ಎನ್ ಜಿಇಎಫ್ ಉದ್ಯೋಗಿಗಳ ಕೊಡುಗೆ 'ತಾಂತ್ರಿಕ ಪದಕೋಶ' ಏನಾಯಿತು?
ಎನ್ ಜಿಇಎಫ್ ಕನ್ನಡ ಮಣ್ಣಿನ ಕಾರ್ಖಾನೆ. ಅಲ್ಲಿನ ನೌಕರರೆಲ್ಲ ಸೇರಿ ಮಾಡಿಕೊಂಡಿದ್ದ ತಾಂತ್ರಿಕ ಪದಕೋಶ ಕನ್ನಡಕ್ಕೆ ಅದ್ಭುತವಾದ ಕೊಡುಗೆ ಆಗಬಲ್ಲ ನಿಘಂಟು. ಅದೀಗ ಏನಾಗಿದೆ ಎಂದು ತಿಳಿದು, ಮತ್ತಷ್ಟು-ಮಗದಷ್ಟು ಪದ ಸೇರಿಸಿ ಪುನರ್ ಮುದ್ರಣವಾಗಬೇಕು.
ಬೆಂಗಳೂರು, ಡಿಸೆಂಬರ್ 20: ಎನ್ ಜಿಇಎಫ್ ಅಂದ ತಕ್ಷಣ ದೊಡ್ಡ ಸಂಖ್ಯೆಯ ಜನರಿಗೆ ನೆನಪಾಗುವುದು ಕನ್ನಡ ಮಣ್ಣಿನಲ್ಲಿ ನೆಲೆ ನಿಂತು, ರಾಷ್ಟ್ರ ಮಟ್ಟದಲ್ಲಿ ಮಾತಾಗಿದ್ದ ಕಾರ್ಖಾನೆ. ಅಲ್ಲಿ ಕನ್ನಡ ಬಳಕೆ, ಕನ್ನಡಿಗರು ಹಾಗೂ ಕಲೆ-ಸಾಂಸ್ಕೃತಿಕ ಚಟುವಟಿಕೆಗಳು ಕೂಡ ಮರೆಯುವಂಥದ್ದಲ್ಲ.
ಆ ಕಾರ್ಖಾನೆಯಲ್ಲಿ ತಾಂತ್ರಿಕ ಹಾಗೂ ವಾಣಿಜ್ಯ ಪದಗಳನ್ನು ಸಹ ಕನ್ನಡದಲ್ಲಿ ಬಳಸುತ್ತಿದ್ದರು. ಅದಕ್ಕಾಗಿ ಪುಸ್ತಕವೊಂದನ್ನು ಮೀಸಲಿಟ್ಟು, ಅಲ್ಲಿನ ಎಲ್ಲ ನೌಕರರು ತಮ್ಮಿಂದ ಆದ ಒಂದೋ, ಎರಡೋ, ಹತ್ತೋ ಕನ್ನಡದ ಪದಗಳನ್ನು ಕೊಡುಗೆ ನೀಡುತ್ತಿದ್ದರು. ಅಂಥ ಎಲ್ಲ ಪದಗಳನ್ನು ಒಗ್ಗೂಡಿಸಿ 'ಕನ್ನಡ ತಾಂತ್ರಿಕ ಪದಕೋಶ' ಎಂಬ ನಿಘಂಟನ್ನೇ ಮಾಡಿದ್ದರು.[ಡಿಸೆಂಬರ್ 24, 25ರಂದು ಮಂಗಳೂರಲ್ಲಿ 'ಜನನುಡಿ' ಸಾಹಿತ್ಯ ಸಮಾವೇಶ]
ಅಲ್ಲಿನ ನೌಕರರಿಗೆ ತಾಂತ್ರಿಕ ಜ್ಞಾನ, ಪದ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ಇವೆಲ್ಲವನ್ನೂ ನೆನಪಿಸಿಕೊಂಡಿರುವ ಎನ್ ಜಿಇಎಫ್ ನ ನಿವೃತ್ತ ಉದ್ಯೋಗಿ-ದಾವಣಗೆರೆಯ ಮುರಳಿ ಅವರು, ತ.ರಂ.ಕೃಷ್ಣೇಗೌಡ ಎಂಬುವರು ಒಬ್ಬರು ಕಾರ್ಖಾನೆಯಲ್ಲಿದ್ದರು. ಅವರಿಗೆ ಕನ್ನಡದ ಬಗ್ಗೆ ಅಪಾರ ಪ್ರೇಮ. ಈ ರೀತಿ ತಾಂತ್ರಿಕ ಪದಕೋಶದ ಆಲೋಚನೆ ಅವರದಾಗಿತ್ತು.

ಆಗ ಎನ್ ಜಿಇಎಫ್ ನಲ್ಲಿ ಕೆಲಸ ಮಾಡುತ್ತಿದ್ದ ಡಾ.ಸಂಧ್ಯಾರೆಡ್ಡಿ ಹಾಗೂ ಪ್ರತಿಭಾ ನಂದಕುಮಾರ್ ಅವರು ಪದಕೋಶದ ಕೆಲಸವನ್ನು ಹೆಚ್ಚು ಪರಿಣಾಮಕಾರಿಯಾಗಿ, ಪ್ರಯೋಜನಕಾರಿಯಾಗಿ ಮಾಡಿದರು. ಎಷ್ಟೋ ಐಎಎಸ್ ಅಧಿಕಾರಿಗಳ ವಿರೋಧ ಎದುರಿಸಿಯೂ ಕೃಷ್ಣೇಗೌಡರು ಅದ್ಭುತ ಕೆಲಸ ಮಾಡಿದರು ಎಂದು ಅವರು ಹೇಳಿದರು.
ಅಂಥ ಅದ್ಭುತವಾದ ತಾಂತ್ರಿಕ ಪದಕೋಶ ಎಲ್ಲಿ ದೂಳು ಕುಡಿಯುತ್ತಿದೆಯೋ ಗೊತ್ತಿಲ್ಲ. ಆ ಪದಕೋಶಕ್ಕೆ ಎನ್ ಜಿಇಎಫ್ ನೌಕರರ ಕೊಡುಗೆ ಇದೆ. ಕನ್ನಡದಲ್ಲಿ ಅಂಥದ್ದೊಂದು ಕೆಲಸವನ್ನು ಮಾಡುವುದು ಖಂಡಿತಾ ಸಲೀಸಲ್ಲ. ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿದ್ದ ನಲ್ಲೂರು ಪ್ರಸಾದ್ ಅವರ ಬಳಿ ಎರಡು ಬಾರಿ ಈ ಬಗ್ಗೆ ಪ್ರಸ್ತಾವ ಮಾಡಿದ್ದರಂತೆ ನಿವೃತ್ತ ಉದ್ಯೋಗಿ ಮುರಳಿ.[ಮೈಸೂರಿನಲ್ಲಿ 83ನೇ ಸಾಹಿತ್ಯ ಸಮ್ಮೇಳನ: ಸಿಹಿ ಹಂಚಿ ಸಂಭ್ರಮಾಚರಣೆ]

ಆದರೆ, ಯಾವುದೇ ಕೆಲಸವಾಗಿಲ್ಲ. ತಾಂತ್ರಿಕ ಪದಕೋಶವನ್ನು ಕಾಪಾಡುವ ಕೆಲಸ ಆಗಬೇಕು. ಅದರರ್ಥ, ಯಾರ ಬಳಿಯಾದರೂ ಇರಬಹುದಾದ ಆ ಕೋಶವನ್ನು ಪುನರ್ ಮುದ್ರಿಸುವ, ಅದಕ್ಕೆ ಮತ್ತಷ್ಟು-ಮಗದಷ್ಟು ತಾಂತ್ರಿಕ ಪದಗಳನ್ನು ಸೇರಿಸಿ, ಶ್ರೀಮಂತಗೊಳಿಸುವ ಕೆಲಸವಾಗಬೇಕು. ಕವಯಿತ್ರಿ ಪ್ರತಿಭಾ ನಂದಕುಮಾರ್ ಅಂಥವರು ಅಂದಿನ ಕೆಲಸದಲ್ಲಿ ಭಾಗೀದಾರರು ಆದ್ದರಿಂದ ಅವರ ನೆರವನ್ನು ಪಡೆಯಬಹುದು.
-
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್ನಲ್ಲಿ: ರಾಜಾರಾಂ ತಲ್ಲೂರು ಬರಹ -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC










Click it and Unblock the Notifications