ವಿಜಯ ಬ್ಯಾಂಕ್ 21 ದಶಲಕ್ಷ ಗ್ರಾಹಕರಿಗೆ ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿಂಗ್ ಸೇವೆ
ಬೆಂಗಳೂರು, ಅಕ್ಟೋಬರ್ 19: ಆಕ್ಸೆಂಚರ್ ಮತ್ತು ಬ್ಯಾಂಕ್ ಆಫ್ ಬರೋಡಾ ಯಶಸ್ವಿಯಾಗಿ ಹಿಂದಿನ ವಿಜಯ ಬ್ಯಾಂಕ್ ಶಾಖೆಗಳು ಮತ್ತು ಬ್ಯಾಂಕ್ ಆಫ್ ಬರೋಡಾ ಶಾಖೆಗಳ ತಂತ್ರಜ್ಞಾನ ಸಮನ್ವಯನ್ನು ಪೂರ್ಣಗೊಳಿಸಿವೆ. ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ತ್ರಿಮುಖ ವಿಲೀನ ಪ್ರಕ್ರಿಯೆಯ ನಂತರದ ಭಾಗವಾಗಿ ಈ ತಂತ್ರಜ್ಞಾನ ಸಮನ್ವಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಆಕ್ಸೆಂಚರ್ ಇದೀಗ ಹಿಂದಿನ ದೇನಾ ಬ್ಯಾಂಕಿನ ಐಟಿ ವ್ಯವಸ್ಥೆಯನ್ನು ಬ್ಯಾಂಕ್ ಆಫ್ ಬರೋಡಾ ಜತೆ ಜೋಡಿಸಲಿದೆ.
ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಜತೆ 2019ರಲ್ಲಿ ವಿಲೀನವಾದಾಗ ದೇಶದ ಮೂರನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೃಷ್ಟಿಯಾಗಿತ್ತು. ಇದು ಪೂರ್ಣಗೊಂಡ ಬಳಿಕ, ಕ್ರೋಢೀಕೃತ ತಂತ್ರಜ್ಞಾನ ಕಂಪನಿಯಾಗಿ ಆಕ್ಸೆಂಚರ್ ಕಾರ್ಯ ನಿರ್ವಹಿಸುವ ಮೂಲಕ ದೇಶವ್ಯಾಪಿ ಗ್ರಾಹಕ ಸೇವೆಗಳನ್ನು ಮತ್ತು ಸುಮಾರು 9000 ಬ್ಯಾಂಕ್ ಶಾಖೆಗಳು ಹಾಗೂ 12000ಕ್ಕೂ ಅಧಿಕ ಎಟಿಎಂ ಕಾರ್ಯಾಚರಣೆಗಳನ್ನು ಸಮನ್ವಯಗೊಳಿಸುವಲ್ಲಿ ನೆರವಾಗಿತ್ತು.
ಅಗ್ರಗಣ್ಯ ತಂತ್ರಜ್ಞಾನ ಪಾಲುದಾರ ಕಂಪನಿಯಾಗಿ ತನ್ನ ಪಾತ್ರದಲ್ಲಿ ಎಕ್ಸೆಂಚರ್, ಮೂರು ಬ್ಯಾಂಕ್ಗಳ ಐಟಿ ಸಿಸ್ಟಂಗಳನ್ನು ಕ್ರೋಢೀಕರಿಸುವ ನೀಲಿನಕಾಶೆಯನ್ನು ಅಭಿವೃದ್ಧಿಪಡಿಸಿತ್ತು ಹಾಗೂ ಡಾಟಾ ಮೈಗ್ರೇಶನ್, ಅಪ್ಲಿಕೇಶನ್ ಮತ್ತು ಡಾಟಾ ಸೆಂಟರ್ ಕ್ರೋಢೀಕರಣ ಸೇರಿದಂತೆ ತಂತ್ರಜ್ಞಾನ ಸಮನ್ವಯವನ್ನು ಕಾರ್ಯಗತಗೊಳಿಸುವ ಕಾರ್ಯತಂತ್ರದ ಮೇಲ್ವಿಚಾರಣೆಯ ಹೊಣೆ ಹೊತ್ತಿತ್ತು. ಜತೆಗೆ ವಹಿವಾಟು ನಿರಂತರತೆಯನ್ನು ನಿರ್ವಹಿಸುವ ಹೊಣೆಯೂ ಆಕ್ಸೆಂಚರ್ ನದ್ದಾಗಿತ್ತು.

