ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ವಿಲ್ಸನ್ ಗಾರ್ಡನ್ ಚಿತಾಗಾರ ತಾತ್ಕಾಲಿಕ ಬಂದ್

|
Google Oneindia Kannada News

ಬೆಂಗಳೂರು, ಮೇ 20; ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರ ಮರಣ ಹೆಚ್ಚುತ್ತಲೇ ಇದೆ. ಮೇ 19ರ ವರದಿಯಂತೆ 218 ಜನರು ನಗರದಲ್ಲಿ ಮೃತಪಟ್ಟಿದ್ದಾರೆ. ಚಿತಾಗಾರಗಳ ಮುಂದೆ ಜನರು ಅಂತ್ಯ ಸಂಸ್ಕಾರಕ್ಕಾಗಿ ಕಾಯಬೇಕಿದೆ.

ವಿಲ್ಸನ್ ಗಾರ್ಡನ್‌ನಲ್ಲಿರುವ ಚಿತಾಗಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮೇ 20 ರಿಂದ 27ರ ತನಕ ಸ್ಮಶಾನವನ್ನು ಬಂದ್ ಆಗಿರುತ್ತದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು; ಸುಮನಹಳ್ಳಿ ಚಿತಾಗಾರ ತಾತ್ಕಾಲಿಕವಾಗಿ ಬಂದ್ಬೆಂಗಳೂರು; ಸುಮನಹಳ್ಳಿ ಚಿತಾಗಾರ ತಾತ್ಕಾಲಿಕವಾಗಿ ಬಂದ್

ಬನಶಂಕರಿ ಮತ್ತು ಸುಮನಹಳ್ಳಿ ಚಿತಾಗಾರವನ್ನು ಸಹ ರಿಪೇರಿ ಕೆಲಸಗಳಿಗಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದರಿಂದಾಗಿ ದಕ್ಷಿಣ ಬೆಂಗಳೂರಿನ ಜನರು ಅಂತ್ಯ ಸಂಸ್ಕಾರಕ್ಕಾಗಿ ಕಾಯುವುದು ಅನಿವಾರ್ಯವಾಗಲಿದೆ.

ಕೋವಿಡ್; ಬೆಂಗಳೂರು ಉತ್ತರದಲ್ಲಿ ತೆರೆದ ಚಿತಾಗಾರ ಸಿದ್ಧ ಕೋವಿಡ್; ಬೆಂಗಳೂರು ಉತ್ತರದಲ್ಲಿ ತೆರೆದ ಚಿತಾಗಾರ ಸಿದ್ಧ

 Wilson Garden Crematorium Will Be Closed From May 20 To 27

ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರ ಆರಂಭವಾದ ಬಳಿಕ ಚಿತಗಾರಗಳ ಮೇಲೆ ಹೆಚ್ಚಿನ ಹೊರೆ ಬಿದ್ದಿದ್ದೆ. ಆದ ಕಾರಣ ರಿಪೇರಿ ಕೆಲಸಗಳಿಗಾಗಿ ಅವುಗಳನ್ನು ಮುಚ್ಚಲಾಗಿದೆ.

ಭಾರತದಲ್ಲಿ ಭೀತಿ: ಒಂದೇ ದಿನ 4529 ಕೊರೊನಾ ರೋಗಿಗಳು ಸಾವು! ಭಾರತದಲ್ಲಿ ಭೀತಿ: ಒಂದೇ ದಿನ 4529 ಕೊರೊನಾ ರೋಗಿಗಳು ಸಾವು!

ಬನಶಂಕರಿ, ಮೇದಿ ಅಗ್ರಹಾರ, ಕೂಡ್ಲು, ಪಣತ್ತೂರು, ಕೆಂಗೇರಿ, ಸುಮನಹಳ್ಳಿ, ಪೀಣ್ಯ ಚಿತಾಗಾರಗಳನ್ನು ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರಕ್ಕಾಗಿ ಬಳಕೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ.

ಈ ಚಿತಾಗಾರಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಲು ಬಿಬಿಎಂಪಿ ಮಾರ್ಷಲ್‌ಗಳನ್ನು ನೇಮಕ ಮಾಡಿದೆ. ಅಂತ್ಯಸಂಸ್ಕಾರಕ್ಕೆ ಆಗಮಿಸುವವರು ಸಹ ಪಿಪಿಇ ಕಿಟ್ ಧರಿಸಬೇಕು ಎಂದು ಸೂಚನೆ ಕೊಡಲಾಗಿದೆ.

Recommended Video

ಒಟ್ಟು ಸೊಂಕೀತರ ಸಂಖ್ಯೆ ಎಷ್ಟು ಗೊತ್ತಾ? | Oneindia Kannada

ಅಂತ್ಯಸಂಸ್ಕಾರಕ್ಕೆ ಭಾಗವಹಿಸುವ ಜನರಿಗೆ ಸಹ ನಿರ್ಬಂಧ ವಿಧಿಸಲಾಗಿದೆ. ಹಿಂದಿನಂತೆ 20 ಜನರು ಪಾಲ್ಗೊಳ್ಳಲು ಅವಕಾಶವಿಲ್ಲ. ಕೋವಿಡ್ 2ನೇ ಅಲೆ ಆರಂಭವಾದ ಅಂತ್ಯ ಸಂಸ್ಕಾರವನ್ನು ಉಚಿತವಾಗಿ ಮಾಡಲು ಅವಕಾಶವಿದೆ.

English summary
Bruhat Bengaluru Mahanagara Palike (BBMP) said that Wilson Garden crematorium will be closed from May 20 to May 27 for repair work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X