ಜೆಡಿಎಸ್ ನ ಬೆಳವಣಿಗೆಯಿಂದ ಬೇಸತ್ತ ವೈಎಸ್ ವಿ ದತ್ತ
ಬೆಂಗಳೂರು, ಮೇ 31: ಎಚ್.ಡಿ.ದೇವೇಗೌಡರ ಮಾನಸ ಪುತ್ರ ಅಂತಲೇ ಗುರುತಿಸಿಕೊಂಡಿರುವ ವೈಎಸ್ ವಿ ದತ್ತ ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆಗಳಿಂದ ಬೇಸರಗೊಂಡಿದ್ದಾರಾ? ಹೌದು, ಎನ್ನುತ್ತಿವೆ ಮೂಲಗಳು. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಸೋಲನುಭವಿಸಿದ್ದರು.
ಆ ನಂತರ ತಮ್ಮ ಸೋಲಿನ ಪರಾಮರ್ಶೆ ಮಾಡುತ್ತಾ, ಪಕ್ಷದೊಳಗೆ ಕೆಲವರಿಗೆ ನನ್ನ ಗೆಲುವು ಬೇಕಾಗಿರಲಿಲ್ಲ ಎಂದರು.
ಇನ್ನು ಸೈದ್ಧಾಂತಿಕವಾಗಿ ದೇವೇಗೌಡರ ವಿಚಾರಧಾರೆಗಳಿಗೆ ಹತ್ತಿರವಾಗಿರುವ ದತ್ತ ಅವರು ಕುಮಾರಸ್ವಾಮಿ ಸಿದ್ಧಾಂತ- ಆಲೋಚನೆಗಳಿಗೆ ಸ್ವಲ್ಪ ದೂರ. ವಿವಿಧ ಸಂದರ್ಭದಲ್ಲಿ ಸಿದ್ಧಾಂತದ ವಿಚಾರ ಬಂದಾಗ ದೇವೇಗೌಡರ ನಿಲವನ್ನು ಒಪ್ಪುವ ದತ್ತ, ಇತರರನ್ನು ಸಮರ್ಥಿಸಿಕೊಂಡವರಲ್ಲ.
ಇದೀಗ ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆ ಸ್ವತಃ ದತ್ತ ಅವರಿಗೆ ಬೇಸರ ತರಿಸಿದಂತೆ ಇದೆ. ಈ ಬಗ್ಗೆ ಪ್ರಶ್ನೆ ಮಾಡಲು ಒನ್ಇಂಡಿಯಾ ಕನ್ನಡ ದತ್ತ ಅವರನ್ನು ಮಾತನಾಡಿಸಿತು. "ನಾನು ಇಪ್ಪತ್ತನೇ ವಯಸ್ಸಿನಲ್ಲಿ ಈ ಪಕ್ಷದೊಳಗೆ ಬಂದೆ. ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರ ಮಧ್ಯೆ ಅಸಮಾಧಾನ ಬಂದಾಗ ಜಾತಿ ನೋಡದೆ ಗೌಡರ ಜತೆ ನಿಂತೆ. ಅದಕ್ಕೆ ಸೈದ್ಧಾಂತಿಕ ಕಾರಣ ಇದೆ" ಎಂದರು.

ಈ ಹಿಂದೆ ಪಕ್ಷದಿಂದ ನನ್ನನ್ನು ಎಂಎಲ್ ಸಿ ಮಾಡಲಾಯಿತು. ಆ ನಂತರ ಒಂದು ಕ್ಷೇತ್ರ ಆಯ್ಕೆ ಮಾಡಿಕೊಂಡು ಕೆಲಸ ಮಾಡಬೇಕು ಅಂತ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನಿಂತೆ. ಅಲ್ಲಿ ಒಮ್ಮೆ ಗೆದ್ದೆ. ಆದರೆ ಈ ಬಾರಿ ಪಕ್ಷದೊಳಗಿನ ಕೆಲವರು ದ್ರೋಹ ಬಗೆದರು. ನನ್ನ ವಿರುದ್ಧ ಕೆಲಸ ಮಾಡಿದರು. ಇದರಿಂದ ಮನಸಿಗೆ ಘಾಸಿಯಾಗಿದೆ ಎಂದು ದತ್ತ ಹೇಳಿದರು.
ಈ ವಿಚಾರವಾಗಿ ದೇವೇಗೌಡರ ಜತೆಗೆ ಮಾತನಾಡುವುದಕ್ಕೆ ಶುಕ್ರವಾರ ಹೋಗುತ್ತಿದ್ದೇನೆ. ನನ್ನಂಥ ಸಿದ್ಧಾಂತ ಇರುವ ಸಾಮಾನ್ಯ ಕಾರ್ಯಕರ್ತನಿಂದ ಪಕ್ಷಕ್ಕೆ ಯಾವುದೇ ಉಪಯೋಗ ಇಲ್ಲ ಅನ್ನೋದಾದರೆ ಅಂತರ ಕಾಯ್ದುಕೊಂಡು ದೂರ ಇದ್ದು ಬಿಡುವುದೇ ಒಳ್ಳೆಯದಲ್ಲವಾ? ಎಂದವರೇ, ಮಾತು ಮುಗಿಸಿದರು ದತ್ತ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications