10 ಸಾವಿರ ಮಂದಿ ಸ್ಥಳೀಯರಿಗೆ ಕಾಂಗ್ನಿಜೆಂಟ್ ಗಾಳ
ನ್ಯೂಜೆರ್ಸಿ, ಡಿ.4: ಅಮೆರಿಕದಲ್ಲಿ ಕಾಗ್ನಿಜೆಂಟ್ ಆದಾಯ ಹಾಗೂ ಕಾರ್ಯ ನಿರ್ವಹಣೆ ವೆಚ್ಚ ಆಧಾರಿಸಿ ಜೆಪಿ ಮಾರ್ಗನ್ ಕಳೆದ ಜೂನ್ ನಲ್ಲಿ ನೀಡಿದ್ದ ವರದಿ ಪರಿಣಾಮ ಈಗ ಕಾಣಿಸಿಕೊಳ್ಳುತ್ತಿದೆ. ನ್ಯೂಜೆರ್ಸಿ ಮೂಲದ ಕಾಂಗ್ನಿಜೆಂಟ್ ಕಂಪನಿ ಯುಎಸ್ ನಲ್ಲಿ 10 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು ಸ್ಥಳೀಯರೇ ಮಾತ್ರ ಆದ್ಯತೆ ನೀಡಲು ನಿರ್ಧರಿಸಿದೆ.
ಅಮೆರಿಕ ವಲಸೆ ನೀತಿಯಿಂದಾಗಿ ಗೂಗಲ್ ಮೀರಿಸಿ ಬೆಳೆಯುತ್ತಿದ್ದ ಕಾಂಗ್ನಿಜೆಂಟ್ ಪ್ರಗತಿಗೆ ಅಡ್ಡಿಯುಂಟಾಗಲಿದೆ ಎಂದು ಜೆಪಿ ಮಾರ್ಗನ್ ಸಂಸ್ಥೆ ಈ ಹಿಂದೆ ಎಚ್ಚರಿಸಿತ್ತು. ಈ ನಿಟ್ಟಿನಲ್ಲಿ ಗಮನ ಹರಿಸಿರುವ ಕಾಂಗ್ನಿಜೆಂಟ್ ಟೆಕ್ನಾಲಜಿ ಸಲ್ಯೂಷನ್ಸ್(ಸಿಟಿಎಸ್) ಮುಂದಿನ ಮೂರು ವರ್ಷಗಳಲ್ಲಿ 10 ಸಾವಿರಕ್ಕೂ ಅಧಿಕ ಫುಲ್ ಟೈಮ್ ಉದ್ಯೋಗಿಗಳನ್ನು ಅಮೆರಿಕದಲ್ಲಿ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.

ಸಾಮಾಜಿಕ ಮಾಧ್ಯಮ, ಮೊಬೈಲ್, ಕ್ಲೌಡ್ ಕಂಪ್ಯೂಟಿಂಗ್, ಅನಾಲಿಟಿಕ್ಸ್ ಮುಂತಾದ ಕ್ಷೇತ್ರದಲ್ಲಿ ಹೊಸ ರೀತಿ ತೊಡಗಿಸಿಕೊಳ್ಳಲು ಕಾಂಗ್ನಿಜೆಂಟ್ ನಿರ್ಧರಿಸಿದೆ. ಸ್ಥಳೀಯ ನೀತಿ ಕಾನೂನಿಗೆ ಅನ್ವಯವಾಗಿ ಕಾರ್ಯನಿರ್ವಹಿಸಬೇಕಾಗಿರುವುದು ಅನಿವಾರ್ಯ. ಬೇಡಿಕೆಗೆ ತಕ್ಕಂತೆ ನೇಮಕಾತಿ ನಡೆಯಲಿದೆ ಎಂದು ಕಾಂಗ್ನಿಜೆಂಟ್ ನ ಅಧ್ಯಕ್ಷ ಗೊರ್ಡನ್ ಕೊಬರ್ನ್ ಹೇಳಿದ್ದಾರೆ.
