ವಿಡಿಯೋ: ಉಮಾ ಭಾರತಿ ನೋಡಿ ಕಣ್ಣೀರಿಟ್ಟ ಸಾಧ್ವಿ ಪ್ರಜ್ಞಾ
ಭೋಪಾಲ್, ಏಪ್ರಿಲ್ 29: ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಬಿಜೆಪಿ ನಾಯಕಿ ಉಮಾ ಭಾರತಿಯವರನ್ನು ಕಂಡು ಕಣ್ಣೀರಿಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ದಿಗ್ವಿಜಯ್ ಸಿಂಗ್ ಭಯೋತ್ಪಾದಕ ಎಂದ ಪ್ರಜ್ಞಾಗೆ ಚು.ಆಯೋಗ ನೋಟಿಸ್
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವೆ ಉಮಾ ಭಾರತಿ ಅವರು ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಭೋಪಾಲ್ ನಲ್ಲಿ ಭೇಟಿಯಾದರು. ಕಾರಿನಲ್ಲಿ ಕುಳಿತಿದ್ದ ಪ್ರಜ್ಞಾ ಅವರ ಮುಖವನ್ನು ತಮ್ಮ ಬೊಗಸೆಯಲ್ಲಿ ಉಮಾ ಭಾರತಿ ಅವರು ಹಿಡಿಯುತ್ತಿದ್ದಂತೆಯೇ ಸಾಧ್ವಿ ಭಾವುಕರಾಗಿ ಬಿಕ್ಕಿದರು. ನಂತರ ಉಮಾಭಾರತಿ ಅವರು ಸಾಧ್ವಿ ಅವರನ್ನು ಸಂತೈಸಿದರು.
#WATCH Madhya Pradesh: Pragya Singh Thakur, BJP's LS candidate from Bhopal breaks down while meeting Union Minister and senior BJP leader Uma Bharti in Bhopal. pic.twitter.com/SqcvJPCfnZ
— ANI (@ANI) April 29, 2019
ಭೋಪಾಲ್ ನಲ್ಲಿ ಸಾಧ್ವಿ ಅವರನ್ನು ಅಭ್ಯರ್ಥಿ ಎಂದು ಘೋಷಿಸುತ್ತಿದ್ದಂತೆಯೇ ವಿಪಕ್ಷಗಳು ಬಿಜೆಪಿ ಮೇಲೆ ಸಾಕಷ್ಟು ವಾಗ್ದಾಳಿ ನಡೆಸಿತ್ತು. ಅಂತೆಯೇ ಚುನಾವಣಾ ಪ್ರಚಾರದ ಸಮಯದಲ್ಲಿ ಸಾಧ್ವಿ ಅವರೂ ಸಾಕಷ್ಟು ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದರು. 'ನನ್ನ ಶಾಪದಿಂದಲೇ ಹೇಮಂತ್ ಕರ್ಕರೆ ಮೃತರಾಗಿದ್ದು' 'ದಿಗ್ವಿಜಯ್ ಸಿಂಗ್ ಭಯೋತ್ಪಾದಕ' ಎಂಬಿತ್ಯಾದಿ ವಿವಾದಾತ್ಮಕ ಹೇಳಿಕೆಯಿಂದಾಗಿ ಸಾಧ್ವಿ ಚುನಾವಣಾ ಆಯೋಗದಿಂದ ನೋಟಿಸ್ ಸಹ ಪಡೆದಿದ್ದರು.
ಚುನಾವಣೆಯಿಂದ ಸಾಧ್ವಿ ಪ್ರಗ್ಯಾ ಅನರ್ಹತೆ: ನಮಗೆ ಅಧಿಕಾರ ಇಲ್ಲ ಎಂದ ಎನ್ಐಎ ಕೋರ್ಟ್
2008 ರ ಮಾಲೇಗಾಂವ್ ಸ್ಫೋಟದ ಆರೋಪಿಯಾಗಿ ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿದ್ದ ಸಾಧ್ವಿ ಜಾಮೀನಿನ ಮೇಲೆ ಹೊರಬಂದಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಗೆ ಬಿಜೆಪಿ, ಸಾಂಧ್ವಿ ಅವರಿಗೆ ಮಧ್ಯಪ್ರದೇಶದ ಭೋಪಾಲ್ ನಿಂದ ಟಿಕೆಟ್ ನೀಡಿದೆ. ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರನ್ನು ಸಾಧ್ವಿ ಎದುರಿಸಲಿದ್ದಾರೆ.