ವಿಜಯ ಬ್ಯಾಂಕ್ ವಲಸೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ ವಿಜಯ ಬ್ಯಾಂಕ್ನ 1900ಕ್ಕೂ ಅಧಿಕ ಶಾಖೆಗಳ ಸುಮಾರು 21 ದಶಲಕ್ಷ ಗ್ರಾಹಕರು ಇದೀಗ ಸುಲಲಿತವಾಗಿ ಬ್ಯಾಂಕ್ ಆಫ್ ಬರೋಡಾಗೆ ವಲಸೆ ಬಂದಂತಾಗಿದೆ. ಈ ವಲಸೆ ಪ್ರಕ್ರಿಯೆಯನ್ನು ದೂರಸಂವೇದಿ ವಿಧಾನದ ಮೂಲಕ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಪೂರ್ಣಗೊಳಿಸಲಾಗಿದ್ದು, ವಹಿವಾಟು ನಿರಂತರತೆ ಮೇಲೆ ಯಾವುದೇ ಪರಿಣಾಮವಾಗಿಲ್ಲ.
ಈ ಬಗ್ಗೆ ವಿವರ ನೀಡಿದ ಬ್ಯಾಂಕ್ ಆಫ್ ಬರೋಡಾದ ಮುಖ್ಯ ತಂತ್ರಜ್ಞಾನ ಅಧಿಕಾರಿ ಶರದ್ ಸಕ್ಸೇನಾ, "ನಮ್ಮ ತಂತ್ರಜ್ಞಾನ ಸಮನ್ವಯದ ಮುಖ್ಯ ಗುರಿಯೆಂದರೆ, ವಿಲೀನಗೊಂಡ ಬ್ಯಾಂಕ್ಗಳ ಎಲ್ಲ ಗ್ರಾಹಕರಿಗೆ ಮುಂದಿನ ಪೀಳಿಗೆಯ ಬ್ಯಾಂಕಿಂಗ್ ಅನುಭವಕ್ಕೆ ದಾರಿ ಮಾಡಿಕೊಡುವುದು ಹಾಗೂ ಈ ಪ್ರಕ್ರಿಯೆಯಲ್ಲಿ ಗ್ರಾಹಕ ಸೇವೆಗಳಿಗೆ ಯಾವುದೇ ಅಡೆತಡೆಗಳು ಆಗದಂತೆ ಕ್ರಮ ಕೈಗೊಳ್ಳುವುದಾಗಿತ್ತು. ಹಿಂದಿನ ವಿಜಯ ಬ್ಯಾಂಕಿನ ತಂತ್ರಜ್ಞಾನ ಮೂಲಸೌಕರ್ಯವನ್ನು ಬ್ಯಾಂಕ್ ಆಫ್ ಬರೋಡಾ ತಂತ್ರಜ್ಞಾನದ ಜತೆ ಸಮನ್ವಯಗೊಳಿಸುವಲ್ಲಿ ಆಕ್ಸೆಂಚರ್ ಪಾತ್ರ ಮಹತ್ವದ್ದಾಗಿದ್ದು, ಈ ವರ್ಗಾವಣೆ ಪ್ರಕ್ರಿಯೆ ಸುಲಲಿತವಾಗಿ ಹಾಗೂ ಸುಗಮವಾಗಿ ನಡೆಯುವಂತೆ ಮಾಡಿದೆ ಹಾಗೂ ಈ ವರ್ಗಾಂತರ ಅವಧಿಯಲ್ಲಿ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಈ ಸಮನ್ವಯಿತ ತಂತ್ರಜ್ಞಾನವು ಹಿಂದಿನ ವಿಜಯ ಬ್ಯಾಂಕ್ ಗ್ರಾಹಕರಿಗೆ ಬ್ಯಾಂಕ್ ಆಫ್ ಬರೋಡಾದ ಸಮಗ್ರ ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡಲಿದ್ದು, ಇದರ ಜತೆಗೆ ಮುಂದಿನ ನೋಟಿಸ್ ನೀಡುವವರೆಗೆ ತಮ್ಮ ಹಾಲಿ ಪಾವತಿ ಸಾಧನಗಳನ್ನು ಬಳಸಿಕೊಳ್ಳಲು ಅವಕಾಶ ಇದೆ" ಎಂದು ಹೇಳಿದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications