ಮೇಡ್ ಇನ್ ಇಂಡಿಯಾ ಫ್ರೀಡಂ 251ಗೆ ಕಾಪಿರೈಟ್ ಪ್ರಾಬ್ಲಂ!
ನವದೆಹಲಿ, ಫೆ.19: ನೋಯ್ಡಾ ಮೂಲದ ಮೊಬೈಲ್ ಹ್ಯಾಂಡ್ ಸೆಟ್ ಉತ್ಪಾದನಾ ಸಂಸ್ಥೆ ರಿಂಗಿಂಗ್ ಬೆಲ್ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಪರಿಚಯಿಸಲು ಮುಂದಾಗಿದ್ದು ಎಲ್ಲರಿಗೂ ತಿಳಿದ ವಿಷಯ. ಈಗ ಸ್ಮಾರ್ಟ್ ಫೋನ್ ವಿವಾದದ ಕೇಂದ್ರ ಬಿಂದುವಾಗಿದೆ.
ಬುಧವಾರ (ಫೆಬ್ರವರಿ 16) ದಿಂದ ಕೇವಲ 251 ರು ಬೆಲೆಗೆ ಸ್ಮಾರ್ಟ್ ಫೋನ್ ಖರೀದಿಸಲು ಮುಂದಾಗಿದ್ದ ಗ್ರಾಹಕರು ಈಗ ಬೆಚ್ಚಿಬೀಳುವ ಸತ್ಯಗಳು ಹೊರಬರುತ್ತಿದೆ. ಹಂಗೂ ಹಿಂಗೂ ಬುಕ್ಕಿಂಗ್ ಮಾಡಿಕೊಂಡ ಗ್ರಾಹಕರಿಗೆ ಫೋನ್ ಯಾವಾಗ ಕೈ ಸೇರುವುದೋ ಎಂಬ ಆತಂಕ ಎದುರಾಗಿದೆ. [ಇ ಆಡಳಿತ ಸ್ನೇಹಿ ಭಾರತ್ ಫೋನ್ ನೋಡಿ]
ಜೊತೆಗೆ ರಿಂಗಿಂಗ್ ಬೆಲ್ ಕಂಪನಿ ಕಾಪಿರೈಟ್ ಉಲ್ಲಂಘನೆ ಆರೋಪವನ್ನು ಹೊತ್ತುಕೊಂಡಿದೆ. ಆಪಲ್ ಐಫೋನ್ ವಿನ್ಯಾಸವನ್ನು ಕದ್ದು ಅತಿಕಡಿಮೆಯ ಬೆಲೆಯ ಫೋನ್ ವಿನ್ಯಾಸಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
#Freedom251 Telecom Ministry called clarification for marketing without BIS certifications & also asked UP Govt to check Bonafide of Company
— Kirit Somaiya (@KiritSomaiya) February 18, 2016
ಇದರ ಜೊತೆಗೆ ಬಿಐಎಸ್ ಸರ್ಟಿಫಿಕೇಷನ್ ಕೂಡಾ ಪಡೆದುಕೊಂಡಿಲ್ಲ. ಈ ಬಗ್ಗೆ ಉತ್ತರಪ್ರದೇಶ ಸರ್ಕಾರ ತನಿಖೆ ನಡೆಸಲಿ ಎಂದು ಬಿಜೆಪಿ ಸಂಸದ ಕಿರೀಟ್ ಸೋಮಯ್ಯ ಅವರು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಮೊಬೈಲ್ ಫೋನ್ ಕ್ಷೇತ್ರಕ್ಕೆ ಕಾಲಿರಿಸಿದ ಸಂಸ್ಥೆ
ಸಂಸ್ಥೆ 2,999 ರು ಬೆಲೆಗೆ ಸ್ಮಾರ್ಟ್ 101 ಎಂಬ ಮೊಬೈಲ್ ಪರಿಚಯಿಸಿತು. ನಂತರ ಮಾಸ್ಟರ್ ಹಾಗೂ 4ಯು ಮೊಬೈಲ್ ಗಳನ್ನು 999 ರು ಹಾಗೂ 799 ರು ಗೆ ಮಾರುಕಟ್ಟೆಗೆ ಪರಿಚಯಿಸಿತ್ತು. 5,600 ಎಂಎಎಚ್ ಬ್ಯಾಟರಿ ಸ್ಯಾಮರ್ಥವುಳ್ಳ ಕಿವಿ ಮೊಬೈಲ್ 399 ರು ಗೆ ಪರಿಚಯಿಸಿದೆ. ಈಗ 500 ರು ಗೆ ಮೊಬೈಲ್ ನೀಡಲು ಮುಂದಾಗಿದ್ದ ಕಂಪನಿ 251 ರು ಗೆ ಸ್ಮಾರ್ಟ್ ಫೋನ್ ಘೋಷಿಸಿ ಸಮೂಹಸನ್ನಿ ಸೃಷ್ಟಿಸಿತು.

ಮೊಬೈಲ್ ನ ಅಸಲಿ ಬೆಲೆ ಏನು?
ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಹಾಗೂ ಡಿಜಿಟಲ್ ಇಂಡಿಯಾ ಯೋಜನೆಗೆ ಅನುಗುಣವಾಗಿ ಮೊಬೈಲ್ ಫೋನ್ ರೂಪಿಸಲಾಗುವುದು ರಿಂಗಿಂಗ್ ಬೆಲ್ ಪ್ರೈ ಲಿಮಿಟೆಡ್ ಹೇಳಿದೆ. ಫ್ರೀಡಂ 251ನ ಅಸಲಿ ಬೆಲೆ 2,500 ರು ಆದರೆ, ವಿಭಿನ್ನ ಮಾರ್ಕೆಟಿಂಗ್ ಮೂಲಕ ಇ ಕಾಮರ್ಸ್ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸುವುದು ನಮ್ಮ ಉದ್ದೇಶ ಹೀಗಾಗಿ ಕಡಿಮೆ ಬೆಲೆಗೆ ನೀಡುತ್ತಿದ್ದೇವೆ ಎಂದು ರಿಂಗಿಂಗ್ ಬೆಲ್ ನ ಅಧ್ಯಕ್ಷ ಅಶೋಕ್ ಛಡ್ಡಾ ಹೇಳಿದ್ದಾರೆ.
|
ಫ್ರೀಡಂ ಫೋನ್ ಬಗ್ಗೆ ಟ್ರಾಯ್ ಗೆ ಸೂಚನೆ
ಫ್ರೀಡಂ 251 ಮೊಬೈಲ್ ಫೋನ್ ನೀಡಿರುವ ಆಫರ್ ಬಗ್ಗೆ ಟೆಲಿಕಾಂ ನಿಯಂತ್ರಕ ಟ್ರಾಯ್ ಕೂಡಲೇ ತನಿಖೆ ನಡೆಸಲಿ ಎಂದು ಸಂಸದ ಕಿರೀಟ್ ಸೊಮಯ್ಯ ಕೇಳಿಕೊಂಡಿದ್ದಾರೆ.
|
ಈಗ ಸ್ಮಾರ್ಟ್ ಫೋನ್ ವಿವಾದದ ಕೇಂದ್ರ ಬಿಂದುವಾಗಿದೆ
ಮೇಡ್ ಇನ್ ಇಂಡಿಯಾ ಫ್ರೀಡಂ 251ಗೆ ಕಾಪಿರೈಟ್ ಪ್ರಾಬ್ಲಂ ಎದುರಾಗಿದೆ. ಜೊತೆಗೆ ಬಿಐಎಸ್ ಸರ್ಟಿಫಿಕೇಷನ್ ಇಲ್ಲ ಎಂಬ ಆರೋಪದ ಬಗ್ಗೆ ಗಮನ ಹರಿಸಿ
|
ಗ್ರಾಹಕರೇ ಎಚ್ಚರ ಸಮೂಹ ಸನ್ನಿಗೆ ಒಳಗಾಗಬೇಡಿ
ಗ್ರಾಹಕರೇ ಎಚ್ಚರ ಸಮೂಹ ಸನ್ನಿಗೆ ಒಳಗಾಗಬೇಡಿ ಎಲ್ಲವೂ ಸರಿ ಹೋಗುವ ತನಕ ಕಾಯಿರಿ. ಉತ್ತರಪ್ರದೇಶ ಸರ್ಕಾರ ಈ ಬಗ್ಗೆ ತನಿಖೆ ನಡೆಸಲಿ ಎಂದು ಸಂಸದ ಕಿರೀಟ್ ಕೇಳಿಕೊಂಡಿದ್ದಾರೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ












Click it and Unblock the Notifications