ಸ್ಟ್ರೀಂ ರೆಸ್ಟೋರೆಂಟ್ ನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಆತಿಥ್ಯ ನೀಡಿ ಸತ್ಕಾರ
ಬೆಂಗಳೂರು ನವೆಂಬರ್ 14: ಈ ಬಾರಿಯ ಮಕ್ಕಳ ದಿನಾಚರಣೆಯನ್ನು ದೇಶದ ಮೊದಲ ಸ್ಟ್ರೀ ರೆಸ್ಟೊರೆಂಟ್ ಎಂದೇ ಖ್ಯಾತಿ ಪಡೆದಿರುವ ಸ್ಟೋನಿ ಬ್ರೂಕ್ ನಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು. ಸರಕಾರಿ ಶಾಲೆಯ ಹಾಗೂ ಹಿಂದುಳಿದ ಪ್ರದೇಶದ 50 ಕ್ಕೂ ಹೆಚ್ಚು ಮಕ್ಕಳು ಈ ನೂತನ ಹೋಟೇಲ್ ನ ಆತಿಥ್ಯ ಸವಿದು ಸಂತಸ ವ್ಯಕ್ತಪಡಿಸಿದರು.
ಪ್ರಸಿದ್ದ ಹೋಟೆಲ್ ಗಳ ಮುಂದೆ ಹಾದು ಹೋಗುವಾಗ ಈ ಹೋಟೇಲ್ ನಲ್ಲಿ ಒಮ್ಮೆ ಖಾದ್ಯಗಳನ್ನು ಸವಿಯಬೇಕು ಎನ್ನುವ ಸಹಜ ಆಸೆ ಎಲ್ಲರಿಗೂ ಮೂಡಿರುವುದು ಸಹಜ. ಅದರಲ್ಲೂ ಮುಗ್ದ ಮನಸ್ಸಿನ ಮಕ್ಕಳಂತೂ ಅಲ್ಲಿ ಝಗಮಗಿಸುವ ಲೈಟ್ಗಳು, ಖಾದ್ಯಗಳನ್ನು ನೋಡಿ ಅಸೆಪಟ್ಟಿರುತ್ತಾರೆ. ನಗರದ ಬಹಳಷ್ಟು ಮಕ್ಕಳಿಗೆ ಅಂತಹ ಹೋಟೇಲ್ ಗಳಿಗೆ ಹೋಗಿ ಅಲ್ಲಿನ ಅನುಭವ ಪಡೆಯುವುದು ಸಾಧ್ಯವಾಗುವುದಿಲ್ಲ. ಇಂತಹ ಕೆಲವಷ್ಟು ಮಕ್ಕಳ ಸಹಜ ಕುತೂಹಲವನ್ನು ತೀರಿಸುವ ಉದ್ದೇಶದಿಂದ ವಿರೌಡ್ ವೆಂಚರ್ಸ್ ನ ಮಾಲೀಕರಾದ ವಿನಯ್ ವಿ ಒಂದು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರು.
ಝುಳು ಝುಳು ಹರಿಯುವ ನೀರಿನ ಮಧ್ಯೆ ಕುಳಿತು ಖಾದ್ಯಗಳನ್ನು ಸವಿಯುವ ಹಾಗೂ ನೂತನ ಹೋಟೇಲ್ ನ ಅನುಭವ ಪಡೆದ ಮಕ್ಕಳ ಸಂತಸ ಬಣ್ಣಿಸಲಾರದಂತಿತ್ತು.

ಸ್ಟೋನಿ ಬ್ರೂಕ್ ನ ಮಾಲೀಕರಾದ ವಿನಯ್ ವಿ
ಈ ಕಾರ್ಯಕ್ರಮದ ಉದ್ದೇಶದ ಬಗ್ಗೆ ವಿವರಿಸಿದ ಸ್ಟೋನಿ ಬ್ರೂಕ್ ನ ಮಾಲೀಕರಾದ ವಿನಯ್ ವಿ, ಬೆಂಗಳೂರು ನಗರದ ಜನರಿಗೆ ಒಂದು ಒಳ್ಳೆಯ ಅನುಭವ ನೀಡುವ ಉದ್ದೇಶ ನಮ್ಮ ದಾಗಿದೆ. ಈ ಹಿನ್ನಲೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಸ್ಟ್ರೀಂ ರೆಸ್ಟೋರೆಂಟನ್ನು ಪ್ರಾರಂಭಿಸಲಾಯಿತು. ಇದುವರೆಗೂ ಈ ರೆಸ್ಟೋರೆಂಟ್ ಗೆ ಬಹಳಷ್ಟು ಜನರು ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಮಕ್ಕಳ ದಿನಾಚರಣೆಯ ಹಿನ್ನಲೆಯಲ್ಲಿ ಕೆಳ ವರ್ಗದ ಹಾಗೂ ಸರಕಾರಿ ಶಾಲೆಯ ಮಕ್ಕಳೂ ಈ ನೂತನ ಅನುಭವ ಪಡೆಯಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ.

ಇಂಥ ಕಾರ್ಯಕ್ರಮದ ಆಲೋಚನೆ ಹುಟ್ಟಿದ್ದು ಹೇಗೆ?
ಹಲವಾರು ಮಕ್ಕಳು ರೆಸ್ಟೋರೆಂಟ್ ಪ್ರತಿನಿತ್ಯ ಈ ದಾರಿಯಲ್ಲಿ ಸಂಚರಿಸುವಾಗ ಹೊರಗಿನಿಂದ ನೋಡಿಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿ, ಇಂಥದ್ದೊಂದು ಕಾರ್ಯಕ್ರಮ ರೂಪಿಸಬೇಕು ಎನ್ನುವ ಆಲೋಚನೆ ಹುಟ್ಟಿತು ಎಂದು ಸ್ಟೋನಿ ಬ್ರೂಕ್ ನ ಮಾಲೀಕರಾದ ವಿನಯ್ ವಿ ಹೇಳಿದರು.

ಆತಿಥ್ಯ ಸ್ವೀಕರಿಸಿದ ಸರಕಾರಿ ಶಾಲೆಯ ಮಗು
ಸ್ಟೋನಿ ಬ್ರೂಕ್ ನ ಆತಿಥ್ಯ ಸ್ವೀಕರಿಸಿದ ಸರಕಾರಿ ಶಾಲೆಯ ಮಗು ಮಂಜುನಾಥ್ ಮಾತನಾಡಿ, ಹಲವು ಬಾರಿ ಈ ದಾರಿಯಲ್ಲಿ ಹೋಗುತ್ತಿದ್ದಾಗ ಈ ರೆಸ್ಟೋರೆಂಟ್ ನಲ್ಲಿ ಊಟ ಮಾಡಬೇಕು ಎನ್ನುವ ಆಸೆ ಇತ್ತು. ಆದರೆ ಹಲವಾರು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಹೋಟೇಲ್ ನೀರನ ಮಧ್ಯೆ ಕುಳಿತು ನನಗೆ ಇಷ್ಟವಾದ ಆಹಾರ ಸೇವಿಸಿರುವುದು ಬಹಳ ಸಂತಸ ತಂದಿದೆ ಎಂದರು.

ಬರಿಗಾಲಿನಲ್ಲಿ ಹರಿಯುವ ನೀರಿನ ಮಧ್ಯೆ ಕುಳಿತ ಮಕ್ಕಳು
50 ಕ್ಕೂ ಹೆಚ್ಚು ಮಕ್ಕಳು ಬರಿಗಾಲಿನಲ್ಲಿ ಹರಿಯುವ ನೀರಿನ ಮಧ್ಯೆ ಕುಳಿತು ತಮಗಿಷ್ಟವಾದ ಖಾದ್ಯಗಳನ್ನು ಸೇವಿಸಿ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಸ್ಟೋನಿ ಬ್ರೂಕ್ ನ ಮಾಲೀಕರಾದ ವಿನಯ್ ವಿ ಅವರು ನೋಟ್ ಬುಕ್ ಗಳು, ಆಟಿಕೆಗಳು ಹಾಗೂ ಪೆನ್ನುಗಳನ್ನೂ ನೀಡಿ ಸತ್ಕರಿಸಿದರು.
-
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ












Click it and Unblock the Notifications