Get Updates
Get notified of breaking news, exclusive insights, and must-see stories!

ಬೆಂಗಳೂರು ದೊಡ್ಡಕೆರೆ ಆವರಣದಲ್ಲಿ ಸಸಿ ನೆಟ್ಟು ಪರಿಸರ ದಿನ ಆಚರಣೆ

ಬೆಂಗಳೂರು, ಜೂನ್ 6: ವಿಶ್ವ ಪರಿಸರ ದಿನದ ನಿಮಿತ್ತ ಬೆಂಗಳೂರು ಮೂಲದ ಎನ್ ಜಿ ಒ ಯುನೈಟೆಡ್ ವೇ ಬೆಂಗಳೂರು ಮತ್ತು ಬಿಬಿಎಂಪಿ ಸಹಯೋಗದಲ್ಲಿ ಸದ್ಗುರು ಸಾಯಿನಾಥ್ ಶಾಲೆಯ 150 ಮಕ್ಕಳಿಂದ ಸಸಿ ನೆಡುವ ಕಾರ್ಯಕ್ರಮ ಬೆಂಗಳೂರಿನ ಕುಡ್ಲು ದೊಡ್ಡಕೆರೆ ಸಮಿಪ ನಡೆಯಿತು.

600 ಸಸಿಗಳನ್ನು ನೆಟ್ಟ ಮಕ್ಕಳಿಗೆ ಪರಿಸರ ರಕ್ಷಣೆ, ಸಸಿ ಬೆಳೆಸುವ ಮಹತ್ವವನ್ನು ತಿಳಿಸಿಕೊಡಲಾಯಿತು. ಯುನೈಟೆಡ್ ವೇ ಬೆಂಗಳೂರು ಎನ್ ಜಿ ಓದ ಸಿಇಒ ಮನಿಶ್ ಮೈಕಲ್ ಮಾತನಾಡಿ, ನಮ್ಮ ಭವಿಷ್ಯವಾದ ಈ ಮಕ್ಕಳನ್ನು ಉತ್ತಮ ಸಂಸ್ಕಾರ ನೀಡಿ ಬೆಳೆಸುವ ಮೂಲಕ ಅವರು ಸಮಾಜಕ್ಕೆ ಮಾದರಿಯಾಗುವಂತೆ ಮಾಡಬೇಕಿದೆ ಎಂದರು. ಅವರಿಗೆ ಪರಿಸರದ ಮಹತ್ವವನ್ನು ತಿಳಿಸಿಕೊಡುವುದು ಮುಖ್ಯ ಎಂದರು.[ಜಾಗತಿಕ ತಾಪಮಾನ ತಗ್ಗಿಸಲು ಪಣತೊಡೋಣ: ಅನಂತ ಕುಮಾರ್]

World Environment Day Celebration by school children in bengaluru

40 ಎಕರೆಯಷ್ಟು ವಿಶಾಲವಾದ ದೊಡ್ಡಕೆರೆಯನ್ನು ವೇಕ್ ದ ಲೇಕ್ ಕ್ಯಾಂಪೇನ್ ಮೂಲಕ ಸ್ವಚ್ಛಗೊಳಿಸಲಾಗುತ್ತಿದ್ದು, ಈ ಕೆರೆಯ ಸುತ್ತ ವಾಕಿಂಗ್ ಪಾತ್ ನಿರ್ಮಿಸುವ ಜವಾಬ್ದಾರಿಯನ್ನು ಯುನೈಟೆಡ್ ವೇ ಆಫ್ ಬೆಂಗಳೂರು ಹೊತ್ತಿತ್ತು. ಇದೀಗ ಈ ಕೆರೆ ಸುತ್ತ ಸಸಿಗಳನ್ನು ಬೆಳೆಸುವ ಮೂಲಕ ಹಸಿರು ಬೆಂಗಳೂರಿಗೆ ನಾಂದಿ ಹಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+