ಅಕ್ಷಯ ತೃತೀಯ ಬಗ್ಗೆ ಜನ ಏನಂತಾರೆ?
ಆಭರಣ ಖರೀದಿಗೆ ಯಾವುದೇ ಸೀಸನ್ ಇಲ್ಲ.ಯಾವ ದಿನಗಳಲ್ಲೂ ಖರೀದಿಸಬಹುದು. ಹಬ್ಬದ ಸಂದರ್ಭದಲ್ಲಿ ಖರೀದಿ ಹೆಚ್ಚಾಗಿರುತ್ತದೆ. ಅದರಲ್ಲೂ ಅಕ್ಷಯ ತೃತೀಯದಂದು ಕೇಳುವುದೇ ಬೇಡ.ಯಾವಾಗಲೂ ಇಲ್ಲದ ಬೇಡಿಕೆ ಆ ದಿನ ಚಿನ್ನಕ್ಕೆ ಬಂದಿರುತ್ತದೆ. ಆಭರಣದ ಅಂಗಡಿಗಳು ಗ್ರಾಹಕರಿಂದ ತುಂಬಿರುತ್ತದೆ.[ಅಕ್ಷಯ ತೃತೀಯದಂದು ಚಿನ್ನ ಖರೀದಿ ಯಾಕೆ]
ಅಕ್ಷಯ ತೃತೀಯದಂದು ಆಭರಣ ಅಂಗಡಿಗಳು ವಿಶೇಷ ಆಫರ್ಗಳನ್ನು ಪ್ರಕಟಿಸುವ ಮೂಲಕ ಗ್ರಾಹಕರನ್ನು ಸೆಳೆದರೂ, ಗ್ರಾಹಕರು ಆಭರಣ ಖರೀದಿಸಲು ಪ್ರತ್ಯೇಕ ಕಾರಣಗಳಿವೆ. ಯಾವೆಲ್ಲಾ ಕಾರಣಕ್ಕೆ ಗ್ರಾಹಕರು ಆಭರಣ ಖರೀದಿಸುತ್ತಿದ್ದಾರೆ ಎನ್ನುವುದಕ್ಕೆ ಒನ್ ಇಂಡಿಯಾ ಕೆಲ ಗ್ರಾಹಕರನ್ನು ಮಾತನಾಡಿಸಿದ್ದು ಅವರ ಹೇಳಿಕೆಗಳನ್ನು ಇಲ್ಲಿ ನೀಡಲಾಗಿದೆ.

ತಾಯಿಗೆ ಉಡುಗೊರೆ :
"ಕಳೆದ ತಿಂಗಳಷ್ಟೇ ನನಗೆ ಪ್ರೊಮೋಷನ್ ಆಗಿದ್ದು ಅಮ್ಮನಿಗೆ ಸರ ತೆಗೆದುಕೊಡಬೇಕು ಎಂದು ಯೋಚಿಸಿದ್ದೇನೆ. ಆದರೆ ಯಾವ ದಿನ ಖರೀದಿ ಮಾಡಬೇಕು ಎಂದು ನಿರ್ಧರಿಸಿರಲಿಲ್ಲ.ಮೊನ್ನೆ ಸ್ನೇಹಿತರು ಅಕ್ಷಯ ತೃತೀಯ ಮೇ ಮೊದಲ ವಾರದಲ್ಲಿ ಬರಲಿದೆ ಎಂದು ಹೇಳಿದ್ದರು. ಹಾಗಾಗಿ ಇದೇ ದಿನದಂದು ಚಿನ್ನವನ್ನು ಖರೀದಿ ಮಾಡಲಿದ್ದೇನೆ" -ರಾಜೇಶ್, ಮ್ಯಾನೇಜರ್

ಹಿಂದಿನಿಂದಲೂ ಬಂದ ಸಂಪ್ರದಾಯ:
''ನಮ್ಮ ಕುಟುಂಬದಲ್ಲಿ ಹಿಂದಿನಿಂದಲೂ ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವ ಸಂಪ್ರದಾಯವಿದೆ. ನಾನು ಸಣ್ಣವಳಿದ್ದಾಗಲೂ ಚಿನ್ನವನ್ನು ತಂದೆ, ತಾಯಿ ಖರೀದಿಸುತ್ತಿದ್ದರು.ಈಗ ಮದುವೆಯಾದ ಬಳಿಕವೂ ಈ ಸಂಪ್ರದಾಯವನ್ನು ಮುಂದುವರೆಸುತ್ತಿದ್ದು ಚಿನ್ನ ಖರೀದಿಸುತ್ತಿದ್ದೇವೆ''- ಸಂಧ್ಯಾ,ಗೃಹಿಣಿ

