ಇತ್ತೀಚೆಗೆ, ಆ್ಯಂಡ್ರಾಯ್ಡ್ ಆ್ಯಪ್ ಗಳಲ್ಲಿ ನಗದು ವರ್ಗಾವಣೆಯು ಹೆಚ್ಚು ಪ್ರಚಲಿತಕ್ಕೆ ಬಂದ ಹಿನ್ನೆಲೆಯಲ್ಲಿ ಜಿ ಮೇಲ್ ಕಂಪನಿಯೂ ಆ್ಯಂಡ್ರಾಯ್ಡ್ ಫೋನುಗಳ ಮೂಲಕ ನಗದು ವರ್ಗಾವಣೆಗೆ ಅವಕಾಶ ನೀಡಿವೆ.
ನವದೆಹಲಿ, ಮಾರ್ಚ್ 15: ಬಹುತೇಕರು ಮಿಂಚಂಚೆಗಾಗಿ ಬಳಸುವ ಜಿ ಮೇಲ್ ಮುಖೇನ ಶೀಘ್ರದಲ್ಲೇ ನಗದು ವರ್ಗಾವಣೆಯನ್ನು ಸುಲಭವಾಗಿ ಮಾಡುವ ಸೌಲಭ್ಯ ಸಿಗಲಿದೆ. ಆರಂಭದಲ್ಲಿ ಈ ಮಾದರಿಯ ನಗದು ವರ್ಗಾವಣೆಯು ಜಿ ಮೇಲ್ ಆ್ಯಂಡ್ರಾಯ್ಡ್ ಆ್ಯಪ್ ನಲ್ಲಿ ಮಾತ್ರ ಲಭ್ಯವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಅಂದಹಾಗೆ, ಇದು ವ್ಯಾಲ್ಯೂ ಆ್ಯಡೆಡ್ ಸರ್ವೀಸ್ ಆಗಿರಲಿದ್ದು, ಇದಕ್ಕಾಗಿಯೇ ವಿಶೇಷ ಆ್ಯಪ್ ಬಿಡುಗಡೆಗೊಳಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೆ, ಹೊಸ ಆ್ಯಪ್ ಮೂಲಕ ಹಣ ವರ್ಗಾವಣೆಯು ಸಾಮಾನ್ಯವಾಗಿ ನಾವು ಇ ಮೇಲ್ ಕಳುಹಿಸುವಾಗ ಫೈಲ್ ಅಟ್ಯಾಚ್ ಮಾಡಿ ಕಳುಹಿಸುವಷ್ಟು ಸುಲಭವಾಗಿಯೇ ಹಣ ಕಳಿಸಬಹುದು ಅಥವಾ ಸ್ವೀಕರಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಈ ಆ್ಯಪ್ ಅನ್ನು ಮೊಬೈಲ್ ಗಳಲ್ಲಿ ಅಥವಾ ಟ್ಯಾಬ್ ಗಳಲ್ಲಿ ಸಂಸ್ಥಾಪಿಸಿಕೊಂಡ ನಂತರ, ಆ್ಯಪ್ ತೆರೆಯಬೇಕು. ಆನಂತರ, ಅಲ್ಲಿ ಮೇಲೆ ಬರುವ ಆಯ್ಕೆಗಳಲ್ಲಿ ನಮ್ಮ ದೇಶದ ಕರೆನ್ಸಿ ಮಾದರಿಯ ಚಿಹ್ನೆಯನ್ನು (ಉದಾಹರಣೆಗೆ, ರುಪಾಯಿ, ಡಾಲರ್ ಇನ್ನಿತರೆ) ಆರಿಸಿ, ಆನಂತರ ನಾವು ಯಾರಿಗೆ ಹಣ ಕಳುಹಿಸಬೇಕೋ ಅವರ ಜಿಮೇಲ್ ಮಿಂಚಂಚೆ ವಿಳಾಸ ನಮೂದಿಸಿ, ಈ ಹಣದ ವ್ಯವಹಾರದ ಉದ್ದೇಶದ ಸಂಕ್ತಿಪ್ತ ವಿವರಣೆ ಹಾಕಿ, ಆನಂತರ ಕಳಿಸು (ಸೆಂಡ್ ಆಪ್ಷನ್) ಆಯ್ಕೆಯನ್ನು ಒತ್ತಿದರೆ ಹಣ ವರ್ಗಾವಣೆಯಾಗುತ್ತದೆ.
ಅಂದರೆ, ಹಣ ಕಳಿಸುವವರು ಮೊದಲೇ ಗೂಗಲ್ ವ್ಯಾಲೆಟ್ ನಲ್ಲಿ ಹಣ ತುಂಬಿರಬೇಕಿರುತ್ತದೆ.
ಮೇಲೆ ಹೇಳಿದಂತೆಯೇ, ಹಣ ಕಳಿಸುವುದರ ಜತೆಗೆ ಹಣ ಸ್ವೀಕರಿಸಲು, ಸಾಮಾನ್ಯವಾಗಿ ನಾವು ಮೇಲ್ ಕಂಪೋಸ್ ಮಾಡಿದಂತೆಯೇ ಮಿಂಚಂಚೆಯೊಂದನ್ನು ಕಂಪೋಸ್ ಮಾಡಿ ಸಂಬಂಧಿಗಳಿಗೆ, ಸ್ನೇಹಿತರಿಗೆ ಇಂತಿಷ್ಟು ಹಣಬೇಕೆಂದು ಮನವಿ ಮಾಡಿಕೊಳ್ಳಬಹುದು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications