ಜೀಯೋಗೆ ಸಡ್ಡು ಹೊಡೆಯಲು ಹೊರಟಿದೆ ಬಿಎಸ್ಎನ್ಎಲ್, ಇಲ್ಲಿದೆ ಪ್ಲಾನ್
ಸರಕಾರಿ ಪ್ರಾಯೋಜಿತ ಬಿಎಸ್ಎನ್ಎಲ್ ಕೂಡಾ ಡೇಟಾ ಸಮರಕ್ಕೆ ದಾಗುಂಡಿ ಇಟ್ಟಿದೆ. ದಿನಕ್ಕೆ 2 ಜಿಬಿ ಡೇಟಾ ನೀಡುವುದಾಗಿ ಹೇಳಿರುವ ಬಿಎಸ್ಎನ್ಎಲ್, ರಿಲಾಯನ್ಸ್ ಜಿಯೋಗೆ ಸಡ್ಡು ಹೊಡೆಯಲು ಮುಂದಾಗಿದೆ.
ಬೆಂಗಳೂರು, ಮಾರ್ಚ್ 16: ಸರಕಾರಿ ಪ್ರಾಯೋಜಿತ ಬಿಎಸ್ಎನ್ಎಲ್ ಕೂಡಾ ಡೇಟಾ ಸಮರಕ್ಕೆ ದಾಗುಂಡಿ ಇಟ್ಟಿದೆ. ದಿನಕ್ಕೆ 2 ಜಿಬಿ ಡೇಟಾ ನೀಡುವುದಾಗಿ ಹೇಳಿರುವ ಬಿಎಸ್ಎನ್ಎಲ್, ರಿಲಾಯನ್ಸ್ ಜಿಯೋಗೆ ಸಡ್ಡು ಹೊಡೆಯಲು ಮುಂದಾಗಿದೆ.
ಈ ಹಿಂದೆ 339ರ ಪ್ಲಾನಿಗೆ ಬಿಎಸ್ಎನ್ಎಲ್ ಅನಿಯಮಿತ ಕರೆ ಮತ್ತು ಕೇವಲ 300 ಎಂಬಿಗಳ ಡೇಟಾ ನೀಡುವುದಾಗ ಹೇಳಿತ್ತು. ನಂತರ ಅದೇ ಹಳೇ ಪ್ಲಾನನ್ನು ಮತ್ತೆ ಪರಿಷ್ಕರಣೆ ಮಾಡಿ ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಕರೆಗಳು ಮತ್ತು 28 ದಿನಗಳ ಕಾಲ ದಿನಕ್ಕೆ 1 ಜಿಬಿ ಡೇಟಾ ನೀಡುವುದಾಗಿ ಹೇಳಿತ್ತು.[ಮತ್ತೆ ಮುಂದುವರಿಯುತ್ತೆ ರಿಲಾಯನ್ಸ್ ಜಿಯೋ ಉಚಿತ ಕೊಡುಗೆ!]

ಇದೀಗ ಮತ್ತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಇದೇ ಪ್ಲಾನಿಗೆ ದಿನಕ್ಕೆ 2 ಜಿಬಿ ಡೇಟಾ ನೀಡಲಿದೆ ಎಂದು ವರದಿಗಳು ಹೇಳುತ್ತಿವೆ. ಈ ಮೂಲಕ ರಿಲಯನ್ಸ್ ಗಿಂತಲು ಹೆಚ್ಚು ಡೇಟಾ ನೀಡುವುದಾಗಿ ಬಿಎಸ್ಎನ್ಎಲ್ ಹೇಳಿದ್ದು ಪ್ರತಿಸ್ಪರ್ಧಿಗೆ ಸಡ್ಡು ಹೊಡೆಯಲು ಹೊರಟಿದೆ.
ಆದರೆ ಒಂದು ಕಂಡೀಷನ್ ; ಬಿಎಸ್ಎನ್ಎಲ್ ನಿಂದ ಬಿಎಸ್ಎನ್ಎಲ್ ಕರೆಗಳು ಸಂಪೂರ್ಣ ಉಚಿತವಾಗಿರುತ್ತವೆ. ಆದರೆ ಬೇರೆ ನೆಟ್ವರ್ಕಿಗೆ ದಿನಕ್ಕೆ 25 ನಿಮಿಷಗಳ ಉಚಿತ ಕರೆಗಳು ಮಾತ್ರ ಇರುತ್ತವೆ. 25 ನಿಮಿಷಗಳ ನಂತರ ಪ್ರತಿನಿಮಿಷಕ್ಕೆ 25 ಪೈಸೆ ಕರೆ ದರವಿರಲಿದೆ.[ಗೂಗಲ್ ಜತೆಗೆ ಕೈ ಜೋಡಿಸಲಿದೆ ರಿಲಯನ್ಸ್ ಜಿಯೊ]
ಮಾರ್ಚ್ 31ರ ಮೊದಲು ರೀಚಾರ್ಚ್ ಮಾಡಿದರೆ ಮುಂದಿನ ಒಂದು ವರ್ಷ ದಿನಕ್ಕೆ 1 ಜಿಬಿ ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯ ನೀಡುವುದಾಗಿ ಬಿಎಸ್ಎನ್ಎಲ್ ಹೇಳಿದೆ. ರಿಲಾಯನ್ಸ್ ಜೀಯೋ ಪ್ರೈಮ್ ಸದಸ್ಯತ್ವಕ್ಕೆ ಸ್ಪರ್ಧೆ ಒಡ್ಡಲು ಈ ಆಫರನ್ನು ಸರಕಾರಿ ಸ್ವಾಮ್ಯದ ಕಂಪನಿ ಬಿಡುಗಡೆ ಮಾಡಿದೆ.
ಈಗಾಗಲೇ ಏರ್ಟೆಲ್ ಮತ್ತು ವೊಡಾಫೋನ್ ಕಂಪೆನಿಗಳೂ ಜಿಯೋಗೆ ಸ್ಪರ್ಧೆ ಒಡ್ಡಲು ದಿನಕ್ಕೆ 1 ಜಿಬಿ ಡೇಟಾ ನಿಡುವ ಪ್ಲಾನುಗಳನ್ನು ಬಿಡುಗಡೆ ಮಾಡಿವೆ. ಈ ಮೂಲಕ ಎಲ್ಲಾ ಕಂಪೆನಿಗಳು ಒಟ್ಟಾಗಿ ಜಿಯೋವನ್ನು ಎದುರಿಸಲು ಸಜ್ಜಾಗಿವೆ.
-
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ












Click it and Unblock the Notifications