ಲಾಭವಾಗುತ್ತಂತೆ ಹಾಗೇ ಖರೀದಿ:
"ನಾನು ಚಿನ್ನವನ್ನು ಖರೀದಿಸಿದ್ದರೂ ಅಕ್ಷಯ ತೃತೀಯದಂದು ಖರೀದಿಸಿಲ್ಲ.ಆದರೆ ನನ್ನ ಕೆಲ ಸ್ನೇಹಿತರು ಈ ದಿನದಂದೇ ಚಿನ್ನವನ್ನು ಖರೀದಿಸುತ್ತಿದ್ದು ಒಳ್ಳೇದಾಗುತ್ತದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಈ ವರ್ಷ ಪ್ರಥಮ ಬಾರಿಗೆ ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುತ್ತಿದ್ದೇನೆ" - ಮಾನಸಿ,ಸಾಫ್ಟ್ವೇರ್ ಉದ್ಯೋಗಿ

ಪುರಾಣ ಕಥೆ ಗೊತ್ತಿಲ್ಲ
"ಅಕ್ಷಯ ತೃತೀಯದ ಬಗ್ಗೆ ಪುರಾಣ ಕಥೆ ಗೊತ್ತಿಲ್ಲ. ಆದರೆ ಆ ದಿನ ಏನೇ ಖರೀದಿಸಿದ್ದರೂ ಅದು ನಾಶವಾಗುದಿಲ್ಲವಂತೆ. ಹಾಗಾಗಿ ಈ ಬಾರಿ ಚಿನ್ನ ಖರೀದಿಸಲು ಮುಂದಾಗಿದ್ದೇನೆ" - ವಿನುತಾ, ಬ್ಯಾಂಕ್ ಉದ್ಯೋಗಿ

ಪತ್ನಿಗೆ ಉಡುಗೊರೆ
"ನಾನು ಹೊಸದಾಗಿ ಮದುವೆಯಾಗಿದ್ದೇನೆ. ಪತ್ನಿಗೆ ಉಡುಗೊರೆ ನೀಡಲು ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡಲಿದ್ದು ಈಗಾಗಲೇ ಆರ್ಡರ್ ಮಾಡಿದ್ದೇನೆ" -ರಮೇಶ್, ಗುತ್ತಿಗೆದಾರರು

ಪ್ರತಿ ವರ್ಷ ಖರೀದಿ:
"ನಾವು ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವ ಪರಿಪಾಠವನ್ನು ಇಟ್ಟುಕೊಂಡಿಲ್ಲ. ಪ್ರತಿ ವರ್ಷ ಈ ದಿನ ಒಂದೊಂದು ವಸ್ತುವನ್ನು ಖರೀದಿಸುತ್ತಿದ್ದು ಕಳೆದ ವರ್ಷ ಕಾರು ಖರೀದಿಸಿದ್ದೇವು. ಈ ವರ್ಷ ಮಗಳಿಗೆ ಮದುವೆ ಇರುವುದರಿಂದ ಬಂಗಾರ ಖರೀದಿ ಮಾಡುತ್ತಿದ್ದೇವೆ"- ಪದ್ಮನಾಭ ರಾವ್, ಕೃಷಿಕರು

ಕಾಕತಾಳಿಯವೋ ಗೊತ್ತಿಲ್ಲ ಒಳ್ಳೆಯದಾಗುತ್ತಿದೆ
"ನಾವು ಕಳೆದ ಆರು ವರ್ಷಗಳಿಂದ ಬಂಗಾರ ಖರೀದಿ ಮಾಡುತ್ತಿದ್ದೇವೆ. ಕಾಕತಾಳಿಯವೋ ಏನೋ ಗೊತ್ತಿಲ್ಲ. ನಮಗೆ ಒಳ್ಳೆಯದಾಗುತ್ತಿದೆ. ಹೀಗಾಗಿ ಈ ವರ್ಷವು ಮಿಸ್ ಮಾಡದೇ ಬಂಗಾರ ಖರೀದಿಸುತ್ತಿದ್ದೇವೆ"- ಲಾವಣ್ಯ, ಗೃಹಿಣಿ
-
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು












Click it and Unblock the Notifications