ಮೇ 27ರಂದು ಪ್ರವೀಣ್ ತೊಗಾಡಿಯಾ ಬೆಂಗಳೂರಿಗೆ
ಬೆಂಗಳೂರು, ಮೇ 24 : ವಿಶ್ವ ಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಕಾರ್ಯಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮೇ 27ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಹಾಗೂ ಬೆಂಗಳೂರು ನಗರ ವಿಎಚ್ ಪಿ ಸಂಘಟನೆ ಮೇ 28ರಂದು ಹಲಸೂರಿನ ಸ್ವಾಮೀ ಯೋಗೇಶ್ವರಾನಂದ ಶಾಲೆಯಲ್ಲಿ ಆಯೋಜಿಸಿರುವ ಗುರು ಗೋವಿಂದ್ ಸಿಂಗ್ ಅವರ 350ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರವೀಣ್ ತೊಗಾಡಿಯಾ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ.[ಪ್ರವೀಣ್ ತೊಗಾಡಿಯಾ ಮಂಗಳೂರು ಪ್ರವೇಶಿಸುವಂತಿಲ್ಲ]

ಈ ಖಾಸಗಿ ಕಾರ್ಯಕ್ರಮದಲ್ಲಿ ತೊಗಾಡಿಯಾ ಅವರ ಭಾಷಣಕ್ಕೆ ಪೊಲೀಸರು ಅನುಮತಿ ನೀಡಿದರೂ, ಪ್ರಚೋದನಕಾರಿ ಭಾಷಣ ಮಾಡಿದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.[ತೊಗಾಡಿಯಾ ಭಾಷಣದ ಎಫೆಕ್ಟ್: ಮನೆ ಮಾರಿದ ಮುಸ್ಲಿಂ ವ್ಯಾಪಾರಿ]












Click it and Unblock the Notifications