ವಾಹನ ಚಾಲನೆ ಮಾಡುವಾಗ ಯಾವ ದಾಖಲೆಗಳನ್ನು ಕೊಂಡೊಯ್ಯಬೇಕು? ಗೃಹ ಸಚಿವರು ಹೇಳಿದ್ದು ಹೀಗೆ
ವಾಹನ ಚಾಲನೆ ಮಾಡುವಾಗ ಯಾವ ದಾಖಲೆಗಳನ್ನು ಕೊಂಡೊಯ್ಯಬೇಕು..? ಎಂಬ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು, ಫೆಬ್ರವರಿ. 14: ವಾಹನ ಚಾಲನೆ ಮಾಡುವಾಗ ಯಾವ ದಾಖಲೆಗಳನ್ನು ಕೊಂಡೊಯ್ಯಬೇಕು..? ಎಂಬುದು ಯಾವಾಗಲೂ ತಲೆ ಕೊರೆಯುವ ಪ್ರಶ್ನೆ. ಎಷ್ಟು ಬಾರಿ ಯಾರು ಏನೇ ಹೇಳಿದರೂ ಒಂದಲ್ಲ ಒಂದು ದಾಖಲೆಯನ್ನು ಮರೆತುಬಿಡುತ್ತೇವೆ.
ಸಂಚಾರಿ ಪೊಲೀಸರು ವಾಹನ ತಡೆದು ನಿಲ್ಲಿಸಿ ದಾಖಲೆಗಳನ್ನು ಕೇಳಿದಾಗ ಪರದಾಡುತ್ತೇವೆ. ಹೀಗಾಗಿ ಸಚಿವರೇ ಈ ಬ್ಗಗೆ ಮಾಹಿತಿ ನೀಡಿಬಿಟ್ಟರೇ ಒಲ್ಲೆಯದಲ್ಲವೇ ಎಂದು ಅನಿಸಬಹುದು. ಅದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ ಓದಿ.
ವಾಹನ ಚಾಲನೆ ಮಾಡುವಾಗ ಚಾಲಕರು ಯಾವ ದಾಖಲೆಗಳನ್ನು ಕೊಂಡೊಯ್ಯಬೇಕು..? ಎಂಬುದಕ್ಕೆ ಉತ್ತರಿಸಿರುವ ಅವರು, ವಾಹನ ಚಾಲನೆ ಮಾಡುವಾಗ ಈ ಕೆಳಕಂಡ ದಾಖಲೆಗಳನ್ನು ಕೊಂಯೊಯ್ಯಬೇಕು ಎಂದಿದ್ದಾರೆ.

1. ಚಾಲನಾ ಪರವಾನಗಿ
2. ನೋಂದಣಿ ಪ್ರಮಾಣ ಪತ್ರ
3. ಎಮಿಷನ್ ಟೆಸ್ಟ್ ಸರ್ಟಿಫಿಕೆಟ್/ ಪೊಲ್ಯೂಷನ್ ಅಂಡರ್ ಕಂಟ್ರೋಲ್ ಸರ್ಟಿಫಿಕೇಟ್
4. ವಿಮಾ ಪ್ರಮಾಣ ಪತ್ರ
5. ಸಾರಿಗೆ ವಾಹನಗಳ ಸಂದರ್ಭದಲ್ಲಿ ಫಿಟ್ನೆಸ್ ಪ್ರಮಾಣಪತ್ರ, ಪರವಾನಗಿ ಮತ್ತು ತೆರಿಗೆ ಪಾವತಿಸಿದ ಪ್ರಮಾಣ ಪತ್ರ

ಈ ದಾಖಲೆಗಳ ಅಸಲು ದಾಖಲೆಗಳನ್ನು ತೆಗೆದುಕೊಂಡು ಇಟ್ಟುಕೊಂಡಿರಬೇಕು ಅಥವಾ ಡಿಜಿಲಾಕರ್ನಲ್ಲಿ ಇಟ್ಟುಕೊಂಡಿರಬೇಕು. ಇದಲ್ಲದೆ ಎಂಪರಿವಾಹನ್ ಅಪ್ಲಿಕೇಷನ್ನಲ್ಲಿಯೂ ದಾಖಲೆಗಳನ್ನು ತೋರಿಸಬಹುದು.
ಇನ್ನು, ಇತ್ತಿಚೆಗೆ ಎಲ್ಲರೂ ಹೆಚ್ಚಾಗಿ ಡಿಜಿಲಾಕರ್ ಬಳಸುತ್ತಿದ್ದು, ದಾಖಲೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಹೆಚ್ಚಾಗಿ ವಾಹನ ಸವಾರರು ಮರೆಯುವುದು, ಎಮಿಷನ್ ಟೆಸ್ಟ್ ಮಾಡಿಸಿ ಅದರ ಸರ್ಟಿಫಿಕೇಟ್ ಪಡೆಯುವುದು. ಇದರ ಬಗ್ಗೆ ನಿರುತ್ಸಾಹವೋ ಅಥವಾ ಏನೂ ಆಗುವುದಿಲ್ಲ ಎಂಬ ಮೊಂಡು ಧೈರ್ಯವೋ ಹೆಚ್ಚಿನ ವಾಹನ ಚಾಲಕರು ಎಮಿಷನ್ ಟೆಸ್ಟ್ ಮಾಡಿಸುವುದಿಲ್ಲ. ಹೀಗಾಗಿ ಸಂಚಾರಿ ಪೊಲೀಸರ ಬಳಿ ಸಿಲುಕಿಹಾಕಿಕೊಂಡಿರುತ್ತಾರೆ.
ಇದರ ಜೊತೆಗೆ ವಿಮೆ ಕಟ್ಟುವುದು. ಕೊಲವೊಬ್ಬರು ಒಂದು ಬಾರಿ ವಿಮೆ ಮಾಡಿಸಿದ್ದರೇ ಮುಗಿಯಿತು ವರ್ಷ ವರ್ಷ ಅದನ್ನು ರಿನಿವಲ್ ಮಾಡಿಸುವ ಗೋಜಿಗೆ ಹೋಗುವುದೇ ಇಲ್ಲ.
-
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು












Click it and Unblock the Notifications