ಆದರೆ, ಈ ನಡುವೆ ಭಾರತದಲ್ಲಿ ತನ್ನ ಅಸ್ತಿತ್ವದ ಪ್ರಗತಿಯನ್ನು ಉಳಿಸಿಕೊಂಡಿರುವ ಸಿಟಿಎಸ್, ಮುಂದಿನ ಮೂರು ವರ್ಷಗಳಲ್ಲಿ ಸುಮಾರು 150,000 ಡಾಲರ್ ಹೂಡಿಕೆ ಮಾಡುತ್ತಿದ್ದು ವಿಶ್ವವಿದ್ಯಾಲಯ ಪ್ರಾಯೋಜಿತ ವಿಜ್ಞಾನ-ತಂತ್ರಜ್ಞಾನ, ಇಂಜಿನಿಯರಿಂಗ್ ಹಾಗೂ ಗಣಿತ(STEM) ವಿಭಾಗಗಳ ಅಭಿವೃದ್ಧಿಗಾಗಿ ಟೆಕ್ಸಾಸ್ ನ ವಿವಿಗಳ ಜತೆ ಜಂಟಿ ಯೋಜನೆ ಹಾಕಿಕೊಂಡಿದೆ.
ಸುಮಾರು ಶೇ 80 ರಷ್ಟು ಆದಾಯ ಅಮೆರಿಕದಲ್ಲೇ ಉತ್ಪನ್ನವಾಗುತ್ತಿದೆ. ಹೀಗಾಗಿ, ವಲಸೆ ನೀತಿ, ಯುಎಸ್ ವಿದೇಶಾಂಗ ನೀತಿ ಬದಲಾವಣೆ ಕಾಗ್ನಿಜೆಂಟ್ ಗೆ ಕಷ್ಟವಾಗಿ ಪರಿಣಮಿಸಿದೆ.
ವಲಸೆ ನೀತಿ: ಸ್ಥಳೀಯರಿಗೆ ಉದ್ಯೋಗ, ಸ್ಥಳೀಯ ಸಂಸ್ಥೆಗಳಿಗೆ ಸಬ್ಸಿಡಿ, ಆಫ್ ಶೋರ್ ಐಟಿ ಸರ್ವೀಸ್ ಸಂಸ್ಥೆಗಳಿಗೆ ಕಡಿವಾಣ, ವೀಸಾ ದರ ಹೆಚ್ಚಳ ಮುಂತಾದ ವಿಷಯಗಳನ್ನು ವಲಸೆ ನೀತಿ ಹೊಂದಿದೆ. ಕ್ಲೈಂಟ್ ಸ್ಥಳಕ್ಕೆ (ಅಮೆರಿಕ) ಭಾರತದಿಂದ ಉದ್ಯೋಗಿಗಳನ್ನು ಸಲೀಸಾಗಿ ಕಳಿಸಲು ಸಾಧ್ಯವಾಗುವುದಿಲ್ಲ. ಸ್ಥಳೀಯರನ್ನೇ ಆಯ್ಕೆ ಮಾಡಬೇಕಾಗುತ್ತದೆ. ಸ್ಥಳೀಯರು ಕಡಿಮೆ ಮೊತ್ತಕ್ಕೆ ದುಡಿಯುವುದಂತೂ ಇಲ್ಲ. ಇದರಿಂದ ಸಂಸ್ಥೆಗಳು ಯೋಜನೆ ಮೇಲೆ ಹಾಕಿದ ಮೊತ್ತ ದುಪ್ಪಟ್ಟಾಗುತ್ತದೆ. ಹೊರಗುತ್ತಿಗೆ ನಂಬಿಕೊಂಡಿರುವ ಭಾರತದ ಪ್ರಮುಖ ಸಂಸ್ಥೆಗಳಿಗೆ ಸರಿಯಾದ ಪಾಠವಾಗಲಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications