ಇನ್ನು, ಜಿ ಮೇಲ್ ನಲ್ಲೂ ನಗದು ವರ್ಗಾವಣೆ ಸುಲಭ ಸಾಧ್ಯ!
ಇತ್ತೀಚೆಗೆ, ಆ್ಯಂಡ್ರಾಯ್ಡ್ ಆ್ಯಪ್ ಗಳಲ್ಲಿ ನಗದು ವರ್ಗಾವಣೆಯು ಹೆಚ್ಚು ಪ್ರಚಲಿತಕ್ಕೆ ಬಂದ ಹಿನ್ನೆಲೆಯಲ್ಲಿ ಜಿ ಮೇಲ್ ಕಂಪನಿಯೂ ಆ್ಯಂಡ್ರಾಯ್ಡ್ ಫೋನುಗಳ ಮೂಲಕ ನಗದು ವರ್ಗಾವಣೆಗೆ ಅವಕಾಶ ನೀಡಿವೆ.
ನವದೆಹಲಿ, ಮಾರ್ಚ್ 15: ಬಹುತೇಕರು ಮಿಂಚಂಚೆಗಾಗಿ ಬಳಸುವ ಜಿ ಮೇಲ್ ಮುಖೇನ ಶೀಘ್ರದಲ್ಲೇ ನಗದು ವರ್ಗಾವಣೆಯನ್ನು ಸುಲಭವಾಗಿ ಮಾಡುವ ಸೌಲಭ್ಯ ಸಿಗಲಿದೆ. ಆರಂಭದಲ್ಲಿ ಈ ಮಾದರಿಯ ನಗದು ವರ್ಗಾವಣೆಯು ಜಿ ಮೇಲ್ ಆ್ಯಂಡ್ರಾಯ್ಡ್ ಆ್ಯಪ್ ನಲ್ಲಿ ಮಾತ್ರ ಲಭ್ಯವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಅಂದಹಾಗೆ, ಇದು ವ್ಯಾಲ್ಯೂ ಆ್ಯಡೆಡ್ ಸರ್ವೀಸ್ ಆಗಿರಲಿದ್ದು, ಇದಕ್ಕಾಗಿಯೇ ವಿಶೇಷ ಆ್ಯಪ್ ಬಿಡುಗಡೆಗೊಳಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೆ, ಹೊಸ ಆ್ಯಪ್ ಮೂಲಕ ಹಣ ವರ್ಗಾವಣೆಯು ಸಾಮಾನ್ಯವಾಗಿ ನಾವು ಇ ಮೇಲ್ ಕಳುಹಿಸುವಾಗ ಫೈಲ್ ಅಟ್ಯಾಚ್ ಮಾಡಿ ಕಳುಹಿಸುವಷ್ಟು ಸುಲಭವಾಗಿಯೇ ಹಣ ಕಳಿಸಬಹುದು ಅಥವಾ ಸ್ವೀಕರಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಈ ಆ್ಯಪ್ ಅನ್ನು ಮೊಬೈಲ್ ಗಳಲ್ಲಿ ಅಥವಾ ಟ್ಯಾಬ್ ಗಳಲ್ಲಿ ಸಂಸ್ಥಾಪಿಸಿಕೊಂಡ ನಂತರ, ಆ್ಯಪ್ ತೆರೆಯಬೇಕು. ಆನಂತರ, ಅಲ್ಲಿ ಮೇಲೆ ಬರುವ ಆಯ್ಕೆಗಳಲ್ಲಿ ನಮ್ಮ ದೇಶದ ಕರೆನ್ಸಿ ಮಾದರಿಯ ಚಿಹ್ನೆಯನ್ನು (ಉದಾಹರಣೆಗೆ, ರುಪಾಯಿ, ಡಾಲರ್ ಇನ್ನಿತರೆ) ಆರಿಸಿ, ಆನಂತರ ನಾವು ಯಾರಿಗೆ ಹಣ ಕಳುಹಿಸಬೇಕೋ ಅವರ ಜಿಮೇಲ್ ಮಿಂಚಂಚೆ ವಿಳಾಸ ನಮೂದಿಸಿ, ಈ ಹಣದ ವ್ಯವಹಾರದ ಉದ್ದೇಶದ ಸಂಕ್ತಿಪ್ತ ವಿವರಣೆ ಹಾಕಿ, ಆನಂತರ ಕಳಿಸು (ಸೆಂಡ್ ಆಪ್ಷನ್) ಆಯ್ಕೆಯನ್ನು ಒತ್ತಿದರೆ ಹಣ ವರ್ಗಾವಣೆಯಾಗುತ್ತದೆ.
ಅಂದರೆ, ಹಣ ಕಳಿಸುವವರು ಮೊದಲೇ ಗೂಗಲ್ ವ್ಯಾಲೆಟ್ ನಲ್ಲಿ ಹಣ ತುಂಬಿರಬೇಕಿರುತ್ತದೆ.
ಮೇಲೆ ಹೇಳಿದಂತೆಯೇ, ಹಣ ಕಳಿಸುವುದರ ಜತೆಗೆ ಹಣ ಸ್ವೀಕರಿಸಲು, ಸಾಮಾನ್ಯವಾಗಿ ನಾವು ಮೇಲ್ ಕಂಪೋಸ್ ಮಾಡಿದಂತೆಯೇ ಮಿಂಚಂಚೆಯೊಂದನ್ನು ಕಂಪೋಸ್ ಮಾಡಿ ಸಂಬಂಧಿಗಳಿಗೆ, ಸ್ನೇಹಿತರಿಗೆ ಇಂತಿಷ್ಟು ಹಣಬೇಕೆಂದು ಮನವಿ ಮಾಡಿಕೊಳ್ಳಬಹುದು.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications