ಇ ಕಾಮರ್ಸ್ ಕಂಪೆನಿಗಳು ನಷ್ಟದಲ್ಲಿ ನಡೆಯುತ್ತಿವೆಯೇ?
ಬೆಂಗಳೂರು, ಆಗಸ್ಟ್ 22: ಫ್ಲಿಪ್ ಕಾರ್ಟ್ ನಲ್ಲಿ ಪರ್ಫಾಮೆನ್ಸ್ ಚೆನ್ನಾಗಿಲ್ಲ ಎಂದು ನೌಕರರನ್ನಷ್ಟೇ ಅಲ್ಲ, ಸಿಇಒ ಸ್ಥಾನದಿಂದ ಸಚಿನ್ ಬನ್ಸಾಲ್ ಅವರನ್ನೇ ತೆಗೆದುಹಾಕಲಾಗಿದೆ. ಇದನ್ನು ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಹಾಗೂ ಸಿಇಒ ಸಚಿನ್ ಖಚಿತಪಡಿಸಿದ್ದಾರೆ. ಪರ್ಫಾಮೆನ್ಸ್ ತೋರದ ಫ್ಲಿಪ್ ಕಾರ್ಟ್ ನ 300 ನೌಕರರನ್ನು ಕೆಲಸದಿಂದ ತೆಗೆಯಲಾಗುವುದು ಎಂದು ಕಂಪೆನಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಕಂಪೆನಿ ಕಚೇರಿಯಲ್ಲಿ ಸಚಿನ್ ಆಡಿರುವ ಮಾತುಗಳು ನೌಕರರಲ್ಲಿ ಆತಂಕಕ್ಕೆ ಕಾರಣವಾಗಿದೆ.
'ಆಗಾಗ ಈ ರೀತಿಯ ಟೌನ್ ಹಾಲ್ ಗಳು ನಡೆಯುತ್ತವೆ. ನಮ್ಮಲ್ಲಿರುವ ಮುಕ್ತ ಸಂಸ್ಕೃತಿಗೆ ಇದೇ ಆಧಾರ. ಇಲ್ಲಿ ಯಾರು ಬೇಕಾದರೂ ಪ್ರಶ್ನೆಗಳನ್ನು ಮಾಡಬಹುದು. ಸದ್ಯಕ್ಕೆ ಇರುವ ಕಂಪೆನಿ ನಿಯಮಗಳು ಹಾಗೂ ಇಲ್ಲಿ ಮುಂಚೂಣಿಯಲ್ಲಿರುವವರ ನಿರ್ಧಾರಗಳ ಬಗ್ಗೆಯೂ ಕೇಳಬಹುದು' ಎಂದು ಸಚಿನ್ ತಿಳಿಸಿದ್ದಾರೆ.[ಭಾರತದ ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಸಿಇಒ ಬದಲು!]

ಜನವರಿಯಲ್ಲಿ ಸಚಿನ್ ಬನ್ಸಾಲ್ ಅವರಿಂದ ತೆರವಾದ ಸಿಇಒ ಸ್ಥಾನಕ್ಕೆ ಸದ್ಯಕ್ಕೆ ಚೀಫ್ ಆಪರೇಟಿಂಗ್ ಆಫೀಸರ್ ಆಗಿದ್ದ ಬಿನ್ನಿ ಬನ್ಸಾಲ್ ಬಂದಿದ್ದಾರೆ. ಅಮೆಜಾನ್ ನ ಮಾಜಿ ಉದ್ಯೋಗಿಯಾದ ಬಿನ್ನಿ ಬನ್ಸಾಲ್, ಸಚಿನ್ ಅವರ ಸಂಬಂಧಿಕರೇನಲ್ಲ. ಭಾರತದ ಅತಿ ದೊಡ್ಡ ಇ ಕಾಮರ್ಸ್ ಕಂಪೆನಿಯಾದ ಫ್ಲಿಪ್ ಕಾರ್ಟ್ ಆರಂಭವಾಗಿದ್ದು 2007ರಲ್ಲಿ. ಕಂಪೆನಿಯು ಮೊಬೈಲ್ ಫೋನ್ ನಿಂದ ಸೂಟ್ ಕೇಸ್ ವರೆಗೆ, ಕಾಸ್ಮೆಟಿಕ್ಸ್, ಪುಸ್ತಕ ಇನ್ನೂ ಅನೇಕ ವಸ್ತುಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡುತ್ತದೆ.
ಕಳೆದ ವರ್ಷ 15 ಬಿಲಿಯನ್ ಡಾಲರ್ ನಷ್ಟಿದ್ದ ಫ್ಲಿಪ್ ಕಾರ್ಟ್ ಕಂಪೆನಿಯ ಮೌಲ್ಯ ಅಮೆಜಾನ್, ಸ್ನಾಪ್ ಡೀಲ್ ಕಂಪೆನಿಗಳ ಸ್ಪರ್ಧೆಯಿಂದ ಈ ವರ್ಷದ ಆರಂಭದಲ್ಲಿ 11 ಬಿಲಿಯನ್ ಡಾಲರ್ ಗೆ ಕುಸಿತ ಕಂಡಿತ್ತು. ಈ ಮಧ್ಯೆ ಜಬಾಂಗ್ ಫ್ಯಾಷನ್ ವೆಬ್ ಸೈಟ್ ಅನ್ನು 70 ಮಿಲಿಯನ್ ಡಾಲರ್ ಗೆ ಖರೀದಿಸುವುದಾಗಿ ಕಳೆದ ತಿಂಗಳು, ಫ್ಲಿಪ್ ಕಾರ್ಟ್ ಘೋಷಿಸಿತ್ತು.[ಫ್ಲಿಪ್ ಕಾರ್ಟ್ ಸಂಸ್ಥೆಗೆ ಹಿನ್ನಡೆ, ಹಿರಿಯ ಅಧಿಕಾರಿ ರಾಜೀನಾಮೆ!]
ಆಂತರಿಕ ಮೂಲಗಳ ಪ್ರಕಾರ, ಗ್ರಾಹಕರನ್ನು ಸೆಳೆಯುವ ಕಾರಣಕ್ಕೆ ಘೋಷಿಸಿದ ರಿಯಾಯ್ತಿಗಳು ಫ್ಲಿಪ್ ಕಾರ್ಟ್, ಸ್ನಾಪ್ ಡೀಲ್ ಹಾಗೂ ಅಮೆಜಾನ್ ಕಂಪೆನಿಗಳ ನಷ್ಟ ಪ್ರಮಾಣವನ್ನು ಹೆಚ್ಚಿಸುತ್ತಿವೆ. ಹಣಕಾಸು ನೆರವು ಕೂಡ ದೊರೆಯುತ್ತಿಲ್ಲ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications